twitter
    For Quick Alerts
    ALLOW NOTIFICATIONS  
    For Daily Alerts

    ಈ ಹಾಡಿಗೆ ಒಲಿಯದ ಹುಡುಗಿಯರು ಯಾರಿದ್ದಾರೆ ಹೇಳಿ?

    By Staff
    |

    'ಹುಡುಗಿಯರ ಒಲಿಸಿಕೊಳ್ಳುವುದು ಹೇಗೆ?' ಈ ವಿಷಯಕ್ಕೆ ಸಂಬಂಧಿಸಿದಂತೆ ನೂರಾರು ಪುಸ್ತಕಗಳು ಬಂದಿವೆ. ನಿಜಕ್ಕೂ
    ಈ ಹಾಡಿಗೆ ಜೀವತುಂಬಿದರೆ, ಹುಡುಗಿಯರು ಒಲಿದೇ ಒಲಿಯುತ್ತಾರೆ. ಒಂದು ಸಲ ಈ ಹಾಡನ್ನು ಗುನುಗಿದರೆ ಸಾಕು,
    ಏನೋ ಹೊಸ ಲವಲವಿಕೆ. '
    ಕನ್ಯಾರತ್ನ' ಚಿತ್ರಕ್ಕಾಗಿ ಕು.ರಾ. ಸೀತಾರಾಮ ಶಾಸ್ತ್ರಿ ಬರೆದ ಹಾಡಿಗೆ, ಜಿ.ಕೆ.ವೆಂಕಟೇಶ್
    ಸಂಗೀತ ನೀಡಿದ್ದಾರೆ. ಭಾವಪೂರ್ಣವಾಗಿ ಹಾಡಿ ಪಿ.ಪಿ.ಶ್ರೀನಿವಾಸ್ ಜೀವ ತುಂಬಿದ್ದಾರೆ.
    ಇಂಥ ಒಂದೈದಾರು
    ಹಾಡುಗಳಿದ್ದರೇ ಸಾಕು, ಹೇಗೋ ಜೀವನ ತಳ್ಳಬಹುದು.

    ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
    ಈ ಸವಿಘಳಿಗೆ ರಸದೀವಳಿಗೆ ನಿನ್ ಅಂತರಂಗ ಮಧುರಂಗ
    ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
    ಈ ಸವಿಘಳಿಗೆ ರಸದೀವಳಿಗೆ ನಿನ್ ಅಂತರಂಗ ಮಧುರಂಗ

    ಬಳಿ ನೀನಿರಲು ಬಿಸಿಲೇ ನೆರಳು
    ಮಧುಪಾನ ಪಾತ್ರೆ ನಿನ್ನೊಡಲು
    ಮಧುವಿಲ್ಲದೇ ಮದವೇರಿಪ
    ನಿನ್ನ ಅಂದ ಚೆಂದ ಮಕರಂದ

    ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
    ಈ ಸವಿಘಳಿಗೆ ರಸದೀವಳಿಗೆ ನಿನ್ ಅಂತರಂಗ ಮಧುರಂಗ

    ನಿನ್ನೀ ವದನ ಅರವಿಂದವನ
    ಹೂಬಾಣ ನಿನ್ನ ಬಿನ್ನಾಣ
    ಒಲವೆಂಬ ಧನ ಬಿಡೆ ಹುಂಬತನ
    ಬಾ ಚಿನ್ನ ರನ್ನ ವರಿಸೆನ್ನ

    ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
    ಈ ಸವಿಘಳಿಗೆ ರಸದೀವಳಿಗೆ ನಿನ್ ಅಂತರಂಗ ಮಧುರಂಗ

    Friday, March 29, 2024, 21:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X