Don't Miss!
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- News RCB vs KKR: ಕ್ರಿಕೆಟ್ ಪ್ರೇಮಿಗಳೇ... ಪ್ರಯಾಣಿಕರೇ ರಸ್ತೆಗಿಳಿಯುವ ಮುನ್ನ ಒಮ್ಮೆ ಗಮನಿಸಿ
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Automobiles Jonty Rhodes: ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಮನಸೋತ ದ.ಆಫ್ರಿಕಾ ಕ್ರಿಕೆಟರ್!
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಳಯರಾಜಾ ಯಾಕಿಷ್ಟು ನಿರ್ದಯಿಯಾದರು?
ಚಲನಚಿತ್ರರಂಗದ ಮೇರು ಪರ್ವತ ಇಳಯರಾಜಾ ಅವರ ಹಾಡುಗಳನ್ನು ಕೇಳದ ಕಿವಿಗಳುಂಟೇ? ಟಿವಿ, ಎಫ್ಎಂ ರೇಡಿಯೋಗಳಲ್ಲಿ ಅವರು ರಾಗಸಂಯೋಜನೆ ಮಾಡಿದ ಹಾಡುಗಳನ್ನು ಪ್ರತಿನಿತ್ಯ ಕಿವಿಗೆ ಬೀಳುತ್ತಲೇ ಇರುತ್ತವೆ.
ಮತ್ತೆಮತ್ತೆ ಕೇಳಬೇಕೆಂಬ ಅವರ ರಾಗಲಹರಿಗೆ ಮರುಳಾಗದವರುಂಟೇ? ಆದರೆ ತಮ್ಮ ಹಾಡುಗಳನ್ನು ಮನಬಂದಂತೆ ಟಿವಿ, ರೇಡಿಯೋ, ಆಡಿಯೋ ಕಂಪನಿಗಳು ಬಳಸಿಕೊಳ್ಳುತ್ತಿರುವ ಬಗ್ಗೆ ಇಳಯರಾಜಾ ರೋಸಿಹೋಗಿದ್ದರು.
ಈ ಸಂಬಂಧ ಅವರು ಕಳೆದ ವರ್ಷ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ಟ್ಯೂನ್ ಗಳನ್ನು ಅನಧಿಕೃತವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಅವರು ಕೋರ್ಟ್ ಗೆ ಮೊರೆಹೋಗಿದ್ದರು. ಈಗ ಅವರ ಪರವಾಗಿ ಕೋರ್ಟ್ ತೀರ್ಪು ಪ್ರಕಟಿಸಿದೆ.
ಇನ್ನು ಮುಂದೆ ಇಳಯರಾಜಾ ಅವರ ಟ್ಯೂನ್ ಗಳ ಹಕ್ಕಗಳನ್ನು ಪಡೆದ ಮೇಲೆ ಅದು ಐದು ವರ್ಷಗಳ ಕಾಲ ಜಾರಿಯಲ್ಲಿರುತ್ತದೆ ಎಂದು ನ್ಯಾಯಾಧೀಶರಾದ ಆರ್ ಸುಬ್ಬಯ್ಯ ಅವರು ತೀರ್ಪು ನೀಡಿದ್ದಾರೆ. ಈಗಾಗಲೆ ಅವರ ಹಳೆಯ ಹಾಡುಗಳ ಹಕ್ಕುಗಳನ್ನು ಪಡೆದವರು ಈಗ ಮತ್ತೆ ಇಳಯರಾಜಾ ಹಾಗೂ ನಿರ್ಮಾಪಕರಿಂದ ಪರವಾನಗಿ ಪಡೆಯಬೇಕು.
ಈ ಹಿನ್ನೆಲೆಯಲ್ಲಿ ಮಾತನಾಡಿರುವ ಇಳಯರಾಜಾ, ಒಂದು ವೇಳೆ ತಮಗೆ ರಾಯಧನ ಸರಿಯಾಗಿ ಸಂಧಾಯವಾಗಿದ್ದರೆ ಇಷ್ಟೊತ್ತಿಗೆ ಬಿಲ್ ಗೇಟ್ಸ್ ಆಗಿಬಿಡುತ್ತಿದ್ದೆ ಎಂದಿದ್ದಾರೆ. ಅವರ ಮಾತಿನಲ್ಲಿ ನಿಜವಾಗಿಯೂ ಅರ್ಥವಿದೆ ಅನ್ನಿಸುತ್ತದೆ. ಏಕೆಂದರೆ, 1970ರ ದಶಕದಿಂದ ಹಾಡುಗಳಿಗೆ ರಾಗಸಂಯೋಜನೆ ಮಾಡುತ್ತಿರುವ ಅವರು ಇದುವರೆಗೂ 4,500 ಹಾಡುಗಳನ್ನು ಸಂಯೋಜಿಸಿದ್ದಾರೆ.
ಇಳಯರಾಜಾ ಅವರು ಬೇಕಾದರೂ ಬಿಲ್ ಗೇಟ್ಸ್ ಆಗಬಹುದು ಆದರೆ ಬಿಲ್ ಗೇಟ್ಸ್ ಅವರು ಇಳಯರಾಜಾ ಆಗಲು ಸಾಧ್ಯವೇ? ಆರಂಭದ ದಿನಗಳಲ್ಲಿ ನಮ್ಮ ಬಿ.ಕೆ ಸುಮಿತ್ರ ಅವರ ಗಾನಗೊಷ್ಠಿಗಳಲ್ಲಿ ವಾದ್ಯಗಾರರಾಗಿ, ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರಾದ ಜಿ.ಕೆ. ವೆಂಕಟೇಶ್ ಅವರ ಶಿಷ್ಯರಾಗಿ ಬೆಳೆದವರು ಇಳಯರಾಜಾ. ಗೀತ ರಚನೆಕಾರರಾಗಿ ಮತ್ತು ಗಾಯಕರಾಗಿ ಕೂಡಾ ಅವರು ಅಪ್ರತಿಮರು.
ಇಳಯರಾಜಾ ಅವರು ಕೇಳಿದ್ದರಲ್ಲಿ ಸ್ವಾರ್ಥಕ್ಕಿಂತ ಹೆಚ್ಚಾಗಿ ನ್ಯಾಯವೇ ಇದೆ ಅಲ್ಲವೇ? ಕನ್ನಡದಲ್ಲಿ ಕೂಡಾ ಗೀತಾ, ಜನ್ಮಜನ್ಮದ ಅನುಬಂಧ, ನಮ್ಮೂರ ಮಂದಾರ ಹೂವೇ, ಪಲ್ಲವಿ ಅನುಪಲ್ಲವಿ ಚಿತ್ರಗಳಲ್ಲಿ ಮೂಡಿರುವ ಅವರ ಸಂಗೀತ ಶ್ರೇಷ್ಠಮಟ್ಟದ್ದು. (ಏಜೆನ್ಸೀಸ್)