Don't Miss!
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಣ್ಣು ಬೇರೆ, ನೋಟವೊಂದು - ನಾವು ಭಾರತೀಯರು
ಕೆಎಸ್ ನ ಅವರ ನನವ ಪಲ್ಲವ(1989)ಸಾಹಿತ್ಯ ಗುಚ್ಛದಿಂದ ಆಯ್ದ 'ನಮ್ಮ ಹಾಡು' ಕವನ ಮುಂದೆ ಮೈಸೂರು ಮಲ್ಲಿಗೆ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಎಸ್ ಬಿ ಬಾಲಸುಬ್ರಮಣ್ಯಂ ಅವರ ಕಂಠದಲ್ಲಿ ಶಕ್ತಿಯುತವಾಗಿ ಹಾಡು ಹೊರ ಹೊಮ್ಮಿದೆ ಕೂಡಾ...ಕವಿ ಹಾಗೂ ಗಣತಂತ್ರದಿನದ ನಿಮಿತ್ತ ಈ ಗೀತ ಸಾಹಿತ್ಯ ನಿಮ್ಮ ಮುಂದೆ...
ಆಕಾಶಕ್ಕೆದ್ದು
ನಿಂತ
ಪರ್ವತ
ಹಿಮ
ಮೌನದಲ್ಲಿ
ಕರಾವಳಿಗೆ
ಮುತ್ತನಿಡುವ
ಪೆರ್ದೆರೆಗಳ
ಗಾನದಲ್ಲಿ
ಬಯಲು
ತುಂಬ
ಹಸಿರ
ದೀಪ
ಹಚ್ಚಿ
ಹರಿವ
ನದಿಗಳಲ್ಲಿ
ನೀಲಿಯಲ್ಲಿ
ಹೊಗೆಯ
ಚಲ್ಲಿ
ಯಂತ್ರ
ಘೋಷವೇಳುವಲ್ಲಿ
ಕಣ್ಣು
ಬೇರೆ,
ನೋಟವೊಂದು-
ನಾವು
ಭಾರತೀಯರು.
ನಾಡಿನೆಲ್ಲ
ಗಡಿಗಳಲ್ಲಿ
ಬಾನಿನಲ್ಲಿ
ಕಡಲಿನಲ್ಲಿ
ನಮ್ಮ
ಯೋಧರೆತ್ತಿ
ಹಿಡಿದ
ನಮ್ಮ
ಧ್ವಜದ
ನೆರಳಿನಲ್ಲಿ
ಒಂದೆ
ನೆಲದ
ತೊಟ್ಟಿಲಲ್ಲಿ
ಬೆಳೆದ
ನಮ್ಮ
ಕೊರಲಿನಲ್ಲಿ
ನಮ್ಮ
ಯುಗದ
ದನಿಗಳಾಗಿ
ಮೂಡಿದೆಲ್ಲ
ಹಾಡಿನಲ್ಲಿ
ಭಾಷೆ
ಬೇರೆ,
ಭಾವವೊಂದು-
ನಾವು
ಭಾರತೀಯರು.
ನಾಡಿಗಾಗಿ
ತನುವ
ತೆತ್ತ
ಹುತಾತ್ಮರ
ಸ್ಮರಣೆಯಲ್ಲಿ
ನಮ್ಮ
ಕಷ್ಟದಲ್ಲು
ನೆರೆಗೆ
ನೆರೆಳನೀವ
ಕರುಣೆಯಲ್ಲಿ
ದಾರಿ
ಬಳಸಿ
ಏರುವಲ್ಲಿ
ಬಿರುಗಾಳಿಯೆ
ಮೊಳಗುವಲ್ಲಿ
ನಮ್ಮ
ಗುರಿಯ
ಬೆಳಕಿನೆಡೆಗೆ
ನಡೆವ
ಧೀರ
ಪಯಣದಲ್ಲಿ
ಎಲ್ಲೆ
ಇರಲಿ,
ನಾವು
ಒಂದು-
ನಾವು
ಭಾರತೀಯರು.