Don't Miss!
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Automobiles Bangaluru: ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ.. ಎಷ್ಟಿದೆ ದರ?
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾರಕಾಸುರನಿಗೆ ಭರ್ಜರಿ ಚೇತನ್ ಸಾಥ್
ಟೈಟಲ್ ನಿಂದಲೇ ಕುತೂಹಲವನ್ನು ಮೂಡಿಸಿದ ಚಿತ್ರ 'ತಾರಕಾಸುರ'. ಸಿನಿಮಾ ಚಿತ್ರೀಕರಣ ಹಂತದಲ್ಲಿ ಇರುವಾಗಲೇ ಡಬ್ಬಿಂಗ್ ಹಕ್ಕು ಮಾರಾಟವಾಗಿರುವ ಸಿನಿಮಾ. 'ರಥಾವರ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಹಲವಾರು ವಿಚಾರಗಳಿಂದ ಸುದ್ದಿ ಆಗಿರುವ ತಾರಕಾಸುರ ಚಿತ್ರತಂಡದಿಂದ ಮತ್ತೊಂದು ವಿಚಾರ ಹೊರಬಿದ್ದಿದೆ.
ಸ್ಟಾರ್ ನಟರಿಗೆ ಲಿರಿಕ್ ಬರೆದು ಬಾಕ್ಸ್ ಆಫೀಸ್ ನಲ್ಲಿ ಆ ಹಾಡು ಹಿಟ್ ಆಗುವಂತೆ ಮಾಡಿರುವ ನಿರ್ದೇಶಕ ಹಾಗೂ ಚಿತ್ರ ಸಾಹಿತಿ ಬಹದ್ದೂರ್ ಚೇತನ್ ತಾರಕಾಸುರ ಚಿತ್ರಕ್ಕೆ ಹಾಡನ್ನ ಬರೆದಿದ್ದಾರೆ. ವಿಶೇಷ ಅಂದರೆ ಇತ್ತೀಚಿಗಷ್ಟೇ 'ಕನಕ' ಸಿನಿಮಾದ "ಎಣ್ಣೆ ನಮ್ಸು ಊಟ ನಿಮ್ದು" ಹಾಡನ್ನ ಹಾಡಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ಗಾಯಕ ನವೀನ್ ಸಜ್ಜು ಚೇತನ್ ಬರೆದ ಸಾಹಿತ್ಯಕ್ಕೆ ಧ್ವನಿ ಆಗಿದ್ದಾರೆ.
ಜರ್ಮನ್ ಯುವಕನ ಕನ್ನಡ ಪ್ರೇಮಕ್ಕೆ ತಲೆ ಬಾಗಿದ ಅಣ್ಣಾವ್ರ ಮಗ ಪುನೀತ್
ತಾರಕಾಸುರ ಸಿನಿಮಾ ಮೂಲ ವೈಭವ್ ಕನ್ನಡ ಸಿನಿಮಾರಂಗಕ್ಕೆ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ' ಕಾರ್ಯದರ್ಶಿ ನರಸಿಂಹಲು ಚಿತ್ರ ನಿರ್ಮಾಣ ಮಾಡುವುದರ ಜೊತೆಗೆ ತಮ್ಮ ಮಗನನ್ನ ಚಿತ್ರರಂಗಕ್ಕೆ ಹೀರೋ ಆಗಿ ಪರಿಚಯಿಸುತ್ತಿದ್ದಾರೆ.
ಚಂದನವನದ ಕೆಂಡಸಂಪಿಗೆ ಮಾನ್ವಿತಾ ಹರೀಶ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಧರ್ಮ ವಿಶ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು ಕುಮಾರ್ ಗೌಡ ಕ್ಯಾಮೆರಾ ವರ್ಕ್ ಸಿನಿಮಾಗಿದೆ. ಚಿತ್ರದಲ್ಲಿ ಖಳನಟನಾಗಿ ಡ್ಯಾನಿ ಸಫಾನಿ ಅಭಿನಯಿಸಿರುವುದು ಚಿತ್ರಕ್ಕೆ ಮತ್ತೊಂದು ವಿಶೇಷ.
ಸದ್ಯ ಚಿತ್ರೀಕರಣ ಮುಗಿಸಿರುವ ನಿರ್ದೇಶಕರು ಚುನಾವಣೆಯ ನಂತರ ಸಿನಿಮಾವನ್ನ ತೆರೆಗೆ ತರುವ ಆಲೋಚನೆಯಲ್ಲಿದ್ದಾರೆ. ಚಿತ್ರದ ಹಾಡುಗಳನ್ನ ಇನ್ನು ಕೆಲವೇ ದಿನಗಳಲ್ಲಿ ಪ್ರೇಕ್ಷಕರಿಗೆ ಕೇಳಿಸುವಂತಹ ಪ್ರಯತ್ನ ಮಾಡಲಿದೆ ಸಿನಿಮಾತಂಡ.
'ಟಗರು' ಗೆದ್ದ ಖುಷಿಯಲ್ಲಿ ಬಂತು 'ಬದುಕಿನ ಬಣ್ಣವೇ..' ಹಾಡು