Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೂರರ ಸಂಭ್ರಮದಲ್ಲಿ 'ಬೆಲ್ ಬಾಟಂ' ವಿಶೇಷ ಹಾಡು ಬಿಡುಗಡೆ
'ಬೆಲ್ ಬಾಟಂ' ಸಿನಿಮಾ ಈ ವರ್ಷ ನೂರು ದಿನ ಪೂರೈಸಿದ ಮೊದಲ ಚಿತ್ರವಾಗಿದೆ. ಈ ಸಂತಸದಲ್ಲಿ ಸಿನಿಮಾದ ಬಹು ಮುಖ್ಯ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
'ಆದಿ ಜ್ಯೋತಿ ಬನ್ಯೋ..' ಹಾಡು ಇದೀಗ ಯೂ ಟ್ಯೂಬ್ ನಲ್ಲಿ ಹೊರ ಬಂದಿದೆ. ಸಿನಿಮಾದ ಬಹುಮುಖ್ಯವಾಗಿರುವ ಈ ಹಾಡನ್ನು ಯೂಟ್ಯೂಬ್ ನಲ್ಲಿಯೂ ಈಗ ನೋಡಬಹುದಾಗಿದೆ. ಚಿತ್ರದ ದೊಡ್ಡ ತಿರುವು ಈ ಹಾಡಿನಲ್ಲಿ ನಡೆಯಲಿದ್ದು, ಈ ಕಾರಣ ಇದುವರೆಗೆ ಹಾಡಿನ ವಿಡಿಯೋವನ್ನು ಬಿಡುಗಡೆ ಮಾಡಿರಲಿಲ್ಲ.
ಅಂದಹಾಗೆ, ಈ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಜನಪದ ಹಾಡನ್ನು ಸಿನಿಮಾಗೆ ಬಳಸಿಕೊಳ್ಳಲಾಗಿದೆ. ಕಡಬಗೆರೆ ಮುನಿರಾಜು ಎಂಬ ಜನಪದ ಗಾಯಕ ಈ ಹಾಡನ್ನು ಹಾಡಿದ್ದಾರೆ.
ಸದ್ಯಕ್ಕೆ, ಯೂಟ್ಯೂಬ್ ನಲ್ಲಿ ಕಡಿಮೆ ಹಿಟ್ಸ್ ಸಿಕ್ಕಿದ್ದರೂ ಹಾಡು ನೋಡಿದ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಹಾಡಿನ ಅರ್ಥವನ್ನು ಕೊಂಡಾಡಿದ್ದಾರೆ. ರಂಗಭೂಮಿ ಹಾಗೂ ಜನಪದದ ಬಗ್ಗೆ ಆಗಾದ ಪ್ರೀತಿ ಹೊಂದಿರುವ ನಿರ್ದೇಶಕ ಜಯತೀರ್ಥ ಈ ಹಾಡನ್ನು ತಮ್ಮ ಸಿನಿಮಾಗೆ ಬಳಸಿಕೊಂಡಿದ್ದಾರೆ.
'ಬೆಲ್ ಬಾಟಂ' ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾ ನಟನೆಯ ಸಿನಿಮಾವಾಗಿದ್ದು, ಮೇ 24 ಕ್ಕೆ ಸರಿಯಾಗಿ ಚಿತ್ರ ನೂರು ದಿನ ಪೂರೈಸಿತ್ತು.