ಏರುತ್ತಿದೆ ಇಳಯರಾಜ ಸಂಗೀತ ಜ್ವರ!

By Staff

Sandalwood to relish Ilayaraja tunes
ಸುಮಧುರ ಸಂಗೀತ ಮಾಂತ್ರಿಕ ಇಳಯರಾಜ ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.ಕನ್ನಡ ಚಿತ್ರರಂಗದೊಂದಿಗಿನ ಅವರ ಒಡನಾಟ ಮೂರು ದಶಕಗಳಿಗೂ ಹಳೆಯದು. ಇಳಯರಾಜ ಸಂಗೀತ ಸಂಯೋಜಿಸಿದ ಹಲವಾರು ಕನ್ನಡ ಚಿತ್ರಗೀತೆಗಳು ಇಂದಿಗೂ ಹೊಸದಾಗಿ ಕೇಳಿಸುತ್ತವೆ.ನೀನನ್ನ ಗೆಲ್ಲಲಾರೆ, ಗೀತಾ,ಪಲ್ಲವಿ ಅನುಪಲ್ಲವಿ,ಜನ್ಮಜನ್ಮ ದ ಅನುಬಂಧ ಚಿತ್ರದ ಹಾಡುಗಳು ಇಂದಿಗೂ ಅಜರಾಮರ.ನಂತರದ ದಿನಗಳಲ್ಲಿ ಬಂದ ನಮ್ಮೂರ ಮಂದಾರ ಹೂವೆ, ಶಿವಸೈನ್ಯ ,ನಮ್ಮ ಪ್ರೀತಿಯ ರಾಮು, ಹೂಮಳೆ ಚಿತ್ರದ ಹಾಡುಗಳು ಪ್ರೇಕ್ಷಕರು ಮತ್ತೆ ಮತ್ತೆ ಗುನುಗುವಂತಿವೆ.

ಒಂದು ಸಣ್ಣ ವಿರಾಮದ ನಂತರ ಮತ್ತೆ ಇಳಯರಾಜರ ಸಂಗೀತ ಕನ್ನಡದಲ್ಲಿ ರಿಂಗಣಿಸಲಿದೆ. 'ಆ ದಿನಗಳು' ಯಶಸ್ಸಿನ ನಂತರ ಅವರನ್ನು ಸಾಕಷ್ಟು ನಿರ್ಮಾಪಕರು ಹುಡುಕಿಕೊಂಡು ಬಂದಿದ್ದಾರೆ. ಹಾಗಾಗಿ ಇಳಯರಾಜ ಅವರಿಗೆ ಈಗ ಕೈತುಂಬ ಕೆಲಸ. ಭಾಗ್ಯದ ಬಳೆಗಾರ, ನನ್ನವನು,ಸರಿಗಮ ಮತ್ತು ಪ್ರೇಮ್ ಕಹಾನಿ ಚಿತ್ರಗಳ ಸಂಗೀತ ಸಂಯೋಜನೆಯಲ್ಲಿ ಈಗವರು ಮಗ್ನ. ಕನ್ನಡ ಚಿತ್ರರಂಗದಲ್ಲಿ ಇಳಯರಾಜ ಸಂಗೀತ ಜ್ವರ ಏರುತ್ತಿರುವುದು ಮನೋಮೂರ್ತಿ ಸಂಗೀತ ತಾಳ ತಪ್ಪುತ್ತಿರುವುದು ದುರಂತ ಅನ್ನಿಸುವುದಿಲ್ಲವೆ?
(ದಟ್ಸ್ ಕನ್ನಡ ಚಿತ್ರವಾರ್ತೆ)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X