Don't Miss!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- News ರಜನಿಕಾಂತ್, ವಿಜಯ್ ಸೇತುಪಥಿ, ಧನುಷ್.. ಯಾರೆಲ್ಲಾ ವೋಟ್ ಹಾಕಿದ್ರು?
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಡ ರೈತ ಗೀತೆ ನೇಗಿಲ ಯೋಗಿ ಹಾಡು
1983ರಲ್ಲಿ ತೆರೆಕಂಡ 'ಕಾಮನಬಿಲ್ಲು' ಚಿತ್ರದಲ್ಲಿ ಒಂಚೂರು ಬದಲಾವಣೆಗಳನ್ನು ಮಾಡಿ 'ನೇಗಿಲ ಯೋಗಿ' ಹಾಡನ್ನು ಬಳಸಿಕೊಳ್ಳಲಾಗಿತ್ತು. ಮೇರು ನಟ ಡಾ. ರಾಜ್ ಕುಮಾರ್, ಅನಂತ್ ನಾಗ್ ನಟಿಸಿದ ಈ ಹಾಡಿಗೆ ಸಿ. ಅಶ್ವಥ್ ಎತ್ತರದ ಧ್ವನಿಯಲ್ಲಿ ಹಾಡಿದ್ದರು. ಉಪೇಂದ್ರ ಕುಮಾರ್ ಅವರ ಸಂಗೀತ ಸಂಯೋಜನೆಯಲ್ಲಿ ಬಂದ ಈ ಹಾಡು ಅಜರಾಮರವಾಗಿಲಿ. ಈ ಹಾಡಿನ ಪೂರ್ಣ ಚರಣಗಳು ಇಲ್ಲಿದೆ.
ನೇಗಿಲ
ಹಿಡಿದ
ಹೊಲದೊಳು
ಹಾಡುತ
ಉಳುವಾ
ಯೋಗಿಯ
ನೋಡಲ್ಲಿ
ಫಲವನು
ಬಯಸದೆ
ಸೇವೆಯ
ಪೂಜೆಯು
ಕರ್ಮವೆ
ಇಹಪರ
ಸಾಧನವು
ಕಷ್ಟದೊಳನ್ನವ
ದುಡಿವನೆ
ತ್ಯಾಗಿ
ಸೃಷ್ಟಿನಿಯಮದೊಳಗವನೇ
ಭೋಗಿ
ಉಳುವಾ
ಯೋಗಿಯ
ನೋಡಲ್ಲಿ
ಲೋಕದೊಳೇನೇ
ನಡೆಯುತಿರಲಿ
ತನ್ನೀ
ಕಾರ್ಯವ
ಬಿಡನೆಂದೂ
ರಾಜ್ಯಗಳುಳಿಸಲಿ
ರಾಜ್ಯಗಳಳಿಯಲಿ
ಹಾರಲಿ
ಗದ್ದುಗೆ
ಮುಕುಟಗಳು
ಮುತ್ತಿಗೆ
ಹಾಕಲಿ
ಸೈನಿಕರೆಲ್ಲ
ಬಿತ್ತುಳುವುದನವ
ಬಿಡುವುದೆ
ಇಲ್ಲ
ಉಳುವಾ
ಯೋಗಿಯ
ನೋಡಲ್ಲಿ
ಬಾಳಿತು
ನಮ್ಮೀ
ನಾಗರಿಕತೆ
ಸಿರಿ
ಮಣ್ಣೋಣಿ
ನೇಗಿಲಿನಾಶ್ರಯದಿ
ನೇಗಿಲ
ಹಿಡಿದ
ಕೈಯಾದಾರದಿ
ದೊರೆಗಳು
ದರ್ಪದೊಳಾಳಿದರು
ನೇಗಿಲ
ಬಲದೊಳು
ವೀರರು
ಮೆರೆದರು
ಶಿಲ್ಪಿಗಳೆಸೆದರು,
ಕವಿಗಳು
ಬರೆದರು
ಉಳುವಾ
ಯೋಗಿಯ
ನೋಡಲ್ಲಿ
ಯಾರೂ
ಅರಿಯದ
ನೇಗಿಲ
ಯೋಗಿಯೆ
ಲೋಕಕೆ
ಅನ್ನವನೀಯುವನು
ಹೆಸರನು
ಬಯಸದೆ
ಅತಿಸುಖ
ಗಳಿಸದೆ
ದುಡಿದವನು
ಗೌರವಕಾಶಿಸದೆ
ನೇಗಿಲ
ಕುಲದೊಳಗಡಗಿದೆ
ಕರ್ಮ
ನೇಗಿಲ
ಮೇಲೆಯೆ
ನಿಂತಿದೆ
ಧರ್ಮ
ಉಳುವಾ
ಯೋಗಿಯ
ನೋಡಲ್ಲಿ