Don't Miss!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿಲಿಕಾನ್ ಸಿಟಿಯಲ್ಲಿ ಜೀ ಕನ್ನಡದ ಹಾಡು ಹಬ್ಬ
ಮೆರಿಕ್ರಿಸ್ಮಸ್ ಹಾಗೂ ವರ್ಷದ ಕೊನೆಯ ವಿಶೇಷವಾಗಿ ನಾಡಿನ ಜನಪ್ರಿಯ ಕಿರುತೆರೆ ವಾಹಿನಿ ಜೀ ಕನ್ನಡ ಬೆಂಗಳೂರಿನಲ್ಲಿ 'ಹಾಡು ಹಬ್ಬ' ಎಂಬ ವಿಶಿಷ್ಠ ಸಂಗೀತ ಪ್ರಧಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಡಿಸೆಂಬರ್ 25ರ ಮಧ್ಯಾಹ್ನ ಹಾಗೂ ಸಂಜೆ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಸುಮಾರು 15 ಗಾಯಕ, ಗಾಯಕಿಯರು ಕನ್ನಡ ಚಲನಚಿತ್ರರಂಗದ ಜನಪ್ರಿಯ ಗೀತೆಗಳನ್ನು ಹಾಡಲಿದ್ದಾರೆ.
ಎಪ್ಪತ್ತರ ದಶಕದ ಆರಂಭದಿಂದ ಇಂದಿನ ವರೆಗೂ ಮೂಡಿ ಬಂದಿರುವ ವಿವಿಧ ಚಲನಚಿತ್ರಗಳ ಗೀತೆಗಳನ್ನು ಈ ಕಾರ್ಯಕ್ರಮದಲ್ಲಿ ಹಾಡಲು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಜೀ ಸಮೂಹ ಸಂಸ್ಥೆಯ ದಕ್ಷಿಣ ಭಾರತದ ಮುಖ್ಯಸ್ಥರಾದ ಡಾ. ಗೌತಮ್ ಮಾಚಯ್ಯ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜೀ ಕನ್ನಡದ ವೀಕ್ಷಕರು ಹಾಗೂ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಆದರೆ ಇಲ್ಲಿ ಪಾಲ್ಗೊಳ್ಳಲು ಪಾಸ್ ಕಡ್ಡಾಯವಾಗಿದ್ದು ಇದನ್ನು ಜೀ ಕನ್ನಡ ಕಛೇರಿಯಲ್ಲಿ ಉಚಿತವಾಗಿ ಪಡೆಯಬಹುದಾಗಿದೆ. ದಿನಾಂಕ 21.12.2010ರ ಮಂಗಳವಾರದಿಂದ ಪಾಸ್ಗಳನ್ನು ವಿತರಿಸಲಿದ್ದು ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.
ಕನ್ನಡ ಚಿತ್ರಗಳು : ಆರಿಸಿನೋಡು ಬೀಳಿಸಿನೋಡು
ದಿನಾಂಕ 25.12.2010ರಂದು ಮಧ್ಯಾಹ್ನ 2.30 ಗಂಟೆಗೆ ಹಾಗೂ ಸಂಜೆ 6.30 ಗಂಟೆಗೆ ಎರಡು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು ಕಾರ್ಯಕ್ರಮ ನಿಮಾನ್ಸ್ ಕನ್ವೆನ್ಷನ್ ಸೆಂಟರ್, ನಿಮಾನ್ಸ್ ಆವರಣ, ಹೊಸೂರು ರಸ್ತೆ, ಇಲ್ಲಿ ನಡೆಯಲಿದೆ. ಎರಡೂ ಕಾರ್ಯಕ್ರಮಗಳಿಗೂ ಸಾರ್ವಜನಿಕರಿಗೆ ಪ್ರವೇಶವಿದ್ದು ಯಾವುದಾದರೂ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.
ಹಾಡು ಹಬ್ಬ ಏನು? ಹೇಗೆ? : ನಾಡಿನ ಬಹುತೇಕ ಹೆಸರಾಂತ ಗಾಯಕ, ಗಾಯಕಿಯರು ಒಂದೇ ವೇದಿಕೆಯಲ್ಲಿ ಸೇರುತ್ತಿರುವುದು ಇಲ್ಲಿನ ವಿಶೇಷ ಈ ಎಲ್ಲಾ ಗಾಯಕ, ಗಾಯಕಿಯರು ಹಳೆಯ ಹಾಗೂ ಹೊಸ ಹಾಡುಗಳನ್ನು ನಿರಂತರವಾಗಿ ಹಾಡಲಿದ್ದಾರೆ.
ಯಾರ್ಯಾರು ಹಾಡಲಿದ್ದಾರೆ? : ಬಿ. ಜಯಶ್ರಿ, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಎಂ.ಡಿ. ಪಲ್ಲವಿ, ನಂದಿತಾ, ಆನೂರು ಅನಂತಕೃಷ್ಣಶರ್ಮ, ಅರ್ಚನಾ ಉಡುಪ, ಶಮಿತಾ ಮಲ್ನಾಡ್, ಸುನೀತಾ, ಮಂಗಳಾ, ಮಾಧುರಿ, ಫಯಾಜ್ ಖಾನ್, ಚೇತನ್, ವ್ಯಾಸರಾಜ್ ಹಾಗೂ ದೀಪಕ್ ಈ ಎಲ್ಲಾ ಗಾಯಕ, ಗಾಯಕಿಯರು ಹಾಡು ಹಬ್ಬದಲ್ಲಿ ಹಾಡಲಿದ್ದಾರೆ. ಇವರ ಜೊತೆಗೆ ಕನ್ನಡ ಚಿತ್ರರಂಗದ ನಟ, ನಟಿಯರೂ ಸಹ ಪಾಲ್ಗೊಳ್ಳಲಿದ್ದು ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. [ಜೀ ಕನ್ನಡ]