Just In
Don't Miss!
- Finance
ಭಾರತದಿಂದ ಹೊರನಡೆಯಲು ಸಿಟಿಬ್ಯಾಂಕ್ ನಿರ್ಧಾರ
- Education
CBSE Board Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಶುಭ ಕೋರಿದ ಸೋನು ಸೂದ್
- Sports
ವಿಶ್ವ ನಂ.1 ಆಟಗಾರ ನೊವಾಕ್ ಜೊಕೋವಿಕ್ಗೆ ಸೋಲುಣಿಸಿದ ಇವಾನ್ಸ್
- News
ಉಗ್ರರ ವಿರುದ್ಧ ಸೋತ ಅಮೆರಿಕ..! ನಾವೇ ಗೆದ್ದಿದ್ದು ಎಂದು ಬೀಗಿದ ತಾಲಿಬಾನ್..!
- Lifestyle
ಏ.16ಕ್ಕೆ ಮೇಷ ರಾಶಿಗೆ ಬುಧ ಸಂಚಾರ: ನಿಮ್ಮ ರಾಶಿಯ ಮೇಲೆ ಬೀರಲಿದೆ ಈ ಪ್ರಭಾವಗಳು
- Automobiles
ರೇಡಿಯಾನ್ ಮತ್ತು ಸ್ಪೋರ್ಟ್ ಬೈಕ್ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಯುವ ಗಾಯಕ ನಿಧನ
ಪಂಜಾಬಿ ಖ್ಯಾತ ಗಾಯಕ ದಿಲ್ಜಾನ್ ಭೀಕರ ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದಾರೆ. ಮಾರ್ಚ್ 30ರಂದು ಬೆಳಗ್ಗೆ 2.30ರ ಸುಮಾರಿಗೆ ಅಮೃತಸರದಿಂದ 20 ಕಿ.ಮೀ ದೂರದಲ್ಲಿರುವ ಜಾಂಡಿಯಾಲಾ ಗುರು ಬಳಿ ನಡೆದ ಅಪಘಾತ ನಡೆದಿದ್ದು, ದಿಲ್ಜಾನ್ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಸ್ಥಳಿಯರು ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಕೊನೆಯುಸಿರೆಳೆದಿದ್ದಾರೆ.
31 ವರ್ಷದ ಯುವ ಗಾಯಕ ದಿಲ್ಜಾನ್ ಸಿಂಗ್ ಚಲಾಯಿಸುತ್ತಿದ್ದ ಕಾರು ನಿಂತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಪೊಲೀಸ್ ಮಾಹಿತಿ ಪ್ರಕಾರ, ರಾಷ್ಟ್ರೀಯ ಹೆದ್ದಾರಿ ಸೇತುವೆಯ ಬಳಿ ನಿಲ್ಲಿಸಿದ್ದ ಟ್ರಕ್ ಗೆ ದಿಲ್ಜಾನ್ ಕಾರು ಡಿಕ್ಕಿ ಹೊಡೆದಿದೆ ಎಂದಿದ್ದಾರೆ.
ಆಟೋರಿಕ್ಷಾದಲ್ಲಿ ಮೃತದೇಹವಾಗಿ ಪತ್ತೆಯಾದ ತಮಿಳು ಹಾಸ್ಯ ನಟ
ದಿಲ್ಜಾನ್ ಹಠಾತ್ ನಿಧನದ ಸುದ್ದಿ ಕುಟುಂಬದವರಿಗೆ, ಸ್ನೇಹಿತರಿಗೆ ಹಾಗೂ ಅಭಿಮಾನಿಗಳಿಗೆ ಶಾಕ್ ನೀಡಿದೆ. ನೆಚ್ಚಿನ ಗಾಯಕನ ನಿಧನಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.
ದಿಲ್ಜಾನ್ ಗೆ ಮದುವೆಯಾಗಿದ್ದು, ಪತ್ನಿ ಮತ್ತು ಮಕ್ಕಳು ಕೆನಡಾದಲ್ಲಿ ನೆಲೆಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಸಾಕಷ್ಟು ಪ್ರಸಿದ್ಧ ಗೀತಿಗಳನ್ನು ಹಾಡಿರುವ ದಿಲ್ಜಾನ್ 2012ರ ಬಳಿಕ ಭಾರಿ ಜನಪ್ರಿಯತೆ ಪಡೆದಿದ್ದರು.
ಪಂಜಾಬಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. 'ಇಂದು ಬೆಳಗ್ಗೆ ಪಂಜಾಬಿನ ಯುವ ಮತ್ತು ಭರವಸೆಯ ಗಾಯಕ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ ಸುದ್ದಿ ಆಘಾತ ತಂದಿದೆ. ಈ ರೀತಿಯ ಯುವ ಜೀವವನ್ನು ಕಳೆದುಕೊಂಡಿರುವುದು ಅತ್ಯಂತ ದುಃಖಕರವಾಗಿದೆ. ಕುಟುಂಬಕ್ಕೆ ಮತ್ತು ಸ್ನೇಹಿತರಿಗೆ ದುಃಖ ಬರಿಸುವ ಶಕ್ತಿ ಕೊಡಲಿ' ಎಂದು ಹೇಳಿದ್ದಾರೆ.