Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಂಬ್ಳಿ ಹುಳ' ಹೊಸ ಹುಡುಗರ ಪ್ರಾಮಾಣಿಕ ಪ್ರಯತ್ನ: ಹೊಸ ಹಾಡು ಬಿಡುಗಡೆ
ಹೊಸ ಹುಡುಗರ ಹೊಸ ಪ್ರಯತ್ನ 'ಕಂಬ್ಳಿ ಹುಳ' ಸಿನಿಮಾದ ಹಾಡೊಂದು ಇಂದು (ಬುಧವಾರ) ಬಿಡುಗಡೆ ಆಗಿದೆ. ಹಾಡು ಗಮನ ಸೆಳೆಯುತ್ತಿದ್ದು, ಸಿನಿಮಾದ ಬಗ್ಗೆ ಕುತೂಹಲ ಹುಟ್ಟಿಸುತ್ತಿದೆ.
ಯುವಮನಸ್ಸುಗಳು ಎಳೆಯ ಪ್ರೇಮಕತೆಯುಳ್ಳ ಸಿನಿಮಾ ಎಂಬುದನ್ನು ಹಾಡು ಸಾರಿ ಹೇಳುತ್ತಿದ್ದು, ವಿಜಯಪ್ರಕಾಶ್ ಹಾಡಿರುವ 'ಜಾರಿ ಬಿದ್ದರೂ ಯಾಕೀ ನಗು' ಹಾಡು ನೆನಪುಳಿಯುವಂತಿದೆ.
ಮಾನ್ಸೂನ್ ಮಳೆಯಲ್ಲಿ ಧನಂಜಯ- ರಚ್ಚು ಪ್ರೇಮ ರಾಗ ಹಾಡಿದಾಗ!
ಆಗಷ್ಟೆ ಪ್ರೇಮ ಹುಟ್ಟಿರುವ ಯುವ ಜೋಡಿಗಳಿಬ್ಬರ ಪ್ರೀತಿಯನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದ್ದು, ಹಾಡಿನ ಮುನ್ನೆಲೆಯಲ್ಲಿ ಬಳಸಿರುವ ದೃಶ್ಯಗಳು ಫೀಲ್ ಗುಡ್ ಅನುಭೂತಿ ಬೀಡುತ್ತಿವೆ. ಸರಳವಾಗಿ ಆದರೆ ಸುಂದರವಾಗಿ ಹಾಡನ್ನು ಸೆರೆಹಿಡಿಯಲಾಗಿದೆ.
ವಿಜಯ್ ಪ್ರಕಾಶ್ ಹಾಗೂ ಸಂಗೀತ ರವೀಂದ್ರನಾಥ್ ಹಾಡಿರುವ ಈ ಯುಗಳ ಗೀತೆ ನೋಡುಗರನ್ನು ತಮ್ಮ ಶಾಲಾ-ಕಾಲೇಜು ದಿನಗಳಿಗೆ ಕರೆದುಕೊಂಡು ಹೋಗುವುದಂತೂ ಪಕ್ಕಾ. ಹಾಡಿನಲ್ಲಿ ಬಳಸಿರುವ ಮಕ್ಕಳ ಧ್ವನಿ ಹಾಡಿಗೆ ಇನ್ನಷ್ಟು ಸುಂದರಗೊಳಿಸಿದೆ.
ಸಿನಿಮಾದಲ್ಲಿ ನಾಯಕ-ನಾಯಕಿಯಾಗಿ ನಟಿಸಿರುವ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆಯವರ ನಟನೆ, ಮುಗ್ಧತೆಯೂ ಸೆಳೆಯುತ್ತದೆ. ಜೊತೆಗೆ ಹಾಡಿಗೆ ನೀಡಿರುವ ಸರಳತೆಯ ಟಚ್ ಅದನ್ನು ನೋಡುಗರಿಗೆ ಇನ್ನಷ್ಟು ಆಪ್ತಗೊಳಿಸುತ್ತದೆ. ಮಹದೇವ್ ಅವರ ಸುಂದರವಾದ ಸಾಹಿತ್ಯಕ್ಕೆ ಶಿವಪ್ರಸಾದ್ ಮಧುರವಾದ ಸಂಗೀತ ಒದಗಿಸಿದ್ದಾರೆ.
'ಕಂಬ್ಳಿಹುಳ' ಸಿನಿಮಾಕ್ಕೆ ಹಲವು ಸಿನಿಮಾ ತಾರೆಯರು ಶುಭಾಶಯ ಕೋರಿದ್ದು, ''ನಾನು ಈ ಹಾಡು ಹಾಡಬೇಕಾದರೆ ಬಹಳ ಎಂಜಾಯ್ ಮಾಡಿದೆ. ಹಾಡಿಗೆ ಬಳಸಿರುವ ದೃಶ್ಯಗಳಂತೂ ನನಗೆ ಬಹಳ ಹಿಡಿಸಿದವು. ನಟರಾದ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಇಡೀ ತಂಡಕ್ಕೆ ಶುಭಾಶಯಗಳು, ಈ ತಂಡ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಸಿನಿಮಾಗಳನ್ನು ನೀಡಲಿ'' ಎಂದು ಹಾರೈಸಿದ್ದಾರೆ ಗಾಯಕ ವಿಜಯಪ್ರಕಾಶ್.
ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ''ಹಾಡು ಬಹಳ ಭಿನ್ನವಾಗಿದೆ. ತಮಾಷೆಯಿಂದ ಕೂಡಿದ ಒನ್ ಲೈನರ್ಗಳನ್ನು ಇಟ್ಟುಕೊಂಡು ಭಿನ್ನವಾಗಿ ಹಾಡು ಕಟ್ಟಿದ್ದಾರೆ. ಮಕ್ಕಳ ಧ್ವನಿ ಬಳಸಿಕೊಂಡಿರುವುದು ಸಹ ಚೆನ್ನಾಗಿದೆ. ಬಹಳ ಭಿನ್ನವಾಗಿ ದೃಶ್ಯಗಳನ್ನು ಕಟ್ಟಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ'' ಎಂದಿದ್ದಾರೆ.
'ದಿಯಾ' ಸಿನಿಮಾ ಖ್ಯಾತಿಯ ನಟರಾದ ದೀಕ್ಷಿತ್ ಹಾಗೂ ಪೃಥ್ವಿ ಅಂಬರ್ ಅವರುಗಳು ಸಹ ಹಾಡನ್ನು ಮೆಚ್ಚಿಕೊಂಡಿದ್ದು, ಸಿನಿಮಾ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಸಿನಿಮಾವನ್ನು ನವನ್ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಸವೀನ್, ಪುನೀತ್, ಗುರು ಮತ್ತು ವಿಜಯ್.