Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ್ ಗಿಂತಲೂ ದೇವಿಶ್ರೀ ಸಂಭಾವನೆ ಹೆಚ್ಚು
*ಜಯಂತಿ
ಕೆಲವರು ಹೀಗೂ ಇರುತ್ತಾರೆ- ಎಸ್.ವಿ.ಬಾಬು ಹಾಗೆ. ನಿರ್ಮಾಪಕ ಎಸ್.ವಿ.ಬಾಬು ಹೈದರಾಬಾದಿನಲ್ಲೊಂದು, ಬೆಂಗಳೂರಿನಲ್ಲಿ ಇನ್ನೊಂದು ಕಾಲು ಇಟ್ಟವರು. ಸೋಲು ಬಂದರೆ ಕಣ್ಣು ಸಣ್ಣಗಾಗುವಂತೆ ನಗುತ್ತಾರೆ. ಗೆಲುವು ಸಿಕ್ಕರೆ ನಗುವಿನ ಜೊತೆಗೆ ಕಣ್ಣೂ ಅರಳುತ್ತದೆ. ಗಣೇಶನ ಕಾಲ್ಷೀಟ್ ಬೇಟೆಯಲ್ಲಿ ಬೇಗ ಯಶಸ್ವಿಯಾದವರ ಸಾಲಿನಲ್ಲಿ ಅವರಿದ್ದದ್ದು ಅಗ್ಗಳಿಕೆ. ಹೊಸಬರೆಂದರೆ ಅವರಿಗೆ ಅಚ್ಚುಮೆಚ್ಚು. ಅದಕ್ಕೇ ಶಿವಮಣಿ ಕೈಲಿ ಎಲ್ಲಾ ಹೊಸಬರನ್ನೇ ಹಾಕಿ ಜೋಶ್ ಸಿನಿಮಾ ನಿರ್ಮಿಸಿರೋದು.
ಗಣೇಶ ನಾಯಕನಾಗಿದ್ದ ಸಂಗಮ' ಚಿತ್ರ ನೋಡಿದವರು ಪಂಗನಾಮ ಅಂತ ಬೇಸರ ಪಟ್ಟುಕೊಂಡರೂ, ಬಾಬು ಅವರಿಗೇನೂ ಬೇಜಾರಾಗಿಲ್ಲ. ಯಾಕೆಂದರೆ, ಈ ಚಿತ್ರದಿಂದ ಅವರಿಗೆ ನಷ್ಟವೇನೂ ಆಗಿಲ್ಲವಂತೆ. ಆದರೆ, ಬಜೆಟ್ ಜಾಸ್ತಿಯಾಗಲು ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಮುಖ್ಯ ಕಾರಣವಂತೆ. ಬಡಿದದ್ದೇ ವಾದ್ಯ, ಕೇಳಿಸಿದ್ದೇ ರಾಗಗಳನ್ನು ಕೊಡಲು ಅವರು ಮಾಡಿಸಿದ ಖರ್ಚು ಬರೋಬ್ಬರಿ 80 ಲಕ್ಷ. ಗಣೇಶ ಚಿತ್ರಕ್ಕೆ ಪಡೆದ ಸಂಭಾವನೆಗಿಂತ ಇದು ಹೆಚ್ಚು ಅನ್ನೋದು ವಿಶೇಷ!
ಅಂದಹಾಗೆ, ಬಾಬು ಮತ್ತೊಂದು ಕನ್ನಡ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸವಿಸವಿ ನೆನಪು' ಫ್ಲಾಪ್ ಸಿನಿಮಾ ನಿರ್ದೇಶಿಸಿದ್ದ ಸಂತೋಷ್ ರೈ ಪಾತಾಜೆ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳಲಿದ್ದಾರೆ. ಅಂದುಕೊಂಡಂತೆ ಆದರೆ ಫೆಬ್ರುವರಿಯಲ್ಲಿ ಈ ಸಿನಿಮಾ ಸೆಟ್ಟೇರಲಿದೆ.