twitter
    For Quick Alerts
    ALLOW NOTIFICATIONS  
    For Daily Alerts

    ಏರುತ್ತಿದೆ ಇಳಯರಾಜ ಸಂಗೀತ ಜ್ವರ!

    By Staff
    |

    Sandalwood to relish Ilayaraja tunes
    ಸುಮಧುರ ಸಂಗೀತ ಮಾಂತ್ರಿಕ ಇಳಯರಾಜ ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.ಕನ್ನಡ ಚಿತ್ರರಂಗದೊಂದಿಗಿನ ಅವರ ಒಡನಾಟ ಮೂರು ದಶಕಗಳಿಗೂ ಹಳೆಯದು. ಇಳಯರಾಜ ಸಂಗೀತ ಸಂಯೋಜಿಸಿದ ಹಲವಾರು ಕನ್ನಡ ಚಿತ್ರಗೀತೆಗಳು ಇಂದಿಗೂ ಹೊಸದಾಗಿ ಕೇಳಿಸುತ್ತವೆ.ನೀನನ್ನ ಗೆಲ್ಲಲಾರೆ, ಗೀತಾ,ಪಲ್ಲವಿ ಅನುಪಲ್ಲವಿ,ಜನ್ಮಜನ್ಮ ದ ಅನುಬಂಧ ಚಿತ್ರದ ಹಾಡುಗಳು ಇಂದಿಗೂ ಅಜರಾಮರ.ನಂತರದ ದಿನಗಳಲ್ಲಿ ಬಂದ ನಮ್ಮೂರ ಮಂದಾರ ಹೂವೆ, ಶಿವಸೈನ್ಯ ,ನಮ್ಮ ಪ್ರೀತಿಯ ರಾಮು, ಹೂಮಳೆ ಚಿತ್ರದ ಹಾಡುಗಳು ಪ್ರೇಕ್ಷಕರು ಮತ್ತೆ ಮತ್ತೆ ಗುನುಗುವಂತಿವೆ.

    ಒಂದು ಸಣ್ಣ ವಿರಾಮದ ನಂತರ ಮತ್ತೆ ಇಳಯರಾಜರ ಸಂಗೀತ ಕನ್ನಡದಲ್ಲಿ ರಿಂಗಣಿಸಲಿದೆ. 'ಆ ದಿನಗಳು' ಯಶಸ್ಸಿನ ನಂತರ ಅವರನ್ನು ಸಾಕಷ್ಟು ನಿರ್ಮಾಪಕರು ಹುಡುಕಿಕೊಂಡು ಬಂದಿದ್ದಾರೆ. ಹಾಗಾಗಿ ಇಳಯರಾಜ ಅವರಿಗೆ ಈಗ ಕೈತುಂಬ ಕೆಲಸ. ಭಾಗ್ಯದ ಬಳೆಗಾರ, ನನ್ನವನು,ಸರಿಗಮ ಮತ್ತು ಪ್ರೇಮ್ ಕಹಾನಿ ಚಿತ್ರಗಳ ಸಂಗೀತ ಸಂಯೋಜನೆಯಲ್ಲಿ ಈಗವರು ಮಗ್ನ. ಕನ್ನಡ ಚಿತ್ರರಂಗದಲ್ಲಿ ಇಳಯರಾಜ ಸಂಗೀತ ಜ್ವರ ಏರುತ್ತಿರುವುದು ಮನೋಮೂರ್ತಿ ಸಂಗೀತ ತಾಳ ತಪ್ಪುತ್ತಿರುವುದು ದುರಂತ ಅನ್ನಿಸುವುದಿಲ್ಲವೆ?
    (ದಟ್ಸ್ ಕನ್ನಡ ಚಿತ್ರವಾರ್ತೆ)

    Thursday, November 20, 2008, 17:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X