Don't Miss!
- Sports PBKS vs MI IPL 2024: ಪಂಜಾಬ್ ರಾಜರಿಗೆ ಮುಂಬೈ ಇಂಡಿಯನ್ಸ್ ಸವಾಲು; ಟಾಸ್ ವರದಿ, ಆಡುವ 11ರ ಬಳಗ
- Lifestyle ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- Automobiles ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- News Karnataka Lok Sabha Elections: ರಾಷ್ಟ್ರೀಯ ಮುಖಂಡರು VS ರಾಜ್ಯ ನಾಯಕರು; ಗೆಲ್ಲೋದು ಯಾರು?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಜೀವ್ನಾನೇ ನಾಟ್ಕ ಸಾಮಿ' ಹಾಡು ಬಿಡುಗಡೆ ಮಾಡಿದ ವಿಜಯ್ ರಾಘವೇಂದ್ರ
'ಜೀವ್ನಾನೇ ನಾಟ್ಕ ಸಾಮಿ' ಸಿನಿಮಾದ ಎರಡನೇ ಹಾಡನ್ನು 'ಚಿನ್ನಾರಿ ಮುತ್ತ' ವಿಜಯ್ ರಾಘವೇಂದ್ರ ಬಿಡುಗಡೆ ಮಾಡಿದ್ದು, ಅಕ್ಟೋಬರ್ 30 ರಂದು ಆನಂದ್ ಆಡಿಯೋ ಯ್ಯೂಟ್ಯೂಬ್ ಚಾನಲ್ನಲ್ಲಿ ಲಭ್ಯವಾಗಲಿದೆ.
''ಕದ್ದು ಮುಚ್ಚಿ ನೋಡಬೇಡ..... ಕನಸೇ ನನ್ನ ಕಾಡಬೇಡ.....'' ಎನ್ನುವ ಈ ಮಾಧುರ್ಯ ಭರಿತ ಹಾಡಿಗೆ ಅತೀಶಯ ಜೈನ್ ರಾಗಸಂಯೋಜನೆ ಮಾಡಿದ್ದು ಶ್ರೀ ಹರ್ಷ ಹಾಡಿದ್ದಾರೆ. ನಿರ್ದೇಶಕ ರಾಜು ಭಂಡಾರಿ ರಾಜಾವರ್ತ ಅವರೇ ಸಾಹಿತ್ಯ ರಚಿಸಿದ್ದಾರೆ.
ಐಟಿ ಕ್ಷೇತ್ರಕ್ಕೆ ಗುಡ್ ಬೈ ಹೇಳಿ ಬಣ್ಣದಲೋಕದಲ್ಲಿ ಮಿಂಚುತ್ತಿರುವ ವಿನಯ್ ಕಶ್ಯಪ್
ಇದಕ್ಕೂ ಮುಂಚೆ 'ಜೀವ್ನಾನೇ ನಾಟ್ಕ ಸಾಮಿ' ಚಿತ್ರದ ಮೊದಲ ಹಾಡನ್ನು ಡಾಲಿ ಖ್ಯಾತಿಯ ಧನಂಜಯ್ ರಿಲೀಸ್ ಮಾಡಿದ್ದರು. ಮೂರು ದಿನದ ಮಾರ್ಕೆಟ್....ಎಂಬ ಹಾಡನ್ನು ನವೀನ್ ಸಜ್ಜು ಹಾಡಿದ್ದರು.
ನಟ ಕಿರಣ್ ರಾಜ್ ಮತ್ತು ಶ್ರೀಹರ್ಷ (ಜೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿ) ಪವಿತ್ರ ಕೋಟ್ಯಾನ್ ಮತ್ತು ಅನಿಕ ರಮ್ಯ ಸೇರಿದಂತೆ ಹಲವರು ಪ್ರಮುಖ ತಾರಾಗಣದಲ್ಲಿ ಕಾಣಿಸಿಕೊಂಡಿದ್ದು, ರಂಗಭೂಮಿ ಹಿನ್ನೆಲೆ ಹೊಂದಿರುವ ರಾಜು ಭಂಡಾರಿ ರಾಜಾವರ್ತ ನಿರ್ದೇಶಿಸಿದ್ದಾರೆ. ಉಮೇಶ್ ಆರ್ಬಿ ಅವರ ಸಂಕಲನ ಒಳಗೊಂಡಿದೆ.
ಯಥಾ ದೃಷ್ಟಿ ತಥಾ ಸೃಷ್ಟಿ ಎಂಬ ಭಗವದ್ಗೀತೆಯ ಸೂಕ್ತಿಯ ಹಿನ್ನೆಲೆಯಲ್ಲಿ ಮೂಡಿಬಂದ ಚಿತ್ರದ ಕಥಾವಸ್ತುವು ಮನರಂಜನೆಯ ಜೊತೆಗೆ ಸಾಮಾಜಿಕ ಕಳಕಳಿ ಸಂದೇಶದಿಂದ ಕೂಡಿದೆ. ಆರ್ಯ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ, ಶ್ರೀಮತಿ ಲಲಿತಾ ರಾಜಶೇಖರ್ ಶಿರಹಟ್ಟಿ ನಿರ್ಮಿಸಿದ್ದು ಬಿಡುಗಡೆಗೆ ಸಿದ್ದವಾಗಿದೆ.