Don't Miss!
- News Mallikarjun Kharge: ಕಲಬುರಗಿ ಲೋಕಸಭಾ ಕ್ಷೇತ್ರ; ಅಳಿಯನ ಕಾಳಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರತಿಷ್ಠೆ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Automobiles ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ್ ಗಿಂತಲೂ ದೇವಿಶ್ರೀ ಸಂಭಾವನೆ ಹೆಚ್ಚು
*ಜಯಂತಿ
ಕೆಲವರು ಹೀಗೂ ಇರುತ್ತಾರೆ- ಎಸ್.ವಿ.ಬಾಬು ಹಾಗೆ. ನಿರ್ಮಾಪಕ ಎಸ್.ವಿ.ಬಾಬು ಹೈದರಾಬಾದಿನಲ್ಲೊಂದು, ಬೆಂಗಳೂರಿನಲ್ಲಿ ಇನ್ನೊಂದು ಕಾಲು ಇಟ್ಟವರು. ಸೋಲು ಬಂದರೆ ಕಣ್ಣು ಸಣ್ಣಗಾಗುವಂತೆ ನಗುತ್ತಾರೆ. ಗೆಲುವು ಸಿಕ್ಕರೆ ನಗುವಿನ ಜೊತೆಗೆ ಕಣ್ಣೂ ಅರಳುತ್ತದೆ. ಗಣೇಶನ ಕಾಲ್ಷೀಟ್ ಬೇಟೆಯಲ್ಲಿ ಬೇಗ ಯಶಸ್ವಿಯಾದವರ ಸಾಲಿನಲ್ಲಿ ಅವರಿದ್ದದ್ದು ಅಗ್ಗಳಿಕೆ. ಹೊಸಬರೆಂದರೆ ಅವರಿಗೆ ಅಚ್ಚುಮೆಚ್ಚು. ಅದಕ್ಕೇ ಶಿವಮಣಿ ಕೈಲಿ ಎಲ್ಲಾ ಹೊಸಬರನ್ನೇ ಹಾಕಿ ಜೋಶ್ ಸಿನಿಮಾ ನಿರ್ಮಿಸಿರೋದು.
ಗಣೇಶ ನಾಯಕನಾಗಿದ್ದ ಸಂಗಮ' ಚಿತ್ರ ನೋಡಿದವರು ಪಂಗನಾಮ ಅಂತ ಬೇಸರ ಪಟ್ಟುಕೊಂಡರೂ, ಬಾಬು ಅವರಿಗೇನೂ ಬೇಜಾರಾಗಿಲ್ಲ. ಯಾಕೆಂದರೆ, ಈ ಚಿತ್ರದಿಂದ ಅವರಿಗೆ ನಷ್ಟವೇನೂ ಆಗಿಲ್ಲವಂತೆ. ಆದರೆ, ಬಜೆಟ್ ಜಾಸ್ತಿಯಾಗಲು ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಮುಖ್ಯ ಕಾರಣವಂತೆ. ಬಡಿದದ್ದೇ ವಾದ್ಯ, ಕೇಳಿಸಿದ್ದೇ ರಾಗಗಳನ್ನು ಕೊಡಲು ಅವರು ಮಾಡಿಸಿದ ಖರ್ಚು ಬರೋಬ್ಬರಿ 80 ಲಕ್ಷ. ಗಣೇಶ ಚಿತ್ರಕ್ಕೆ ಪಡೆದ ಸಂಭಾವನೆಗಿಂತ ಇದು ಹೆಚ್ಚು ಅನ್ನೋದು ವಿಶೇಷ!
ಅಂದಹಾಗೆ, ಬಾಬು ಮತ್ತೊಂದು ಕನ್ನಡ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸವಿಸವಿ ನೆನಪು' ಫ್ಲಾಪ್ ಸಿನಿಮಾ ನಿರ್ದೇಶಿಸಿದ್ದ ಸಂತೋಷ್ ರೈ ಪಾತಾಜೆ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳಲಿದ್ದಾರೆ. ಅಂದುಕೊಂಡಂತೆ ಆದರೆ ಫೆಬ್ರುವರಿಯಲ್ಲಿ ಈ ಸಿನಿಮಾ ಸೆಟ್ಟೇರಲಿದೆ.