Don't Miss!
- News ನೇಹಾ ಹತ್ಯೆ: ಶೀಘ್ರವೇ ನ್ಯಾಯದಾನ ಎಂದ ಸಚಿವ: ವಿಶೇಷ ಕೋರ್ಟ್ಗೆ 'ನೇಹಾ' ಹೆಸರಿಡಲು ಮನವಿ
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಳುವ ಯೋಗಿಯ ದಿರಿಸಿನಲ್ಲಿ ಡಾ.ರಾಜ್
ಸಾಹಿತ್ಯ: ಕುವೆಂಪು
ಸಂಗೀತ :ಉಪೇಂದ್ರಕುಮಾರ್
ಧ್ವನಿ ; ಸಿ. ಅಶ್ವಥ್
ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ರಚಿಸಿದ 'ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ' ಎಂಬ ರೈತ ಗೀತೆಗೆ ಬಿಜೆಪಿ ಸರ್ಕಾರ ನಾಡಗೀತೆಯ ಮಾನ್ಯತೆ ನೀಡಲು ನಿರ್ಧರಿಸಿದೆ. ಕುವೆಂಪು ಸಾಹಿತ್ಯದ ಈ ಹಾಡನ್ನು 'ಕಾಮನಬಿಲ್ಲು' ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಮೇರು ನಟ ಡಾ. ರಾಜ್ ಕುಮಾರ್, ಅನಂತ್ ನಾಗ್ ನಟಿಸಿದ ಈ ಹಾಡಿಗೆ ಸಿ. ಅಶ್ವಥ್ ದನಿಗೂಡಿಸಿದ್ದರು. ಉಪೇಂದ್ರ ಕುಮಾರ್ ಅವರ ಸಂಗೀತ ಸಂಯೋಜನೆಯಲ್ಲಿ ಬಂದ ಈ ಹಾಡು ಅಜರಾಮರವಾಗಿಲಿ. ಈ ಹಾಡಿನ ಪೂರ್ಣ ಚರಣ ಇಲ್ಲಿದೆ.
ನೇಗಿಲ
ಹಿಡಿದ
ಹೊಲದೊಳು
ಹಾಡುತ
ಉಳುವಾ
ಯೋಗಿಯ
ನೋಡಲ್ಲಿ
ಫಲವನು
ಬಯಸದೆ
ಸೇವೆಯೆ
ಪೂಜೆಯು
ಕರ್ಮವೆ
ಇಹಪರ
ಸಾಧನವು
ಕಷ್ಟದೊಳನ್ನವ
ದುಡಿವನೆ
ತ್ಯಾಗಿ
ಸೃಷ್ಟಿನಿಯಮದೊಳಗವನೇ
ಭೋಗೀ
ಉಳುವಾ
ಯೋಗಿಯ
ನೋಡಲ್ಲಿ
||
ಲೋಕದೊಳೇನೇ
ನಡೆಯುತಲಿರಲಿ
ತನ್ನೀ
ಕಾರ್ಯವ
ಬಿಡನೆಂದೂ
ರಾಜ್ಯಗಳುಳಿಸಲಿ
ರಾಜ್ಯಗಳಳಿಯಲಿ
ಹಾರಲಿ
ಗದ್ದುಗೆ
ಮುಕುಟಗಳು
ಮುತ್ತಿಗೆ
ಹಾಕಲಿ
ಸೈನಿಕರೆಲ್ಲ
ಬಿತ್ತುಳುವುದನವ
ಬಿಡುವುದೆ
ಇಲ್ಲ
||
ಉಳುವಾ
ಯೋಗಿಯ
ನೋಡಲ್ಲಿ
||
ಯಾರೂ
ಅರಿಯದ
ನೇಗಿಲ
ಯೋಗಿಯೆ
ಲೋಕಕೆ
ಅನ್ನವನೀಯುವನು
ಹೆಸರನು
ಬಯಸದೆ
ಅತಿಸುಖ
ಗಳಿಸದೆ
ದುಡಿವನು
ಗೌರವಕಾಶಿಸದೆ
ನೇಗಿಲ
ಕುಲದೊಳಗಡಗಿದೆ
ಕರ್ಮ
ನೇಗಿಲ
ಮೇಲೆಯೆ
ನಿಂತಿದೆ
ಧರ್ಮ
||
ಉಳುವಾ
ಯೋಗಿಯ
ನೋಡಲ್ಲಿ
||