Don't Miss!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- News ದಲಿತರ ಅಭಿವೃದ್ಧಿಯನ್ನು ಬಿಜೆಪಿ ಮಾಡಿಲ್ಲ; ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂಯುಕ್ತ ಪಾಟೀಲ್
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವಯಸ್ಸಿನಲ್ಲಿ ಪ್ರಶಸ್ತಿ ನೀಡಿ ಅವಮಾನಿಸಬೇಡಿ: ಪದ್ಮ ಪ್ರಶಸ್ತಿ ನಿರಾಕರಿಸಿದ ಹಿರಿಯ ಗಾಯಕಿ
ನಿನ್ನೆಯಷ್ಟೆ (ಜನವರಿ 25) ಕೇಂದ್ರ ಸರ್ಕಾರವು ನಾಗರೀಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಘೋಷಿಸಿದೆ. ಹಲವು ರಾಜಕಾರಣಿಗಳು, ಕಲಾವಿದರು, ವಿಜ್ಞಾನಿಗಳು, ಸಮಾಜ ಸೇವಕರು, ಗಣಿತಜ್ಞರು ಇತರೆ ರಂಗದ ಸಾಧಕರಿಗೆ ಪದ್ಮ ಪ್ರಶಸ್ತಿ ಘೋಷಿಸಲಾಗಿದೆ.
ಕಲಾ ವಿಭಾಗದಲ್ಲಿ 90 ವರ್ಷ ವಯಸ್ಸಿನ ಪಶ್ಚಿಮ ಬಂಗಾಳದ ಹಿರಿಯ ಗಾಯಕಿ ಸಂಧ್ಯಾ ಮುಖರ್ಜಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿತ್ತು. ಆದರೆ ಗಾಯಕಿಯು ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. ಆ ಮೂಲಕ ಈ ವರ್ಷ ಪದ್ಮ ಪ್ರಶಸ್ತಿ ನಿರಾಕರಿಸಿದ ಎರಡನೇ ವ್ಯಕ್ತಿ ಎನಿಸಿಕೊಂಡಿದ್ದಾರೆ ಸಂಧ್ಯಾ ಮುಖರ್ಜಿ.
''ಈ ವಯಸ್ಸಿನಲ್ಲಿ ಪದ್ಮ ಪ್ರಶಸ್ತಿ ನೀಡಿ ನನ್ನನ್ನು ಅವಮಾನಿಸಬೇಡಿ. ಯಾರಿಗಾದರೂ ಅರ್ಹ ಯುವ ಗಾಯಕರಿಗೆ ಆ ಪ್ರಶಸ್ತಿ ನೀಡಿ ಅವರನ್ನು ಪ್ರೋತ್ಸಾಹಿಸಿ'' ಎಂದು ದೆಹಲಿಯ ಅಧಿಕಾರಿಗೆ ಸಂಧ್ಯಾ ಮುಖರ್ಜಿ ಹೇಳಿದ್ದಾರೆ. ಈ ವಿಷಯವನ್ನು ಸಂಧ್ಯಾ ಅವರ ಪುತ್ರಿ ಸೌಮಿ ಸೇನ್ಗುಪ್ತ ಮಾಧ್ಯಮಗಳಿಗೆ ತಿಳಿಸಿದ್ದಾರೆ.
'ಸಂಧ್ಯಾ ಮುಖರ್ಜಿಯವರು ಪದ್ಮಶ್ರೀ ಪ್ರಶಸ್ತಿ ಬೇಡವೆಂದಿರುವ ಹಿಂದೆ ಯಾವುದೇ ರಾಜಕೀಯ ಇಲ್ಲ. ಸಂಧ್ಯಾ ಮುಖರ್ಜಿ ಅವರು ಪ್ರಶಸ್ತಿ ಬೇಡ ಎಂದಿರುವುದಕ್ಕೆ ಯಾವುದೇ ರಾಜಕೀಯವನ್ನು ಬೆರೆಸಬೇಡಿ'' ಎಂದು ಸೌಮಿ ಗುಪ್ತ ಮನವಿ ಮಾಡಿದ್ದಾರೆ.
ಸಂಧ್ಯಾ ಮುಖರ್ಜಿ 8 ದಶಕಗಳಿಂದಲೂ ಗಾಯಕಿಯಾಗಿ, ಹಿನ್ನೆಲೆ ಗಾಯಕಿಯಾಗಿ ಗುರಿತಿಸಿಕೊಂಡಿದ್ದಾರೆ. ಸಾವಿರಾರು ಬಂಗಾಳಿ ಸಿನಿಮಾ ಹಾಡುಗಳಿಗೆ ಸಂಧ್ಯಾ ಮುಖರ್ಜಿ ದನಿಯಾಗಿದ್ದಾರೆ. ಹೇಮಂತ್ ಮುಖರ್ಜಿ ಅವರೊಟ್ಟಿಗಿನ ಅವರ ಯುಗಳ ಗೀತೆಗಳು ಈಗಲೂ ಜನಪ್ರಿಯ. ಬಂಗಾಳಿ ಭಾಷೆಯಲ್ಲಿ ಮಾತ್ರವೇ ಅಲ್ಲದೆ ಭಾರತದ ಇತರ ಭಾಷೆಗಳ ಸಿನಿಮಾಗಳಲ್ಲಿಯೂ ಹಾಡಿದ್ದಾರೆ ಸಂಧ್ಯಾ ಮುಖರ್ಜಿ.
ಸಂಧ್ಯಾ ಮುಖರ್ಜಿ ಮಾತ್ರವೇ ಅಲ್ಲದೆ ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ ಭಟ್ಟಾಚಾರ್ಯ ಅವರೂ ಸಹ ಪದ್ಮ ಪ್ರಶಸ್ತಿಯನ್ನು ಬೇಡವೆಂದಿದ್ದಾರೆ. ನನ್ನ ಹೆಸರನ್ನು ಪ್ರಶಸ್ತಿಗೆ ಕಳುಹಿಸಿಕೊಟ್ಟಿರುವ ವಿಚಾರ ನನಗೆ ಗೊತ್ತಿರಲಿಲ್ಲ. ಈಗ ಬಂದಿರುವ ಪ್ರಶಸ್ತಿಯೂ ನನಗೆ ಬೇಡ ಎಂದು ಅವರು ಹೇಳಿದ್ದಾರೆ. ಆ ಮೂಲಕ ಪಶ್ಚಿಮ ಬಂಗಾಳದ ಇಬ್ಬರು ಪದ್ಮ ಪ್ರಶಸ್ತಿಗಳನ್ನು ತಿರಸ್ಕರಿಸಿದಂತಾಗಿದೆ.
ಕಲಾ ವಿಭಾಗದಲ್ಲಿ ಹಿನ್ನೆಲೆ ಗಾಯಕ ಸೋನು ನಿಗಮ್, ತಮಿಳು ಮೂಲದ ನಟಿ ಸಾವ್ಕಾರ್ ಜಾನಕಿ, ಹಿರಿಯ ಸಿನಿಮಾ ನಟ ವಿಕ್ಟರ್ ಬ್ಯಾನರ್ಜಿ, ಸಿನಿಮಾ ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ, ಕನ್ನಡದ ಸಾಹಿತಿ, ಸಿನಿಮಾಗಳಿಗೂ ಕೆಲವು ಹಾಡುಗಳನ್ನು ಬರೆದಿರುವ ಕವಿ ಸಿದ್ಧಲಿಂಗಯ್ಯ (ಮರಣೋತ್ತರ) ಸೇರಿ ಇನ್ನೂ ಅನೇಕರಿಗೆ ಪದ್ಮ ಪ್ರಶಸ್ತಿ ನೀಡಲಾಗಿದೆ.