twitter
    For Quick Alerts
    ALLOW NOTIFICATIONS  
    For Daily Alerts

    ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ..

    By Staff
    |

    1977ರಲ್ಲಿ ತೆರೆಕಂಡ 'ಬಭ್ರುವಾಹನ'ಚಿತ್ರದ ಈ ಹಾಡು ಗೊತ್ತಿಲ್ಲದ ಕನ್ನಡಿಗರು ಅತಿವಿರಳ.
    ಎಷ್ಟು ಸಲ ಕೇಳಿದರೂ, ನೋಡಿದರೂ ಈ ಹಾಡು ಬೋರ್ ಅನ್ನಿಸುವುದಿಲ್ಲ.
    ಟಿ.ಜಿ.ಲಿಂಗಪ್ಪ ಸಂಗೀತ ಮತ್ತು ಹುಣಸೂರು ಕೃಷ್ಣಮೂರ್ತಿ ಸಾಹಿತ್ಯ ಮೇಳೈಸಿದ ಈ ಹಾಡು,
    ಕನ್ನಡ ಚಿತ್ರಲೋಕದಲ್ಲಿ ಎಂದೂ ಮರೆಯದ ಹಾಡು. ರಾಜ್ ಕುಮಾರ್ ಮತ್ತು ಪಿ.ಬಿ.ಶ್ರೀನಿವಾಸ್
    ಪೈಪೋಟಿಗೆ ಬಿದ್ದವರಂತೆ ಹಾಡಿಗೆ ಜೀವತುಂಬಿದ್ದಾರೆ.

    ಬಭ್ರುವಾಹನ :
    ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ
    ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
    ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
    ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ
    ಜಯವ ತಂದಿತ್ತ ಆ ಯದುನಂದನ
    ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನ

    ಅರ್ಜುನ :
    ಅಸಾಹಾಯ ಶೂರ ನಾ ಅಕ್ಷೀಣ ಬಲನೋ
    ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
    ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ
    ಉಗ್ರಪ್ರತಾಪೀ

    ಬಭ್ರುವಾಹನ :
    ಓ ಹೊ ಒ ಹೋ ಉಗ್ರಪ್ರತಾಪಿ ಆ!
    ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
    ನೂಪುರಂಗಳ ಕಟ್ಟಿ ನಟಿಸಿ ತಕಥೈಯಂದು ನಾಟ್ಯ ಕಲಿಸಿದ ನಪುಂಸಕ ನೀನು
    ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು
    ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ
    ಖಂಡಿಸಿದೇ ಉಳಿಸುವೆ
    ಹೋಗೊ ಹೋಗೆಲೋ ಶಿಖಂಡಿ

    ಅರ್ಜುನ :
    ಫಡ ಫಡ ಶಿಖಂಡಿಯಂದಡಿಗಡಿಗೆ ನುಡಿಯ ಬೇಡೆಲೋ ಮೂಢ
    ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಡೀವಿ
    ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ

    ಬಭ್ರುವಾಹನ :
    ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
    ಊಡು ಬಾಣಗಳ ಮಾಡುವೆ ಮಾನಭಂಗ

    ಅರ್ಜುನ :
    ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ

    ಬಭ್ರುವಾಹನ :
    ಅಬ್ಬರಿಸಿ ಭೊಬ್ಭಿರಿದರಿಲ್ಲಾರಿಗೂ ಭಯವಿಲ್ಲ

    ಅರ್ಜುನ :
    ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ

    ಬಭ್ರುವಾಹನ :
    ಅಂತಕನಿಗೆ ಅಂತಕನು ಈ ಬಭ್ರುವಾಹನ

    Tuesday, April 23, 2024, 22:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X