Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಗವಂತನೊಂದಿಗೆ ಹಂಸಲೇಖರ ಪದಸರಸ
ಒಂದೆರಡಲ್ಲ, ಮೂರೂವರೆ ದಶಕಗಳ ಹಿಂದೆಯೇ ಕನ್ನಡ ಚಿತ್ರರಂಗಕ್ಕೆ ಬಂದವರು ಹಂಸಲೇಖ. ಆ ದಿನಗಳಲ್ಲಿ ಸಕ್ಸಸ್ಗಾಗಿ ಅವರು ವಿಪರೀತ ಕಷ್ಟಪಟ್ಟರು. ಆರಂಭಿಕ ದಿನಗಳಲ್ಲಿ ಗೆಲುವೆಂಬುದು ಹಂಸಲೇಖ ಅವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಗೆಲುವಿನ ಕನವರಿಕೆಯಲ್ಲಿ ಹೋದಾಗ ಕೂಡ ಸೋಲೆಂಬ ಸೋಲೇ ಜೊತೆಯಾಗುತ್ತಿತ್ತಲ್ಲ. ಆ ಕಾರಣದಿಂದ ಸಹಜವಾಗಿಯೇ ಬೇಸರಗೊಂಡಿದ್ದರು ಹಂಸಲೇಖ.
ಈ ಪರಿಯ ಸಂಕಟಿಗಳಿಗೆಲ್ಲ ಆ ದೇವರ ಅನುಗ್ರಹ ಇಲ್ಲದಿರುವುದೇ ಎಂಬ ಭಾವ ಅವರ ಕೈಹಿಡಿದದ್ದೇ ಆಗ. ಅದೇ ಸಿಟ್ಟಿನಲ್ಲಿ ಅವರು "ನೀನಾ ಭಗವಂತಾ, ಜಗಕುಪಕರಿಸಿ ನನಗಪಕರಿಸೋ ಲೋಕಾದ್ಧಾರಕ ನೀನೇನಾ?"ಎಂಬ ಹಾಡು ಬರೆದರು. ಅದನ್ನು "ತ್ರಿವೇಣಿ" ಚಿತ್ರಕ್ಕೆ ಬಳಸಿಕೊಂಡದ್ದೂ ಆಯಿತು.
ಮುಂದೆ, ಯಶಸ್ಸಿನ ಗೌರಿಶಂಕರ ಹತ್ತಿದರಲ್ಲ. ಆಗ ಮತ್ತದೇ ಹಂಸಲೇಖರ ಬಳಿಗೆ ಹೋದ ಪತ್ರಕರ್ತರು ಕೇಳಿದರಂತೆ : ಅಲ್ರೀ ಆಗೇನೋ ದೇವರು ಏನನ್ನೂ ಅನುಗ್ರಹಿಸಲಿಲ್ಲ, ನೀನೇನಾ ಭಗವಂತಾ ಅಂತ ಬೈದು ಬರೆದುಬಿಟ್ರಿ. ಈಗ ನಿಮಗೆ ಬಯಸಿದ್ದೆಲ್ಲ ಸಿಕ್ಕಿದೆ. ಇಂಥ ಸಂದರ್ಭದಲ್ಲಿ ಅದೇ ಭಗವಂತನ ಮೇಲೆ ಹಾಡು ಬರೆಯಪ್ಪ ಅಂದ್ರೆ ಹೇಗೆ ಬರಿತೀರೀ ?
ಜಾಣ ಹಂಸಲೇಖ ಒಮ್ಮೆ ಜೋರಾಗಿ ನಕ್ಕು ಹೇಳಿದರಂತೆ : ಈಗಾಗಿದ್ರೆ "ನೀನಾ ಭಗವಂತಾ" ಎಂದು ಬೈಯುವ ಬದಲು, "ನೀನೇ ಭಗವಂತಾ" ಎಂದು ಹಾಡಿ ಹೊಗಳಿ ಬರೀತಿದ್ದೆ...!
ಇದನ್ನೂ
ಓದಿ:
ಗಾಯಕರಿಗೆ
ಎಸ್ಪಿಬಿ
'ತಣ್ಣನೆಯ'
ಕಿವಿಮಾತು