Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಡಿಯೋ : ಬೇಂದ್ರೆ ಜನ್ಮದಿನಕ್ಕೆ ಕುರುಡು ಕಾಂಚಾಣಕ್ಕೆ ಹೊಸ ರೂಪ
''ಕುರುಡು ಕಾಂಚಾಣಾ ಕುಣಿಯುತಲಿತ್ತು ಕಾಲಿಗೆ ಬಿದ್ದವರ ತುಳಿಯುತಲಿತ್ತೋ'' ಹಾಡು ಯಾರಿಗೆ ತಾನೇ ತಿಳಿದಿಲ್ಲ. ವರಕವಿ ದ ರಾ ಬೇಂದ್ರೆ ಅವರ ಈ ಜನಪ್ರಿಯ ಹಾಡು ಈಗ ಹೊಸ ರೂಪ ಪಡೆದುಕೊಂಡಿದೆ.
'ಆ ಒಂದು ನೋಟು' ಎಂಬ ಕನ್ನಡ ಸಿನಿಮಾದಲ್ಲಿ 'ಕುರುಡು ಕಾಂಚಾಣಾ ಕುಣಿಯುತಲಿತ್ತು..' ಹಾಡು ಬಳಸಿಕೊಂಡಿದ್ದು, ಈ ದಿನ ಬೇಂದ್ರೆ ಅವರ ಜನ್ಮದಿನದ ವಿಶೇಷವಾಗಿ ಬಿಡುಗಡೆ ಮಾಡಲಾಗಿದೆ. ಲಹರಿ ಯೂ ಟ್ಯೂಬ್ ಚಾನಲ್ ನಲ್ಲಿ ಹಾಡು ರಿಲೀಸ್ ಆಗಿದ್ದು, ಒಳ್ಳೆಯ ಪ್ರತಿಕ್ರಿಯೆ ಹಾಡಿಗೆ ಸಿಕ್ಕಿದೆ.
ಬೇಂದ್ರೆ ಅಂದ್ರ ಕನ್ನಡ, ಬೇಂದ್ರೆ ಅಂದ್ರ ಕನ್ನಡಿ
ಕೌಶಿಕ್ ಹಾಡಿಗೆ ಸಂಗೀತ ನೀಡಿದ್ದಾರೆ. ಕಲಾವತಿ ಪುತ್ರನ್ ಅವರ ಧ್ವನಿ ಹಾಡಿಗೆ ಶಕ್ತಿ ತುಂಬಿದೆ. ಈ ಹಿಂದೆ ಸಿ ಅಶ್ವತ್ ಸಹ ವರಕವಿಯ ಈ ಹಾಡಿಗೆ ಜೀವ ನೀಡಿದ್ದರು. ಈಗ ಈ ಸಿನಿಮಾ ಮೂಲಕ ಸಹ ಕುರುಡು ಕಾಂಚಾಣಾ ಎಲ್ಲರನ್ನು ಕುಣಿಸುತ್ತಿದೆ.
ರತ್ನತನಯ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಹರೀಶ್ ಕೆ ಗೌಡ ಸಹ ನಿರ್ದೇಶನ ಸಿನಿಮಾಗೆ ಇದೆ. ಎಮ್ ಕೆ ಜಗದೀಶ್ ಮತ್ತು ಪ್ರೇಮ್ ನಾಥ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.
ಎರಡು ಸಾವಿರ ರೂಪಾಯಿ ಚಿತ್ರದ ಪ್ರಮುಖ ವಿಷಯವಾಗಿದ್ದು, ಅದರ ಸುತ್ತ ಸಿನಿಮಾದ ಪಾತ್ರಗಳು ಸುತ್ತುತ್ತದೆಯಂತೆ.