Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೂರರ ಸಂಭ್ರಮದಲ್ಲಿ 'ಬೆಲ್ ಬಾಟಂ' ವಿಶೇಷ ಹಾಡು ಬಿಡುಗಡೆ
'ಬೆಲ್ ಬಾಟಂ' ಸಿನಿಮಾ ಈ ವರ್ಷ ನೂರು ದಿನ ಪೂರೈಸಿದ ಮೊದಲ ಚಿತ್ರವಾಗಿದೆ. ಈ ಸಂತಸದಲ್ಲಿ ಸಿನಿಮಾದ ಬಹು ಮುಖ್ಯ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
'ಆದಿ ಜ್ಯೋತಿ ಬನ್ಯೋ..' ಹಾಡು ಇದೀಗ ಯೂ ಟ್ಯೂಬ್ ನಲ್ಲಿ ಹೊರ ಬಂದಿದೆ. ಸಿನಿಮಾದ ಬಹುಮುಖ್ಯವಾಗಿರುವ ಈ ಹಾಡನ್ನು ಯೂಟ್ಯೂಬ್ ನಲ್ಲಿಯೂ ಈಗ ನೋಡಬಹುದಾಗಿದೆ. ಚಿತ್ರದ ದೊಡ್ಡ ತಿರುವು ಈ ಹಾಡಿನಲ್ಲಿ ನಡೆಯಲಿದ್ದು, ಈ ಕಾರಣ ಇದುವರೆಗೆ ಹಾಡಿನ ವಿಡಿಯೋವನ್ನು ಬಿಡುಗಡೆ ಮಾಡಿರಲಿಲ್ಲ.
ಅಂದಹಾಗೆ, ಈ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಜನಪದ ಹಾಡನ್ನು ಸಿನಿಮಾಗೆ ಬಳಸಿಕೊಳ್ಳಲಾಗಿದೆ. ಕಡಬಗೆರೆ ಮುನಿರಾಜು ಎಂಬ ಜನಪದ ಗಾಯಕ ಈ ಹಾಡನ್ನು ಹಾಡಿದ್ದಾರೆ.
ಸದ್ಯಕ್ಕೆ, ಯೂಟ್ಯೂಬ್ ನಲ್ಲಿ ಕಡಿಮೆ ಹಿಟ್ಸ್ ಸಿಕ್ಕಿದ್ದರೂ ಹಾಡು ನೋಡಿದ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಹಾಡಿನ ಅರ್ಥವನ್ನು ಕೊಂಡಾಡಿದ್ದಾರೆ. ರಂಗಭೂಮಿ ಹಾಗೂ ಜನಪದದ ಬಗ್ಗೆ ಆಗಾದ ಪ್ರೀತಿ ಹೊಂದಿರುವ ನಿರ್ದೇಶಕ ಜಯತೀರ್ಥ ಈ ಹಾಡನ್ನು ತಮ್ಮ ಸಿನಿಮಾಗೆ ಬಳಸಿಕೊಂಡಿದ್ದಾರೆ.
'ಬೆಲ್ ಬಾಟಂ' ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾ ನಟನೆಯ ಸಿನಿಮಾವಾಗಿದ್ದು, ಮೇ 24 ಕ್ಕೆ ಸರಿಯಾಗಿ ಚಿತ್ರ ನೂರು ದಿನ ಪೂರೈಸಿತ್ತು.