Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂತರಿಕ್ಷದಲ್ಲೂ ಮೊಳಗಲಿದೆ ಇಳಯರಾಜನ ಸಂಗೀತ!
ಸಂಗೀತ ನಿರ್ದೇಶಕ ಇಳಯರಾಜ ಸಂಗೀತ ಹಾಡು ಕೇಳದವರ ಸಂಖ್ಯೆ ಕಡಿಮೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಿಗೆ ಇಳಯರಾಜ ಸಂಗೀತ ನಿರ್ದೇಶನ ಮಾಡಿದ್ದಾರೆ.
Recommended Video
ಇದೀಗ ಇಳಯರಾಜ ಸಂಗೀತ ಆಕಾಶದ ಆಚೆಗೂ ಅನುರಣಿಸಲಿದೆ. ಕೆಲ ವಿದ್ಯಾರ್ಥಿಗಳ ಪ್ರಯತ್ನದ ಫಲವಾಗಿ ಇಳಯರಾಜ ಸಂಗೀತ ನಿರ್ದೇಶಿಸಿರುವ ಹಾಡೊಂದು ಬಾಹ್ಯಾಕಾಶದಲ್ಲಿ ಪ್ರಸಾರವಾಗಲಿದೆ!
ತಮಿಳಿನ ಕೆಲವು ವಿದ್ಯಾರ್ಥಿಗಳು ಅತ್ಯಂತ ಹಗುರವಾದ ಕೃತಕ ಉಪಗ್ರಹವನ್ನು ತಯಾರಿಸಿದ್ದು ಆ ಉಪಗ್ರಹವನ್ನು ಇಸ್ರೋದ ಸಹಾಯದೊಂದಿಗೆ ಅಂತರಿಕ್ಷಕ್ಕೆ ಹಾರಿ ಬಿಡಲಾಗಿದೆ. ಆ ಉಪಗ್ರಹದಲ್ಲಿ ಇಳಯರಾಜ ಹಾಡನ್ನು ವಿದ್ಯಾರ್ಥಿಗಳು ಅಳವಡಿಸಿದ್ದಾರೆ.
ಇದೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ವಿಶೇಷವಾಗಿ ತಮಿಳು ವಿದ್ಯಾರ್ಥಿಗಳು ಈ ಉಪಗ್ರಹವನ್ನು ಇಸ್ರೊ ನೆರವಿನೊಂದಿಗೆ ಹಾರಿ ಬಿಡಲಿದ್ದು, ಭಾರತದ ವಿವಿಧ ಸಂಸ್ಕೃತಿಕ, ಸಾಮರಸ್ಯದ ಆಧಾರದ ಮೇಲೆ ಉಪಗ್ರಹವನ್ನು ನಿರ್ಮಾಣ ಮಾಡಲಾಗಿದೆ. ಹಾಗೂ ಇಳಯರಾಜ ಹಾಡಿರುವ ಹಾಡನ್ನು ಅದಕ್ಕೆ ಅಳವಡಿಸಲಾಗಿದೆ.
ಈ ವಿದ್ಯಾರ್ಥಿಗಳು ಇಳಯರಾಜ ಅವರ ಅನುಮತಿಯನ್ನು ಪಡೆದಿದ್ದು, ವಿದ್ಯಾರ್ಥಿಗಳ ಕ್ರಿಯಾಶೀಲತೆ, ಸದುದ್ದೇಶ ಮೆಚ್ಚಿ ಇಳಯರಾಜ ತಮ್ಮ ಹಾಡನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡಿದ್ದಾರೆ.
ಇದೇ ವಿದ್ಯಾರ್ಥಿಗಳು ವಿಶೇಷ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಮೋದಿ ಅವರಿಂದ ಪ್ರಶಂಸೆಗಳನ್ನು ಸಹ ಪಡೆದಿದ್ದಾರೆ ಎನ್ನಲಾಗಿದೆ.
ಇಳಯರಾಜ ಗಾಯನದ ಯಾವ ಹಾಡು ಅಂತರಿಕ್ಷದಲ್ಲಿ ಪ್ರಸಾರವಾಗಲಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ದೇಶಪ್ರೇಮ ಹೊಮ್ಮುವ ಹಾಡನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿದ್ದಾರೆ. ಅಂತರಿಕ್ಷದಲ್ಲಿ ವಾಯುವಿಲ್ಲದ ಸ್ಥಿತಿಯಲ್ಲಿ ಹಾಡು ಹೇಗೆ ಪ್ರಸಾರವಾಗಲಿದೆ ಎಂಬುದು ಸಹ ಆಶ್ಚರ್ಯ ಮೂಡಿಸಿದೆ.
ಇಳಯರಾಜ ಭಾರತದ ಅತ್ಯುತ್ತಮ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಅವರಿಗೆ ವಿದೇಶದಲ್ಲೂ ವಿಶೇಷ ಗೌರವವಿದೆ. ಇಳಯರಾಜ ಅವರನ್ನು ಲಂಡನ್ನ ರಾಯಲ್ ಫಿಲ್ಯಾಮೋರಿಕ್ ಆರ್ಕೆಸ್ಟ್ರಾ 'ಮಾಸ್ಟ್ರೊ' ಎಂದು ಕರೆಯುತ್ತದೆ. ತಮಿಳಿನಲ್ಲಿ ಇಳಯರಾಜಗೆ 'ಇಸೈಜ್ಞಾನಿ' ಎಂಬ ಬಿರುದು ನೀಡಲಾಗಿದೆ. ಹೀಗೆಂದರೆ 'ಸಂಗೀತ ಪಂಡಿತ'ನೆಂದು ಅರ್ಥ.
ಇಳಯರಾಜಗೆ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಎರಡು ಬಾರಿ ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕೆ ರಾಷ್ಟ್ರಪ್ರಶಸ್ತಿ ದೊರೆತಿದೆ. 2010ರಲ್ಲಿ ಪದ್ಮ ಭೂಷಣ, 2018ರಲ್ಲಿ ಪದ್ಮ ವಿಭೂಷಣ ಗೌರವ ಇಳಯರಾಜಗೆ ನೀಡಲಾಗಿದೆ.