Don't Miss!
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Automobiles ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ರಾಜ್ಯೋತ್ಸವದ ವಿಶೇಷ: ಕೇಳಲೇಬೇಕಾದ ಎವರ್ಗ್ರೀನ್ 6 ಹಾಡುಗಳು
ಕನ್ನಡ ಭಾಷೆ, ನೆಲ-ಜಲ, ನಾಡು-ನುಡಿ ಕುರಿತು ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಹಲವು ಹಾಡುಗಳು ಬಂದಿದೆ. ಆದರೆ ಕೆಲವು ಹಾಡುಗಳನ್ನ ಮಾತ್ರ ಪದೇ ಪದೇ ಕೇಳಬೇಕು ಎನಿಸುತ್ತೆ. ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಂತೂ ಒಂದೊಂದು ಹಾಡುಗಳನ್ನ ಎಷ್ಟೆಷ್ಟು ಬಾರಿ ಕೇಳ್ತಿವಿ ಎನ್ನುವುದರ ಬಗ್ಗೆ ಲೆಕ್ಕವೇ ಇರಲ್ಲ.
ಕನ್ನಡದ ಮೇಲೆ ಇರುವ ಕೆಲವು ಹಾಡುಗಳನ್ನು ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ. ಈ ಹಾಡುಗಳಿಗೆ ನಮ್ಮ ಕನ್ನಡ ಅಭಿಮಾನವನ್ನು ಮತ್ತಷ್ಟು ಜಾಸ್ತಿ ಮಾಡುವ ಶಕ್ತಿ ಇದೆ. ಕನ್ನಡ ರಾಜ್ಯೋತ್ಸವ ಸೀಸನ್ ಬಂತಂದ್ರೆ, ಕರ್ನಾಟಕದ ಯಾವುದೇ ಮೂಲೆಯಲ್ಲೂ ಕೇಳಿದ್ರೆ ಈ ಹಾಡುಗಳಂತೂ ಸದ್ದು ಮಾಡ್ತಾನೆ ಇರುತ್ತೆ. ಮುಂದೆ ಓದಿ...
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಈ ಹಾಡು ಕನ್ನಡಿಗರ ಮನಸ್ಸಿನಲ್ಲಿ ಬೆರೆತು ಹೋಗಿದೆ. 'ಆಕಸ್ಮಿಕ' ಸಿನಿಮಾದ ಈ ಹಾಡಿಗೆ ಹಂಸಲೇಖ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ಹಾಡಿನಲ್ಲಿ ಡಾ.ರಾಜ್ ಕನ್ನಡ ಬಾವುಟ ಹಿಡಿದು ಕುಣಿದಿದ್ದಾರೆ.
ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ ಸ್ಯಾಂಡಲ್ ವುಡ್ ತಾರೆಯರು
ಕನ್ನಡವೇ ನಮ್ಮಮ್ಮ.....
ಕನ್ನಡ ಅಂದಾಕ್ಷಣ ಫಟ್ ನೆನಪಾಗುವ ಎರಡನೇ ಹಾಡು ಡಾ ವಿಷ್ಣುವರ್ಧನ್ ನಟನೆಯ 'ಕನ್ನಡವೇ ನಮ್ಮಮ್ಮ'. ಮೋಜುಗಾರ ಸೊಗಸುಗಾರ ಚಿತ್ರದ ಈ ಹಾಡಿನಲ್ಲಿ ಕನ್ನಡವನ್ನು ತಾಯಿಗೆ ಹೋಲಿಸಲಾಗಿದೆ.
ಕರುನಾಡ ತಾಯಿ ಸದಾ ಚಿನ್ಮಯಿ
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ನಾನು ನನ್ನ ಹೆಂಡ್ತಿ ಚಿತ್ರದಲ್ಲಿರುವ 'ಕರುನಾಡ ತಾಯಿ ಸದಾ ಚಿನ್ಮಯಿ' ಹಾಡನ್ನು ಮರೆಯುವಂತಿಲ್ಲ. ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಹಾಡು ಕೇಳಿದ ರೋಮಾಂಚನ ಆಗುತ್ತದೆ.
ಕನ್ನಡ ಹಬ್ಬಕ್ಕೆ ಶುಭಕೋರಿದ ದರ್ಶನ್-ಯಶ್-ಧ್ರುವ ಸರ್ಜಾ
ಕರ್ನಾಟಕದ ಇತಿಹಾಸದಲ್ಲಿ.....
ಕರ್ನಾಟಕದ ಇತಿಹಾಸ ಹಾಗೂ ವಿಜಯನಗರ ಸಾಮ್ರಾಜ್ಯದ ಕಥೆ ಹೇಳುವ ಹಾಡು ಕೃಷ್ಣ-ರುಕ್ಮಿಣಿ ಚಿತ್ರದ 'ಕರ್ನಾಟಕದ ಇತಿಹಾಸದಲ್ಲಿ.....'. ಎಸ್ಬಿ ಬಾಲಸುಬ್ರಹ್ಮಣ್ಯಂ ಅವರು ದನಿಯಲ್ಲಿ ಮೂಡಿಬಂದಿರುವ ಹಾಡನ್ನು ಕೇಳಲು ಮರೆಯದಿರಿ.
ಕನ್ನಡ ಮಣ್ಣನ್ನು ಮರಿಬೇಡ
'ಸೋಲಿಲ್ಲದ ಸರದಾರ' ಚಿತ್ರದ ಈ ಹಾಡಿನಲ್ಲಿ 'ಕನ್ನಡ ಮಣ್ಣನ್ನು ಮರಿಬೇಡ.. ಈ ಮಣ್ಣಿನ ಹೆಣ್ಣನ್ನು ಜರಿಬೇಡ..' ಎಂಬ ಅದ್ಭುತ ಮಾತುಗಳನ್ನು ಹೇಳಲಾಗಿದೆ.
Recommended Video
ಕನ್ನಡ ಹೊನ್ನುಡಿ ದೇವಿಯನ್ನು....
'ಒಂದು ಸಿನಿಮಾ ಕಥೆ' ಚಿತ್ರದ 'ಕನ್ನಡ ಹೊನ್ನುಡಿ ದೇವಿಯನ್ನು ನಾ ಪೂಜಿಸುವೆ ಅರಾಧಿಸುವೆ' ಹಾಡಿನಲ್ಲಿ ನಟ ಅನಂತ್ ನಾಗ್ ಕನ್ನಡದ ಮಹಾನ್ ಕವಿಗಳನ್ನು ನೆನೆದಿದ್ದಾರೆ.