Don't Miss!
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಟೋರಿಕ್ಷಾ ಓಡಿಸಿ, ಹಾಡುಗಳ ಸಿಡಿ ಹಂಚಿದ ದರ್ಶನ್
ಆಟೋ ರಿಕ್ಷಾ ಚಾಲಕರ ಕುರಿತು ಸಾಕಷ್ಟೂ ಸಿನಿಮಾಗಳು ಬಂದರೂ ಕ್ಲಿಕ್ ಆಗಿದ್ದು ಮಾತ್ರ ತುಂಬಾ ಕಮ್ಮಿ. ಇಂದಿಗೂ ಆಟೋ ರಾಜ ಎಂದರೆ ಶಂಕರ್ ನಾಗ್ ಹೆಸರನ್ನೇ ಎಲ್ಲರೂ ಹೇಳುವುದು ಇದಕ್ಕೆ ಕಾರಣ. ಶಂಕರ್ ಅವರ ಪಾತ್ರ, ಚಾಲಕರಿಗೆ ಆಪ್ತವಾಗಿತ್ತು, ಪಾತ್ರದೊಡನೆ ತಮ್ಮನ್ನು ಹೋಲಿಸಿಕೊಳ್ಳುತ್ತಿದ್ದರು. ಈಗ ಇದೇ ನಿಟ್ಟಿನಲ್ಲಿ ಚಾಲಕರೊಡನೆ ಕಲೆತು, ಆಡಿ ನಲಿದು ಅವರ ಮನಗೆಲ್ಲಲು ದರ್ಶನ್ ನಿರ್ಧರಿಸಿದ್ದಾರೆ.
ಕೆಸಿಎನ್ ಚಂದ್ರಶೇಖರ್ ನಿರ್ಮಾಣದ, ದಿನಕರ್ ತೂಗುದೀಪ್ ನಿರ್ದೇಶನದ , ಚಾಲೆಂಜಿಗ್ ಸ್ಟಾರ್ ದರ್ಶನ್ ನಾಯಕನಾಗಿರುವ , ದೀಪಾ ಸನ್ನಿಧಿ ನಾಯಕಿಯಾಗಿರುವ ಸಾರಥಿ ಚಿತ್ರದ ಧ್ವನಿಸುರುಳಿಗಳು ಇಂದು ಆಟೋ ಚಾಲಕರ ಸಮ್ಮುಖದಲ್ಲಿ ಬಿಡುಗಡೆಗೊಂಡಿದೆ. ಇದೇ ಖುಷಿಯಲ್ಲಿ ಆಟೋ ಚಾಲನೆ ಮಾಡಿದ ದರ್ಶನ್, ಅಲ್ಲಿದ್ದ ನೂರಾರು ಡ್ರೈವರ್ ಗಳ ಮನಗೆದ್ದರು.
ಸಾರಥಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವು ವಿಭಿನ್ನವಾಗಿ, ವಿಶೇಷವಾಗಿ ನಗರದ ರಾಜಾಜಿನಗರದ ಮೈದಾನದಲ್ಲಿ ಆಟೋ ಡ್ರೈವರ್ಗಳ ಸಮ್ಮುಖದಲ್ಲಿ ಬಿಡುಗಡೆಯಾಗಿದೆ. ನಂತರ ಸಾರಥಿ ಸವಾರಿ ಮಲ್ಲೇಶ್ವರಂ, ಮೆಜೆಸ್ಟಿಕ್, ಚಿಕ್ಕಪೇಟೆ ಮುಂತಾದ ಆಟೋ ಸ್ಟಾಂಡ್ಗಳತ್ತ ಸಾಗಿದೆ.
ಆನಂದ್ ಆಡಿಯೋ ಸಂಸ್ಥೆಯಿಂದ ಹೊರಬಂದಿರುವ ಆಡಿಯೋಗೆ ವಿ ಹರಿಕೃಷ್ಣರ ಸಂಗೀತ ನೀಡಿದ್ದಾರೆ. ಆಟೋ ಡ್ರೈವರ್ ಗಳು ಮುಗಿ ಬಿದ್ದು ಚಿತ್ರದ ಹಾಡುಗಳನ್ನು ಕೇಳುತ್ತಿದ್ದಾರಂತೆ. ಆಟೋಚಾಲಕನ ಪಾತ್ರಧಾರಿಯಾಗಿ ದರ್ಶನ್ ಗೆಲ್ಲುತ್ತಾರೋ ಇಲ್ಲವೋ ನೆಚ್ಚಿನ ಸ್ಟಾರ್ ಒಬ್ಬ ತಮ್ಮ ಆಟೋ ಓಡಿಸಿದ ಎಂಬ ಖುಷಿಯಲ್ಲಿ ಡ್ರೈವರ್ ಗಳು ಮುಳುಗಿದ್ದಂತೂ ಸುಳ್ಳಲ್ಲ.