twitter
    For Quick Alerts
    ALLOW NOTIFICATIONS  
    For Daily Alerts

    ಗಣೇಶನ ಆಶೀರ್ವಾದದಿಂದ ಗಾಯಕರಾದ ಅರಸು ಅಂತಾರೆ

    By Naveen
    |

    ಇಷ್ಟ ದಿನ ಒಳ್ಳೆ ಒಳ್ಳೆಯ ಹಾಡುಗಳನ್ನು ಹಾಳೆಯ ಮೇಲೆ ಮೂಡಿಸುತ್ತಿದ್ದ ಅರಸು ಅಂತಾರೆ ಈಗ ಹಾಡುಗಾರನಾಗಿದ್ದಾರೆ. ಗಣೇಶನ ಆಶೀರ್ವಾದದಿಂದ ಈ ಪ್ರತಿಭಾವಂತ ಚಿತ್ರ ಸಾಹಿತಿ ಗಾಯಕನಾಗಿದ್ದಾರೆ.

    'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದ ಮೊದಲ ಹಾಡು ಇದೀಗ ಬಿಡುಗಡೆಯಾಗಿದೆ. ಕೆಲವೇ ದಿನಗಳಲ್ಲಿ ಗಣೇಶನ ಹಬ್ಬ ಬರಲಿದ್ದು, ಈ ಬಾರಿ ಗಣೇಶನ ಮುಂದೆ ಇದೇ ಹಾಡು ಮೊಳಗಲಿದೆ. ಸಿನಿಮಾದ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.

    'ಕಳ್ಬೆಟ್ಟದ ದರೋಡೆಕೋರರು' ಟ್ರೇಲರ್ ರಿಲೀಸ್ : ನೀವು ನೋಡಿ, ಎಲ್ಲರಿಗೂ ತೋರಿಸಿ 'ಕಳ್ಬೆಟ್ಟದ ದರೋಡೆಕೋರರು' ಟ್ರೇಲರ್ ರಿಲೀಸ್ : ನೀವು ನೋಡಿ, ಎಲ್ಲರಿಗೂ ತೋರಿಸಿ

    ಅನೂಪ್ ಸೀಳಿನ್ ಸಂಗೀತ ಹಾಗೂ ಅರಸು ಅಂತಾರೆ ಸಾಹಿತ್ಯ ಈಗಾಗಲೇ ಅನೇಕ ಸಿನಿಮಾಗಳಲ್ಲಿ ಮೋಡಿ ಮಾಡಿದೆ. ವಿಶೇಷ ಅಂದರೆ, ಈಗ ಅನೂಪ್ ಸಂಗೀತದ ಮೂಲಕವೇ ಅರಸು ಗಾಯಕನ ಪಟ್ಟ ಪಡೆದಿದ್ದಾರೆ. ಅರಸು ಅಂತಾರೆ ಜೊತೆಗೆ ವ್ಯಾಸರಾಜ್ ಧ್ವನಿಯೂ ಹಾಡಿನಲ್ಲಿದೆ.

    Kannada movie Kalbettada Darodekoraru 1st song released

    ಚಿತ್ರದ ಕಥೆಯ ಕೋಟೆ ಬೀದಿ ಗಣೇಶ ಮತ್ತು ಆನೆಸಾಲು ಬೀದಿ ಗಣೇಶ ಈ ಎರಡು ಏರಿಯಾಗಳ ಗಣೇಶನ ಉತ್ಸವದಲ್ಲಿ ಈ ಹಾಡು ಬರಲಿದೆ. ನಮ್ ಗಣೇಶ್ ಗ್ರೇಟು ಎಂದು ಎರಡು ಗ್ಯಾಂಗ್ ಹುಡುಗರು ಹಾಡುವ ವಿಶೇಷ ಹಾಡು ಇದಾಗಿದೆ. ಮದ್ದೂರಿನ ಒಂದು ಹಳ್ಳಿಯಲ್ಲಿ ಹಾಡನ್ನು ಚಿತ್ರೀಕರಣ ಮಾಡಲಾಗಿದೆ.

    ಅಂದಹಾಗೆ, ದೀಪಕ್ ಮಧುವನಹಳ್ಳಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. 'ರಾಮಾ ರಾಮಾ ರೇ' ಖ್ಯಾತಿಯ ನಟರಾಜ್ ಹಾಗೂ 'ರಾಧಾ ರಮಣ' ಖ್ಯಾತಿಯ ಶ್ವೇತ ಪ್ರಸಾದ್ ಚಿತ್ರದ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ.

    English summary
    Kannada actor Nataraj and actress Swetha prasad's 'Kalbettada Darodekoraru' kannada movie 1st song released. The movie is directed by Deepak Madhuvanahalli.
    Wednesday, September 5, 2018, 16:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X