Don't Miss!
- News 2024ರ ಲೋಸಕಭೆ ಚುನಾವಣೆಗೆ ಮತ ಹಾಕುವುದು ಹೇಗೆ?
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಷ್ಣುವರ್ಧನ್ ಹಾಡಿಗೆ ದನಿಗೂಡಿಸಿದ ನಟ ಉಪೇಂದ್ರ-ಅನಿರುದ್ಧ್
ದಿವಂಗತ ನಟ ಡಾ ವಿಷ್ಣುವರ್ಧನ್ ಅವರ ಎವರ್ಗ್ರೀನ್ ಹಾಡಿಗೆ ರಿಯಲ್ ಸ್ಟಾರ್ ಉಪೇಂದ್ರ ದನಿಗೂಡಿಸಿದ್ದಾರೆ. ವಿಷ್ಣು ನಟನೆಯಲ್ಲಿ ಮೂಡಿ ಬಂದಿದ್ದ 'ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು...' ಹಾಡನ್ನು ಉಪ್ಪಿ ಹಾಡಿದ್ದಾರೆ.
ನಟ ಉಪೇಂದ್ರ, ಅನಿರುದ್ಧ್, ವಿಜಯ್ ರಾಘವೇಂದ್ರ ಮೂವರು ಸೇರಿ ಈ ಹಾಡಿಗೆ ದನಿಗೂಡಿಸಿದ್ದಾರೆ. ಈ ವಿಡಿಯೋವನ್ನು ಸ್ವತಃ ಅನಿರುದ್ಧ್ ತಮ್ಮ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
'ಅಂಬಿಗೆ ವಿಷ್ಣು ಕೇವಲ ಸ್ನೇಹಿತರಾಗಿರಲಿಲ್ಲ, ಪ್ರಾಣವೇ ಆಗಿದ್ದರು'- ಸುಮಲತಾ
ಇದು ಯಾವ ಸಂದರ್ಭ, ಎಲ್ಲಿ ಮತ್ತು ಯಾವಾಗ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದ್ರೆ, ಈ ಎಲ್ಲರ ಒಟ್ಟಿಗೆ ಸೇರಿದ ಸಮಯದಲ್ಲಿ ಈ ಹಾಡನ್ನು ಅನಿರುದ್ಧ್ ಹಾಡಿದ್ದಾರೆ. ಜೊತೆಯಲ್ಲಿ ಉಪೇಂದ್ರ ಮತ್ತು ವಿಜಯ ರಾಘವೇಂದ್ರ ಅವರು ದನಿಗೂಡಿಸಿದ್ದಾರೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕನ್ನಡ ಚಿತ್ರರಂಗದ ಮೂವರು ಜಂಟಲ್ಮ್ಯಾನ್ ಒಂದೇ ಕಡೆ ಹಾಗೂ ವಿಷ್ಣು ದಾದಾ ಹಾಡನ್ನು ಹಾಡುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಅಂದ್ಹಾಗೆ, ಉಪೇಂದ್ರ-ಅನಿರುದ್ಧ್-ವಿಜಯರಾಘವೇಂದ್ರ ಅವರು ಹಾಡಿರುವ ಹಾಡು ಹೊಂಬಿಸಿಲು ಚಿತ್ರದ 'ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು........'.
ಗೀತಪ್ರಿಯ ಅವರು ಸಾಹಿತ್ಯ ರಚಿಸಿದ್ದ ಈ ಹಾಡಿಗೆ ರಾಜನ್-ನಾಗೇಂದ್ರ ಸಂಗೀತ ನೀಡಿದ್ದರು. ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿದ್ದರು. ವಿಷ್ಣುವರ್ಧನ್ ಮತ್ತು ಆರತಿ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.