Don't Miss!
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- News Priyank Kharge Life Threat: ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಖ್ಯಾತ ಹಿನ್ನೆಲೆ ಗಾಯಕ ಮನ್ನಾ ಡೇಗೆ ಫಾಲ್ಕೆ ಪ್ರಶಸ್ತಿ
ಮನ್ನಾ ಡೇ ಅವರು ಖ್ಯಾತ ಹಿನ್ನೆಲೆ ಗಾಯಕರಾದ ಮಹಮದ್ ರಫಿ, ಕಿಶೋರ್ ಕುಮಾರ್, ಮುಖೇಶ್ ಅವರ ಸಮಕಾಲೀನರು. ಐವತ್ತು, ಅರವತ್ತು ಮತ್ತು ಎಪ್ಪತ್ತರ ದಶಕದಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದ ಮಹಾನ್ ಗಾಯಕ. ತಮ್ಮ ಜೀವನದ ಸಂಧ್ಯಾಕಾಲವನ್ನು ಬೆಂಗಳೂರಿನ ಕಲ್ಯಾಣನಗರದಲ್ಲಿ ಕಳೆಯುತ್ತಿರುವ ಮನ್ನಾ ಡೇ ಕನ್ನಡಿಗರ ಪ್ರೀತಿ ಗಳಿಸಿದ್ದಾರೆ.
ಕನ್ನಡದಲ್ಲಿ ಉದಯ್ ಕುಮಾರ್ ನಟಿಸಿದ್ದ ಕಲಾವತಿ ಚಿತ್ರದಲ್ಲಿ ಕುಹೂ ಕುಹೂ ಎನ್ನುತ ಹಾಡುವಾ ಕೋಗಿಲೆ... ಜಯತೆ ಜಯತೆ ಸತ್ಯಮೇವ ಜಯತೆ...ಹಾಡುಗಳು ಅವರ ಕಂಠಸಿರಿಯಿಂದ ಹೊಮ್ಮಿವೆ. ಹಿಂದಿಯಲ್ಲಿ ವಖ್ತ್ ಚಿತ್ರದ ಏ ಮೇರೆ ಜೋಹೊರ್ ಜಭೀನ್... ಆನಂದ್ ಚಿತ್ರದ ಜಿಂದಗಿ ಕೈಸೆ ಹೈ ಪಹೇಲಿ ಹಾಯ್...ಮುಂತಾದ ಜನಪ್ರಿಯ ಗೀತೆಗಳಿಂದ ಜನಮನ ಸೂರೆಗೊಂಡಿದ್ದಾರೆ.
ಎಸ್ ಡಿ ಬರ್ಮನ್, ಶಂಕರ್ ಜೈ ಕಿಶನ್ , ರವಿ, ಲಕ್ಷ್ಮಿಕಾಂತ್ ಪ್ಯಾರೆಲಾಲ್ ಸೇರಿದಂತೆ ಎಲ್ಲಾ ಖ್ಯಾತ ಸಂಗೀತ ನಿರ್ದೇಶಕರ ರಾಗಸಂಯೋಜನೆಗೆ ತಮ್ಮ ಕಂಠ ಒದಗಿಸಿದ್ದಾರೆ. 1953ರ ಡಿಸೆಂಬರ್ 18ರಂದು ಕೇರಳ ಮೂಲದ ಸುಲೋಚನಾ ಕುಮಾರನ್ ಅವರೊಡನೆ ವಿವಾಹ. ಶೌರುಮಾ, ಸುಮಿತಾ ಇಬ್ಬರು ಪುತ್ರಿಯರು. ಮುಂಬೈನಲ್ಲಿ 50 ವರ್ಷಕಾಲ ವಾಸ. ಸದ್ಯ ಬೆಂಗಳೂರಿನ ಕಲ್ಯಾಣ ನಗರ ನಿವಾಸಿ.
ಮನ್ನಾ ಡೇ ಅವರಿಗೆ ತಡವಾಗಿಯಾದರೂ ಫಾಲ್ಕೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮವನ್ನು ಉಂಟು ಮಾಡಿದೆ. ಪ್ರಸ್ತುತ ಅಮೆರಿಕಾ ಪ್ರವಾಸದಲ್ಲಿರುವ ಮನ್ನಾ ಡೇ ಅವರು ಈ ಬಗ್ಗೆ ಪ್ರತಿಕ್ರಿಯಿಸಲು ಲಭ್ಯವಾಗಿಲ್ಲ. ಅಕ್ಟೋಬರ್ 21ರಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ವೃತ್ತಿ
ಜೀವನ:
*ಮಾವ
ಕೆಸಿ
ಡೇ
ಮೂಲಕ
ಸಚಿನ್
ದೇವ್
ಬರ್ಮನ್
ಪರಿಚಯ.
ಉಸ್ತಾದ್
ಅಮಾನ್
ಅಲಿಖಾನ್
ಹಾಗೂ
ಉಸ್ತಾದ್
ಅಬ್ದುಲ್
ರಹಮಾನ್
ಖಾನ್
ಬಳಿ
ಹಿಂದೂಸ್ತಾನಿ
ಸಂಗೀತ
ಪಾಠ.
*1943
ತಮನ್ನಾ
ಚಿತ್ರದ
ಮೂಲಕ
ಹಿನ್ನೆಲೆ
ಗಾಯಕರಾದರು.
ನಂತರ
ಸಂಗೀತ
ನಿರ್ದೇಶಕರಾದ
ಶಂಕರ್
ಜೈ
ಕಿಷನ್,
ಆರ್
ಡಿ
ಬರ್ಮನ್,
ಸಲೀಲ್
ಚೌಧರಿ,
ರವಿ,
ಜೈದೇವ್,
ಲಕ್ಷ್ಮಿಕಾಂತ್
ಪ್ಯಾರೇಲಾಲ್,
ಹೇಮಂತ್
ಕುಮಾರ್,
ಕಲ್ಯಾಣ್
ಜಿ
ಆನಂದ್
ಜಿ
ಮುಂತಾದವರ
ಸಂಯೋಜನೆಗೆ
ಗಾಯನ.
*
ಕಿಶೋರ್
ಕುಮಾರ್,
ಮುಖೇಶ್,
ಹೇಮಂತ್
ಕುಮಾರ್,
ಮಹಮದ್
ರಫಿ,
ಲತಾ
ಮಂಗೇಷ್ಕರ್,
ಸೈರೈಯಾ
ಜತೆ
ಗಾಯನ.
ಪ್ರಶಸ್ತಿ,
ಗೌರವಗಳು:
*1971ರಲ್ಲಿ
ಪದ್ಮಶ್ರೀ,
2005ರಲ್ಲಿ
ಪದ್ಮ
ಭೂಷಣ
ಪ್ರಶಸ್ತಿ
*1969,
1971
ಅತ್ಯುತ್ತಮ
ಗಾಯಕ
ರಾಷ್ಟ್ರ
ಪ್ರಶಸ್ತಿ
*
ಮಧ್ಯಪ್ರದೇಶ
ಸರ್ಕಾರದಿಂದ
ಲತಾ
ಮಂಗೇಷ್ಕರ್
ಪ್ರಶಸ್ತಿ
*
2009ರಲ್ಲಿ
2007
ಸಾಲಿನ
ದಾದಾ
ಸಾಹೇಬ್
ಫಾಲ್ಕೆ
ಪ್ರಶಸ್ತಿ
*
ಜಾದವ್
ಪುರ್
ವಿವಿ,
ಬುರ್ದ್ವನ್
ವಿವಿ,
ರವೀಂದ್ರ
ಭಾರತಿ
ವಿವಿಗಳಿಂದ
ಗೌರವ
ಡಾಕ್ಟರೇಟ್
*
ಒರಿಸ್ಸಾ,
ಮಹಾರಾಷ್ಟ್ರ,
ಕೇರಳ,
ಪಶ್ಚಿಮ
ಬಂಗಾಳ,
ಮಧ್ಯಪ್ರದೇಶ್
ಸರ್ಕಾರಗಳಿಂದ
ಗೌರವಾದರ.
*
ಅನಂದ್
ಬಜಾರ್,
ಕಮಲಾದೇವಿ
ಗ್ರೂಪ್,
ಪಿಸಿ
ಚಂದ್ರ
ಗ್ರೂಪ್,
ಮಿಥುನ್
ಅಭಿಮಾನಿಗಳ
ಸಂಘ,
ಢಾಕಾ
ಹಾಗೂ
ಪುರಿಯ
ಸಂಘಟನೆಗಳಿಂದ
ಗೌರವ.
(ದಟ್ಸ್ ಕನ್ನಡ ಚಿತ್ರವಾರ್ತೆ)