Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶನ ಆಶೀರ್ವಾದದಿಂದ ಗಾಯಕರಾದ ಅರಸು ಅಂತಾರೆ
ಇಷ್ಟ ದಿನ ಒಳ್ಳೆ ಒಳ್ಳೆಯ ಹಾಡುಗಳನ್ನು ಹಾಳೆಯ ಮೇಲೆ ಮೂಡಿಸುತ್ತಿದ್ದ ಅರಸು ಅಂತಾರೆ ಈಗ ಹಾಡುಗಾರನಾಗಿದ್ದಾರೆ. ಗಣೇಶನ ಆಶೀರ್ವಾದದಿಂದ ಈ ಪ್ರತಿಭಾವಂತ ಚಿತ್ರ ಸಾಹಿತಿ ಗಾಯಕನಾಗಿದ್ದಾರೆ.
'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದ ಮೊದಲ ಹಾಡು ಇದೀಗ ಬಿಡುಗಡೆಯಾಗಿದೆ. ಕೆಲವೇ ದಿನಗಳಲ್ಲಿ ಗಣೇಶನ ಹಬ್ಬ ಬರಲಿದ್ದು, ಈ ಬಾರಿ ಗಣೇಶನ ಮುಂದೆ ಇದೇ ಹಾಡು ಮೊಳಗಲಿದೆ. ಸಿನಿಮಾದ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.
'ಕಳ್ಬೆಟ್ಟದ ದರೋಡೆಕೋರರು' ಟ್ರೇಲರ್ ರಿಲೀಸ್ : ನೀವು ನೋಡಿ, ಎಲ್ಲರಿಗೂ ತೋರಿಸಿ
ಅನೂಪ್ ಸೀಳಿನ್ ಸಂಗೀತ ಹಾಗೂ ಅರಸು ಅಂತಾರೆ ಸಾಹಿತ್ಯ ಈಗಾಗಲೇ ಅನೇಕ ಸಿನಿಮಾಗಳಲ್ಲಿ ಮೋಡಿ ಮಾಡಿದೆ. ವಿಶೇಷ ಅಂದರೆ, ಈಗ ಅನೂಪ್ ಸಂಗೀತದ ಮೂಲಕವೇ ಅರಸು ಗಾಯಕನ ಪಟ್ಟ ಪಡೆದಿದ್ದಾರೆ. ಅರಸು ಅಂತಾರೆ ಜೊತೆಗೆ ವ್ಯಾಸರಾಜ್ ಧ್ವನಿಯೂ ಹಾಡಿನಲ್ಲಿದೆ.
ಚಿತ್ರದ ಕಥೆಯ ಕೋಟೆ ಬೀದಿ ಗಣೇಶ ಮತ್ತು ಆನೆಸಾಲು ಬೀದಿ ಗಣೇಶ ಈ ಎರಡು ಏರಿಯಾಗಳ ಗಣೇಶನ ಉತ್ಸವದಲ್ಲಿ ಈ ಹಾಡು ಬರಲಿದೆ. ನಮ್ ಗಣೇಶ್ ಗ್ರೇಟು ಎಂದು ಎರಡು ಗ್ಯಾಂಗ್ ಹುಡುಗರು ಹಾಡುವ ವಿಶೇಷ ಹಾಡು ಇದಾಗಿದೆ. ಮದ್ದೂರಿನ ಒಂದು ಹಳ್ಳಿಯಲ್ಲಿ ಹಾಡನ್ನು ಚಿತ್ರೀಕರಣ ಮಾಡಲಾಗಿದೆ.
ಅಂದಹಾಗೆ, ದೀಪಕ್ ಮಧುವನಹಳ್ಳಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. 'ರಾಮಾ ರಾಮಾ ರೇ' ಖ್ಯಾತಿಯ ನಟರಾಜ್ ಹಾಗೂ 'ರಾಧಾ ರಮಣ' ಖ್ಯಾತಿಯ ಶ್ವೇತ ಪ್ರಸಾದ್ ಚಿತ್ರದ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ.