Don't Miss!
- News ಕನ್ನಡ ನಾಮಫಲಕ: ಬಲವಂತದ ಕ್ರಮ ಬೇಡ ಎಂದ ಕೋರ್ಟ್
- Finance ಟಿಸಿಎಸ್ನಿಂದ ಭಾರತೀಯ ಸೇನೆಗೆ ಸೇರಿದ ಲೆಫ್ಟಿನೆಂಟ್ ದಿವ್ಯಾಂಗಿನಿ ತ್ರಿಪಾಠಿ
- Technology ಇಂದು ಮಾರುಕಟ್ಟೆಗೆ ಬರಲಿದೆ ಗೆಸ್ಚರ್ ಮೂಲಕ ಕೆಲಸ ಮಾಡುವ ಸ್ಮಾರ್ಟ್ಫೋನ್!
- Automobiles Tata Nexon: ಮುಂಬರಲಿರುವ ಟಾಟಾ ನೆಕ್ಸಾನ್ ಸಿಎನ್ಜಿ ಕಾರಿನ ವಿಶೇಷತೆಗಳಿವು.. ಹೆಚ್ಚು ಮೈಲೇಜ್!
- Sports IPL 2024: ಐಪಿಎಲ್ ಆರಂಭಕ್ಕೂ ಮುನ್ನವೇ 'ಸೂಪರ್' ಭವಿಷ್ಯ; ಆರ್ಸಿಬಿ ಈ ಬಾರಿ ಕಪ್ ಗೆಲ್ಲುತ್ತದಾ? ಇಲ್ಲಿದೆ ಉತ್ತರ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುಬೈನ ಬುರ್ಜ್ ಖಲೀಫಾದಲ್ಲಿ ಕನ್ನಡದ ಹಾಡು ಹಾಡಿದ ಕಿಚ್ಚ ಸುದೀಪ್
ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಟೈಟಲ್ ಲೋಗೋ ಅನಾವರಣಗೊಳ್ಳಲಿದೆ. ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ ಕಿಚ್ಚ ಸುದೀಪ್ ಅವರ ಭಾವಚಿತ್ರವೂ ಪ್ರದರ್ಶನವಾಗಲಿದೆ.
Recommended Video
ಈ ಮೂಲಕ ಪ್ರಪಂಚದ ಅತಿ ದೊಡ್ಡ ಕಟ್ಟಡದ ಮೇಲೆ ಕನ್ನಡ ನಟನೊಬ್ಬರ ಕಟೌಟ್ ಹಾರಾಡುವುದು ಸ್ಯಾಂಡಲ್ವುಡ್ ಪಾಲಿಗೆ ಹೆಮ್ಮೆಯ ವಿಚಾರ. ಈ ಸಂಭ್ರಮಕ್ಕೆ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದೆ.
ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಸುದೀಪ್ ಈ ಸಾಂಗ್ ಹಾಡ್ತಾರೆ ಯಾಕೆ.?
ಈ ನಡುವೆ ದುಬೈನಲ್ಲಿ ಕನ್ನಡತನ ಮೆರೆದ ಕಿಚ್ಚ ಸುದೀಪ್ ಜೊತೆ ವಿಷ್ಣುವರ್ಧನ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಟೈಟಲ್ ಲೋಗೋ ಅನಾವರಣ ಹಿನ್ನೆಲೆ ಸ್ಥಳೀಯ ಮಾಧ್ಯಮಗಳ ಜೊತೆ ಸುದೀಪ್ ಅವರ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವೇಳೆ ದುಬೈನ ಸ್ಥಳೀಯ ಮಾಧ್ಯಮಗಳು ಸುದೀಪ್ ಅವರ ಸಂದರ್ಶನ ಮಾಡಿದೆ. ದುಬೈ ಪತ್ರಕರ್ತೆಯ ಸಂದರ್ಶನದ ವೇಳೆ ಡಾ ವಿಷ್ಣುವರ್ಧನ್ ನಟನೆಯ 'ಜಿಮ್ಮಿಗಲ್ಲು' ಚಿತ್ರದ 'ತುತ್ತು ಅನ್ನ ತಿನ್ನೋಕೆ' ಹಾಡನ್ನು ಹಾಡಿದ್ದಾರೆ. ಇದು ನನ್ನ ನೆಚ್ಚಿನ ನಟ ಹಾಡು ಎಂದು ಸಹ ಹೇಳಿದ್ದಾರೆ.
❤️ Taking Kannada on top of the world #VikrantRonaOnBurjKhalifa pic.twitter.com/sXUSaLuTaL
— 𝐓𝐡𝐞 𝐁𝐢𝐠 𝐋𝐢𝐭𝐭𝐥𝐞 (@The_BigLittle) January 31, 2021
ಕಿಚ್ಚ ಸುದೀಪ್ಗೆ ಶುಭಕೋರಿದ ಮಲಯಾಲಂ ಸೂಪರ್ ಸ್ಟಾರ್ ಮೋಹನ್ ಲಾಲ್
ಅಂದ್ಹಾಗೆ, ಸುದೀಪ್ ಅವರು ಜಿಮ್ಮಿಗಲ್ಲು ಚಿತ್ರದ ಹಾಡು ಹಾಡಿರುವುದು ಇದೇ ಮೊದಲಲ್ಲ. ಅನೇಕ ವೇದಿಕೆಗಳಲ್ಲಿ, ಟಿವಿ ಕಾರ್ಯಕ್ರಮಗಳಲ್ಲಿ ಈ ಹಾಡಿ ನನ್ನ ನೆಚ್ಚಿನ ಸಾಂಗ್ ಎಂದಿದ್ದಾರೆ. ಇಂದು ಇನ್ನು ಒಂದು ಹೆಜ್ಜೆ ಮುಂದೆ ಸಾಗಿ ದುಬೈನಲ್ಲಿ ಅತ್ಯಂತ ಎತ್ತರದ ಕಟ್ಟಡದಲ್ಲಿ ನಿಂತು ಈ ಹಾಡು ಹಾಡಿರುವುದು ನಿಜಕ್ಕೂ ಖುಷಿ ತರುವ ವಿಚಾರ.