Don't Miss!
- News ಆಕ್ಸಿಸ್ ಬ್ಯಾಂಕ್ಗೆ ಬರೋಬ್ಬರಿ 7,129 ಕೋಟಿ ರೂಪಾಯಿ ಲಾಭ!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಈ ಹೃದಯ ಹಾಡಿದೆ' ವಿಷ್ಣು ವಿಶೇಷ ಸಂಗೀತ ಸಂಜೆ
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಗೀತೆಗಳೆಂದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. 'ವಿಷ್ಣುಸೇನೆ' ಚಿತ್ರದಲ್ಲಿ "ಅಭಿಮಾನಿಗಳೇ ನನ್ನ ಪ್ರಾಣ.." ಎಂದು ಹಾಡುವ ಮೂಲಕ ಅವರ ಹೃದಯ ಸಿಂಹಾಸವನ್ನು ನೇರವಾಗಿ ಅಲಂಕರಿಸಿದ ಕಲಾವಿದ ವಿಷ್ಣುದಾದಾ.
ವಿಷ್ಣು ಅವರ ಕಂಠಸಿರಿಯಲ್ಲಿ ಹಲವಾರು ಗೀತೆಗಳು ಮೂಡಿಬಂದಿವೆ. ಅವುಗಳಲ್ಲಿ ಪ್ರಮುಖವಾಗಿ 'ಸಾಹಸಸಿಂಹ' ಚಿತ್ರದ ಹೇಗಿದ್ದರೂ ನೀನೇ ಚೆನ್ನ, 'ಜಿಮ್ಮಿ ಗಲ್ಲು' ಚಿತ್ರದ ತುತ್ತು ಅನ್ನ ತಿನ್ನೋಕೆ, 'ಸಿಡಿದೆದ್ದ ಸಹೋದರ' ಚಿತ್ರದ ಬೇಡ ಅನ್ನೋರು ಉಂಟೇ, 'ಮೋಜುಗಾರ ಸೊಗಸುಗಾರ' ಚಿತ್ರದ ಕನ್ನಡವೇ ನಮ್ಮಮ್ಮ, 'ಹಂತಕರ ಸಂಚು' ಚಿತ್ರದ ಆಸೆಗಳ ತೋಟ ಮುಂತಾದ ಹಾಡುಗಳನ್ನು ಸ್ಮರಿಸಬಹುದು.
ವಿಷ್ಣುವರ್ಧನ್ ಅವರು ಕೇವಲ ಕಲಾವಿದನಾಗಿಯಷ್ಟೇ ಉಳಿಯದೆ ಗಾಯಕರಾಗಿಯೂ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ. ಇದೀಗ ಅವರ ಹಾಡುಗಳನ್ನು ಮತ್ತೊಮ್ಮೆ ಕೇಳುವ ಅವಕಾಶವನ್ನು ಕಲ್ಪಿಸುತ್ತಿದೆ '7SUR' ಅವರ 'ಈ ಹೃದಯ ಹಾಡಿದೆ' ಕಾರ್ಯಕ್ರಮ. ಏಕ್ತಾ ಶಾ, ಅನಿಕೇತ್ ಪ್ರಭು, ಶ್ಯಾಮ್, ಗಣೇಶ್, ಶೀಲೂ ಮೆಹ್ತಾ, ರಾಜೇಶ್ ಭಟ್ ಸೇರಿದಂತೆ ಮುಂತಾದ ಗಾಯಕರ ಕಂಠಸಿರಿಯಲ್ಲಿ ಹಾಡುಗಳನ್ನು ಕೇಳಬಹುದು.
ಈ ಸಂಗೀತ ಸಂಜೆ ಕಾರ್ಯಕ್ರಮ ಇದೇ ಭಾನುವಾರ ಏಪ್ರಿಲ್ 19ರಂದು ಸಂಜೆ 5.30 ರಿಂದ 8.30ರವರೆಗೆ ನಡೆಯಲಿದೆ. ಸ್ಥಳ - ಬೆಂಗಳೂರು, ಜೆಸಿ ರಸ್ತೆಯ ಎಡಿಎ ರಂಗಮಂದಿರ. ವನವಾಸಿ ಕಲ್ಯಾಣ ಆಶ್ರಮದ ನೆರವಿಗಾಗಿ ಈ ವಿಶೇಷ ಸಂಗೀತ ಕಾರ್ಯಕ್ರಮನ್ನು ಆಯೋಜಿಸಿದೆ '7SUR'.
ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ 1952ರಲ್ಲಿ ಸ್ಥಾಪಿತವಾಗಿದ್ದು ವನವಾಸಿಗಳ ಅಭಿವೃದ್ಧಿಗಾಗಿ ಸತತ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆ. ಈ ವಿಶೇಷ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕ ರು.100 ಹಾಗೂ ರು.300 ನಿಗದಿಪಡಿಸಲಾಗಿದೆ. (ಫಿಲ್ಮಿಬೀಟ್ ಕನ್ನಡ)