twitter
    For Quick Alerts
    ALLOW NOTIFICATIONS  
    For Daily Alerts

    ನ.30ರಂದು ಅಶ್ವತ್ಥ್ ನೆನಪಿನಲ್ಲಿ ಕನ್ನಡ ರಾಜ್ಯೋತ್ಸವ

    By Rajendra
    |

    Singer C Ashwath
    ಗಾನಕೋಗಿಲೆ ಸಿ. ಅಶ್ವತ್ಥ್ ಅವರ ನೆನಪಿನ ಅಂಗವಾಗಿ ನವೆಂಬರ್ 30ರಂದು ಪಾಂಡವಪುರ(ಮಂಡ್ಯ ಜಿಲ್ಲೆ) ಕ್ರೀಡಾಂಗಣದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ ಎಂದು ಶಾಸಕ ಸಿ ಎಸ್ ಪುಟ್ಟರಾಜು ತಿಳಿಸಿದ್ದಾರೆ.

    ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಕಿಕ್ಕೇರಿ ಕೃಷ್ಣಮೂರ್ತಿ ನೇತೃತ್ವದಲ್ಲಿ ಡಾ.ಸಿ.ಅಶ್ವತ್ಥ್ ಸುಗಮ ಸಂಗೀತ ಯಾತ್ರೆ, ಸಂಗೀತ ತರಬೇತಿ ಶಿಬಿರದಲ್ಲಿ ಅವರು ಮಾತನಾಡುತ್ತಿದ್ದರು.

    ನವೆಂಬರ್ 1ರಂದು ತಾಲ್ಲೂಕು ಆಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಯಲಿದೆ. ನವೆಂಬರ್ 30 ರಂದು ತಮ್ಮ ನೇತೃತ್ವದಲ್ಲಿ ಅದ್ದೂರಿ ಸಮಾರಂಭ ನಡೆಸಲಾಗುವುದು. ಇದಕ್ಕೆ ಸಾರ್ವಜನಿಕ ಸಹಕಾರ ಅಗತ್ಯ ಎಂದರು.

    ಡಿ.29ರಂದು ಬೆಂಗಳೂರಿನಲ್ಲಿ ನಡೆಯುವ ಅಶ್ವತ್ಥ್ ನೆನಪಿನ ಅಂಗವಾಗಿ ಸುಗಮ ಸಂಗೀತ ಯಾತ್ರೆ ಸಮಾರಂಭವು ಗಿನ್ನಿಸ್ ದಾಖಲೆಗೆ ಸೇರಲಿದೆ. ಸಮಾರಂಭಕ್ಕೆ ಮಂಡ್ಯ ಜಿಲ್ಲೆಯ ಅನೇಕ ಗಾಯಕ, ಗಾಯಕಿಯರು ಸೇರಲಿದ್ದು ಇದಕ್ಕಾಗಿ ಸಿದ್ಧತೆ ನಡೆದಿದೆ ಎಂದರು.

    Tuesday, October 26, 2010, 10:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X