Don't Miss!
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- News Tirumala Property: ತಿರುಪತಿ ತಿರುಮಲ ಶ್ರೀವಾರಿಯ 2023-24ರ ಆಸ್ತಿ ವಿವರ ಇಲ್ಲಿದೆ..
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರುಸ್ತುಂ' ನಲ್ಲಿ ಮರು ಬಳಕೆ ಆಯ್ತು 'ಡೈರೆಕ್ಟರ್ ಸ್ಪೆಷಲ್' ಹಾಡು
Recommended Video
ಶಿವರಾಜ್ ಕುಮಾರ್ ನಟನೆಯ 'ರುಸ್ತುಂ' ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಇತ್ತೀಚಿಗಷ್ಟೆ ಸಿನಿಮಾದ ಮೂರನೇ ಹಾಡು ರಿಲೀಸ್ ಆಗಿದೆ.
ಎರಡು ಮಾಸ್ ಹಾಡುಗಳ ಬಳಿಕ ಮಧುರ ಗೀತೆಯನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಈ ಹಾಡು 'ಡೈರೆಕ್ಟರ್ ಸ್ಪೆಷಲ್' ಸಿನಿಮಾದಾಗಿದೆ.
ವಿಡಿಯೋ : ಪೊಲೀಸ್ ಬೇಬಿ ಬಳಿಕ 'ರುಸ್ತುಂ' ಎರಡನೇ ಹಾಡು ರಿಲೀಸ್
'ಡೈರೆಕ್ಟರ್ ಸ್ಪೆಷಲ್' ಚಿತ್ರದಲ್ಲಿ 'ದೇವರೇ ಆಗಾದ ನಿನ್ನ ಮಹಿಮೆಯ ಕಡಲು..' ಎಂಬ ಹಾಡು ಇತ್ತು. ಕವಿ ಬಿ ಆರ್ ಲಕ್ಷಣ್ ರಾವ್ ಅವರ ಹಾಡನ್ನು ಆ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿತ್ತು. ಒಳ್ಳೆಯ ಸಂಗೀತ ಬೆರೆತ ಕಾರಣ ಹಾಡಿನ ಅಂದ ಮತ್ತಷ್ಟು ಜಾಸ್ತಿಯಾಗಿತ್ತು.
ಆ ಸಿನಿಮಾಗೆ ಮ್ಯೂಸಿಕ್ ನೀಡಿ ಆ ಹಾಡನ್ನು ಹಾಡಿದ್ದರು ಅನೂಪ್ ಸಿಳೀನ್. ಈಗ ಅನೂಪ್ ತಮ್ಮ 'ರುಸ್ತುಂ' ಚಿತ್ರಕ್ಕೂ ಅದೇ ಹಾಡನ್ನು ಮರುಬಳಕೆ ಮಾಡಿದ್ದಾರೆ. ಈ ಬಾರಿ ಇದು ಸೆಂಟಿಮೆಂಟ್ ಹಾಡಾಗಿದೆ.
ಅದೇ ಸಾಹಿತ್ಯಕ್ಕೆ ಹೊಸ ಸಂಗೀತ ಸೇರಿಸಿ, ಕೈಲಾಶ್ ಖೇರ್ ರಿಂದ ಹಾಡನ್ನು ಹಾಡಿಸಿದ್ದು, ಹೊಸ ರೂಪ ಸಿಕ್ಕಿದೆ. ಯೂ ಟ್ಯೂಬ್ ನಲ್ಲಿ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.
'ರುಸ್ತುಂ' ಚಿತ್ರದ ಹಾಡು ಕೇಳಲು ಇಲ್ಲಿ ಕ್ಲಿಕ್ ಮಾಡಿ.