Don't Miss!
- News ಕೊಳ್ಳೇಗಾಲ ಶಾಸಕರ ಕಾರು ಅಪಘಾತ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಹುತಾತ್ಮ ಉರಿ ಯೋಧ'ರಿಗಾಗಿ ಜನ್ಮಾಚರಣೆ ತ್ಯಜಿಸಿದ ಲತಾಜೀ
ಬಾಲಿವುಡ್ ಚಿತ್ರರಂಗದ ಮಧುರ ಗಾಯಕಿ ಲತಾ ಮಂಗೇಷ್ಕರ್ ಅವರಿಗೆ ಇಂದು (ಸೆಪ್ಟೆಂಬರ್ 28) 87ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಆದ್ರೆ ಎವರ್ ಗ್ರೀನ್ ಗಾಯಕಿ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲವಂತೆ. ಕಾರಣ 'ಉರಿ ಅಟ್ಯಾಕ್'ನಲ್ಲಿ ಜೀವ ತೆತ್ತ 18 ಯೋಧರು.
ಅವರ ಆತ್ಮಕ್ಕೆ ಶಾಂತಿ ಕೋರಿರುವ ಮಧುರ ಗಾಯಕಿ ಲತಾ ಮಂಗೇಷ್ಕರ್, ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಅದ್ಭುತ ಗಾಯಕಿ ಲತಾಜೀ ಅವರು, ನಮ್ಮ ದೇಶಕ್ಕಾಗಿ ಹೋರಾಡುತ್ತಿರುವ ಯೋಧರಿಗಾಗಿ ಹಾಡಿದ 'ಯೇ ಮೇರೆ ವತನ್ ಕೀ ಲೋಗೋನ್' ಹಾಡನ್ನು, ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಾವು ಸ್ಮರಿಸಬಹುದು.
ಅಂದಹಾಗೆ ಸಂಗೀತ ಲೋಕದಲ್ಲಿ ಹೊಸ ಇತಿಹಾಸ ಬರೆದಿರುವ ಗಾಯಕಿ ಲತಾ ಮಂಗೇಷ್ಕರ್ ಅವರು, ನಮ್ಮ ಕನ್ನಡದಲ್ಲಿ ಒಂದೇ ಹಾಡನ್ನು ಹಾಡಿದ್ದಾದರೂ, ಅದು ಭಾರಿ ಖ್ಯಾತಿ ಗಳಿಸಿದ್ದು ಮಾತ್ರ ನಿಜ.[ನನಗಿನ್ನೂ 18 ವರ್ಷ: ಲತಾ ಮಂಗೇಶ್ಕರ್]
1967ರ 'ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ' ಚಿತ್ರದ 'ಬೆಳ್ಳನೆ ಬೆಳಗಾಯಿತು' ಎಂಬ ಏಕೈಕ ಮಧುರ ಗೀತೆ ಈಗಲೂ ಕೆಲವರ ಮೊಬೈಲ್ ನಲ್ಲಿ ರಿಂಗ್ ಟೋನ್ ಆದ್ರೆ, ಇನ್ನೂ ಕೆಲವರಿಗೆ ಬೆಳಗಿನ ಜಾವ ಮಧುರವಾದ ಆಲಾಪನಾ ಆಲರಾಂ ಆಗಿದೆ.
ಯಾವುದೇ ಅಬ್ಬರ-ಆಡಂಬರ ಇಲ್ಲದೆ ಸೈಲೆಂಟ್ ಆಗಿರುವ 'ಬೆಳ್ಳನೆ ಬೆಳಗಾಯಿತು' ಎಂಬ ಹಾಡಿನಲ್ಲಿರುವ, ಲತಾಜೀ ಅವರ ಧ್ವನಿಗೆ ಯಾರೂ ಸರಿ ಸಾಟಿ ಇಲ್ಲ. ಇಂದು ಆ ಲೆಜೆಂಡರಿ ಗಾಯಕಿಯ ಜನ್ಮ ದಿನದ ನೆನಪಿನಲ್ಲಾದರೂ 'ಬೆಳ್ಳನೆ ಬೆಳಗಾಯಿತು' ಹಾಡನ್ನು ನಾವೆಲ್ಲಾ ಕೇಳಲೇಬೇಕು.[ಟ್ವಿಟ್ಟರ್ ಹಕ್ಕಿಯ ಹಿಂದೆ ಹಾಡು ಹಕ್ಕಿ ಲತಾ ಮಂಗೇಷ್ಕರ್]
ಇದೀಗ ಲತಾಜೀ ಅವರು ಹಾಡಿರುವ ಕನ್ನಡದ ಏಕೈಕ ಹಾಡು 'ಬೆಳ್ಳನೆ ಬೆಳಗಾಯಿತು' ನಿಮಗಾಗಿ, ನಿಮ್ಮ ಫಿಲ್ಮಿಬೀಟ್ ಕನ್ನಡ ಹೊತ್ತು ತಂದಿದೆ. ಲತಾ ಮಂಗೇಷ್ಕರ್ ಅವರಿಗೆ 87ನೇ ಹುಟ್ಟುಹಬ್ಬದ ಶುಭಾಶಯ ಕೋರುತ್ತಾ, ಈ ಸುಮಧುರ ಹಾಡನ್ನು ಒಂದ್ಸಾರಿ ಆಲಿಸಿ ಬಿಡಿ......[ಲತಾ ಮಂಗೇಷ್ಕರ್ ಜೊತೆ ಹಜಾರಿಕಾಗೆ ಅಫೇರ್!]