Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೆ ಸಂಕಷ್ಟದಲ್ಲಿ 'ಕಾಂತಾರ': ರಿಷಬ್, ಹೊಂಬಾಳೆ, ಅಮೆಜಾನ್, ಪೃಥ್ವಿರಾಜ್ ಸುಕುಮಾರನ್ಗೆ ನೊಟೀಸ್
ಟ್ರೈಲರ್ ಬಿಡುಗಡೆ ಆದಾಗಿನಿಂದಲೂ ಸಿನಿಮಾದ 'ವರಾಹ ರೂಪಂ' ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಸಿನಿಮಾ ಬಿಡುಗಡೆ ಬಳಿಕವಂತೂ ಹಾಡು ಭಾರಿ ವೈರಲ್ ಆಗಿತ್ತು. ಆದರೆ 'ವರಾಹ ರೂಪಂ' ಹಾಡಿನ ಸಂಗೀತ ಮಲಯಾಳಂನ ಆಲ್ಬಂ ಹಾಡೊಂದರಿಂದ ಯಥಾವತ್ತು ತೆಗೆದುಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಕೇರಳದ ಸಂಗೀತ ತಂಡ ಥೈಕ್ಕುಡಂ ಬ್ರಿಡ್ಜ್ ನವರ 'ನವರಸಂ' ಹಾಡಿನ್ನು ನಕಲು ಮಾಡಿ 'ಕಾಂತಾರ'ದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ 'ವರಾಹ ರೂಂಪಂ' ಹಾಡು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಥೈಕ್ಕುಡಂ ಬ್ರಿಡ್ಜ್ ತಂಡವು 'ಕಾಂತಾರ'ದ ನಿರ್ಮಾಣ ಸಂಸ್ಥೆ ಹೊಂಬಾಳೆ ವಿರುದ್ಧ ಕೇರಳದ ಕೋಯಿಕ್ಕೊಡ್ ಹಾಗೂ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯಗಳಲ್ಲಿ ದಾವೆ ಹೂಡಿ, ಹಾಡನ್ನು ಬಳಸದಂತೆ ತಡೆಯಾಜ್ಞೆ ತಂದಿದ್ದರು.
ಕೇರಳದ ನರ್ಸಿಂಗ್ ವಿದ್ಯಾರ್ಥಿನಿಗೆ ಟಾಲಿವುಡ್ ನಟ ಅಲ್ಲು ಅರ್ಜುನ್ ನೆರವು!
ಆದರೆ ಕೆಲವು ದಿನಗಳ ಹಿಂದಷ್ಟೆ ಕೋಯಿಕ್ಕೊಡ್ ಜಿಲ್ಲಾ ನ್ಯಾಯಾಲಯದಲ್ಲಿ ವಾದ ಮಾಡಿದ 'ಕಾಂತಾರ' ಪರ ವಕೀಲರು ತಡೆಯಾಜ್ಞೆ ತೆರವುಗೊಳಿಸಲು ಸಫಲರಾಗಿದ್ದರು. ಈ ಗೆಲುವನ್ನು 'ಕಾಂತಾರ' ಚಿತ್ರತಂಡ ಸೇರಿದಂತೆ ಹಲವರು ಸಂಭ್ರಮಿಸಿದ್ದರು. ಆದರೆ ಆ ಸಂಭ್ರಮ ಹೆಚ್ಚು ಸಮಯ ಉಳಿದಿಲ್ಲ. ಈಗ ಕೇರಳ ಹೈಕೋರ್ಟ್ ಮತ್ತೆ 'ಕಾಂತಾರ' ಸಿನಿಮಾದ ವಿರುದ್ಧ ಆದೇಶ ನೀಡಿದೆ.
ತಡೆ ನೀಡಿದ ಕೇರಳ ಹೈಕೋರ್ಟ್
ಕೋಯಿಕ್ಕೊಡ್ ನ್ಯಾಯಾಲಯದಲ್ಲಿ ಹಿನ್ನೆಲೆ ಉಂಟಾದ ಬೆನ್ನಲ್ಲೆ ಥೈಕ್ಕುಡಂ ಬ್ರಿಡ್ಜ್ ಸಂಗೀತ ತಂಡ ಹೈಕೋರ್ಟ್ಗೆ ಅಪೀಲು ಹೋಗಿದ್ದು, ಅಲ್ಲಿ ಕೋಯಿಕ್ಕೊಡ್ ನೀಡಿದ್ದ ಆದೇಶಕ್ಕೆ ತಡೆ ನೀಡಲಾಗಿದೆ. ಅಲ್ಲದೆ ಸಿನಿಮಾದ ನಿರ್ಮಾಣ ಸಂಸ್ಥೆ ಹೊಂಬಾಳೆ, ನಟ-ನಿರ್ದೇಶಕ ರಿಷಬ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ನಿರ್ಮಾಪಕ ವಿಜಯ್ ಕಿರಗಂದೂರು, ಒಟಿಟಿ ಸಂಸ್ಥೆ ಅಮೆಜಾನ್, ಸಂಗೀತ ಸಂಸ್ಥೆ ಸ್ಪಾಟಿಫೈ, ಕೇರಳದಲ್ಲಿ 'ಕಾಂತಾರ' ವಿತರಣೆ ಮಾಡಿರುವ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಇನ್ನೂ ಕೆಲವರಿಗೆ ನೊಟೀಸ್ ಜಾರಿ ಮಾಡಿದೆ.
'ವರಾಹ ರೂಪಂ' ಹಾಡು ಬಳಸದಂತೆ ಆದೇಶ
ಕೋಯಿಕ್ಕೊಡ್ ಹಾಗೂ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯ ಮೊದಲಿಗೆ 'ವರಾಹ ರೂಪಂ' ಹಾಡು ಬಳಸದಂತೆ ಆದೇಶ ಹೊರಡಿಸಿತ್ತು. ಆದರೆ ಕೆಲವು ದಿನಗಳ ಹಿಂದಷ್ಟೆ ಕೋಯಿಕ್ಕೊಡ್ ಜಿಲ್ಲಾ ನ್ಯಾಯಾಲಯವು ತಡೆಯಾಜ್ಞೆ ತೆರವುಗೊಳಿಸಿತ್ತು. ಆದರೆ ಈಗ ಕೋಯಿಕ್ಕೊಡ್ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಕೇರಳ ಹೈಕೋರ್ಟ್ ರದ್ದು ಮಾಡಿದೆ. ಆ ಮೂಲಕ 'ಕಾಂತಾರ'ಗೆ ಧಕ್ಕಿದ್ದ ಸಣ್ಣ ಮುನ್ನಡೆ ಸಹ ಇಲ್ಲದಂತಾಗಿದೆ.
ಪಾಲಕ್ಕಾಡ್ ನ್ಯಾಯಾಲಯದಲ್ಲಿ ವಿಚಾರಣೆ
ಇನ್ನು ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯದಲ್ಲಿಯೂ ಇದೇ ವಿಷಯವಾಗಿ ಪ್ರಕರಣ ಚಾಲ್ತಿಯಲ್ಲಿದೆ. ಅಲ್ಲಿ ಮಾತೃಭೂಮಿ ಪಬ್ಲಿಕೇಶನ್ಸ್ ಆಂಡ್ ಪ್ರಿಂಟರ್ಸ್ ಸಂಸ್ಥೆಯು 'ಕಾಂತಾರ'ದ ವಿರುದ್ಧ ದೂರು ದಾಖಲಿಸಿದೆ. ಥೈಕ್ಕುಡಂ ಬ್ರಿಡ್ಸ್ನ 'ನವರಸಂ' ಹಾಡಿನ ಹಕ್ಕು ಈ ಸಂಸ್ಥೆಯ ಬಳಿ ಇದೆ. ಆದರೆ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯದಲ್ಲಿ ಯಾವುದೇ ಹೊಸ ಆದೇಶ ಹೊರಬಿದ್ದಿಲ್ಲ. ಅಲ್ಲಿ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದೆ.
'ವರಾಹ ರೂಪಂ' ಹೊಸ ಸಂಗೀತದೊಂದಿದೆ
ಕೋಯಿಕ್ಕೊಡ್ ಹಾಗೂ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯಗಳು 'ವರಾಹ ರೂಪಂ' ಹಾಡು ಬಳಸದಂತೆ ತಡೆಯಾಜ್ಞೆ ನೀಡಿದ ಬಳಿಕ 'ವರಾಹ ರೂಪಂ'ನ ಸಂಗೀತವನ್ನು ಬದಲಾಯಿಸಲಾಗಿದೆ. ಅಮೆಜಾನ್ ಒಟಿಟಿಯಲ್ಲಿ 'ವರಾಹ ರೂಪಂ' ಸಿನಿಮಾದ ಹೊಸ ಸಂಗೀತವನ್ನು ಅಳವಡಿಸಿ ಸಿನಿಮಾ ಪ್ರಸಾರ ಮಾಡಲಾಗುತ್ತಿದೆ. ಸ್ಪೋಟಿಫೈನಲ್ಲಿಯೂ ಸಹ ಹೊಸ ಹಾಡನ್ನೇ ಪ್ರಸಾರ ಮಾಡಲಾಗುತ್ತಿದೆ.