ಈ ಹಾಡಿಗೆ ಒಲಿಯದ ಹುಡುಗಿಯರು ಯಾರಿದ್ದಾರೆ ಹೇಳಿ?
'ಹುಡುಗಿಯರ ಒಲಿಸಿಕೊಳ್ಳುವುದು ಹೇಗೆ?' ಈ ವಿಷಯಕ್ಕೆ ಸಂಬಂಧಿಸಿದಂತೆ ನೂರಾರು ಪುಸ್ತಕಗಳು ಬಂದಿವೆ. ನಿಜಕ್ಕೂ
ಈ ಹಾಡಿಗೆ ಜೀವತುಂಬಿದರೆ, ಹುಡುಗಿಯರು ಒಲಿದೇ ಒಲಿಯುತ್ತಾರೆ. ಒಂದು ಸಲ ಈ ಹಾಡನ್ನು ಗುನುಗಿದರೆ ಸಾಕು,
ಏನೋ ಹೊಸ ಲವಲವಿಕೆ. 'ಕನ್ಯಾರತ್ನ' ಚಿತ್ರಕ್ಕಾಗಿ ಕು.ರಾ. ಸೀತಾರಾಮ ಶಾಸ್ತ್ರಿ ಬರೆದ ಹಾಡಿಗೆ, ಜಿ.ಕೆ.ವೆಂಕಟೇಶ್
ಸಂಗೀತ ನೀಡಿದ್ದಾರೆ. ಭಾವಪೂರ್ಣವಾಗಿ ಹಾಡಿ ಪಿ.ಪಿ.ಶ್ರೀನಿವಾಸ್ ಜೀವ ತುಂಬಿದ್ದಾರೆ. ಇಂಥ ಒಂದೈದಾರು
ಹಾಡುಗಳಿದ್ದರೇ ಸಾಕು, ಹೇಗೋ ಜೀವನ ತಳ್ಳಬಹುದು.
ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
ಈ ಸವಿಘಳಿಗೆ ರಸದೀವಳಿಗೆ ನಿನ್ ಅಂತರಂಗ ಮಧುರಂಗ
ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
ಈ ಸವಿಘಳಿಗೆ ರಸದೀವಳಿಗೆ ನಿನ್ ಅಂತರಂಗ ಮಧುರಂಗ
ಬಳಿ ನೀನಿರಲು ಬಿಸಿಲೇ ನೆರಳು
ಮಧುಪಾನ ಪಾತ್ರೆ ನಿನ್ನೊಡಲು
ಮಧುವಿಲ್ಲದೇ ಮದವೇರಿಪ
ನಿನ್ನ ಅಂದ ಚೆಂದ ಮಕರಂದ
ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
ಈ ಸವಿಘಳಿಗೆ ರಸದೀವಳಿಗೆ ನಿನ್ ಅಂತರಂಗ ಮಧುರಂಗ
ನಿನ್ನೀ ವದನ ಅರವಿಂದವನ
ಹೂಬಾಣ ನಿನ್ನ ಬಿನ್ನಾಣ
ಒಲವೆಂಬ ಧನ ಬಿಡೆ ಹುಂಬತನ
ಬಾ ಚಿನ್ನ ರನ್ನ ವರಿಸೆನ್ನ
ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
ಈ ಸವಿಘಳಿಗೆ ರಸದೀವಳಿಗೆ ನಿನ್ ಅಂತರಂಗ ಮಧುರಂಗ


Click it and Unblock the Notifications











