Don't Miss!
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- News ಮೈಸೂರು: ಪ್ರಧಾನಿ ಮೋದಿ ಕುರಿತಾದ ಹಾಡು ಶೇರ್ ಮಾಡಿ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಯಾಂಡಲ್ವುಡ್ನಲ್ಲಿ ಬಾಲಿವುಡ್ ಹಕ್ಕಿಗಳ ಕಲರವ
ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿದ್ದ ಯಶಸ್ವಿ 'ಹುಡುಗಾಟ' ಚಿತ್ರ ನಿರ್ದೆಶಿಸಿದ್ದ ಸಂಜಯ್ ಈಗ 'ಪರಿಚಯ' ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ರೇಖಾ ಹಾಗೂ ತರುಣ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇವರ ಜೊತೆಗೆ ಸಂಗೀತ ನಿರ್ದೇಶಕರಾಗಿ ಜೆಸ್ಸಿಗಿಫ್ಟ್ ಇರುತ್ತಾರೆ.
ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ವಿಭಿನ್ನ ಮತ್ತು ಅದ್ದೂರಿಯಾಗಿ ನಡೆಸಲು ಚಿತ್ರತಂಡ ನಿರ್ಧರಿಸಿದೆ. ನಿರ್ದೇಶಕರ ಪ್ರಕಾರ , ಈ ಚಿತ್ರಕ್ಕೆ ಹಾಡಿರುವ ಬಾಲಿವುಡ್ ಘಟಾನುಘಟಿಗಳಾದ ಶಾನ್, ಅಲಿಷಾ ಚಿನಾಯ್, ಬಾಬಾ ಸೈಗಲ್, ಕೈಲಾಶ್ ಖೇರ್, ಜುಬಿನ್ ಮತ್ತು ಶ್ರೇಯಾ ಘೋಶಾಲ್ ರಾಕ್ ಶೋದಲ್ಲಿ ಭಾಗವಹಿಸಲಿದ್ದಾರಂತೆ.
ಬಾಬಾ ಸೈಗಲ್ ಹಾಗೂ ಬ್ಲೇಜ್ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಹಾಡಿದ್ದರೆ, ಶ್ರೇಯಾ ಘೋಶಾಲ್ ಅಂತೂ ಕನ್ನಡದ ಗಾಯಕಿಯರಿಗಿಂತ ಜಾಸ್ತಿ ಕನ್ನಡದಲ್ಲಿ ಹಾಡಿದ್ದರೇನೋ? ರಾಕ್ ಶೋ ನಲ್ಲಿ ಕನ್ನಡದ ಗಾಯಕರೂ ಕೂಡಾ ಇರುತ್ತಾರಂತೆ. ಇದೇ ತಿಂಗಳಲ್ಲಿ ಕಾರ್ಯಕ್ರಮ ನಡೆಸಲು ಸಂಜಯ್ ಯೋಚಿಸಿದ್ದಾರೆ.
ಕನ್ನಡದ ಗಾಯಕ, ಗಾಯಕಿಯರು ಮತ್ತೆ ರಸ್ತೆಗಿಳಿತ್ತಾರೋ ಕಾದು ನೋಡೋಣ?
(ದಟ್ಸ್ ಕನ್ನಡ ಸಿನಿವಾರ್ತೆ)