Don't Miss!
- News ಡಿಕೆ ಸುರೇಶ್ ಆಪ್ತರಿಗೆ ಐಟಿ ಶಾಕ್; ಬಿಜೆಪಿ ದುಡ್ಡು ಹಂಚುತ್ತಿರುವುದು ಗೊತ್ತಿಲ್ಲವೆ? : ಡಿ ಕೆ ಶಿವಕುಮಾರ್ ಹೇಳಿದ್ದೇನು?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಕಲಚೇತನ ಹಾಡು ಹಕ್ಕಿಗಳಿಗೆ ಸುವರ್ಣ ಅವಕಾಶ
ಹಾಡೊಂದ ಹಾಡುವೆ ನೀ ಕೇಳು ಮಗುವೆ...ಈ ಹಾಡಿನ ಹಿಂದೆ ತಕ್ಷಣ ನೆನಪಿಗೆ ಬರುವುದು ಗಾನ ಕೋಗಿಲೆ ಪಿ.ಬಿ.ಶ್ರೀನಿವಾಸ್. ಪಿ.ಬಿ.ಎಸ್ ನಮ್ಮೊಂದಿಗೆ ಇಲ್ಲದೆ ಇದ್ರೂ ಅವ್ರ ಮಧುರ ಹಾಡುಗಳ ನೆನಪು ಪದೇ ಪದೇ ಬರುತ್ತದೆ. ಆದ್ರೆ ಈಗ ಪಿ.ಬಿ.ಎಸ್ ಹಾಡುಗಳನ್ನು ಮತ್ತೆ ಮೆಲುಕು ಹಾಕಲು ಅವಕಾಶ ಸಿಕ್ಕಿದೆ.
ಸೆಪ್ಟಂಬರ್ 22 ರಂದು ಪಿ.ಬಿ.ಎಸ್ ಹಾಡುಗಳು ಮತ್ತೆ ಎಲ್ಲರ ಮನ ಕಲುಕಲಿದೆ. ದೃಷ್ಟಿ ಹಾಗೂ ಅಂಗ ವಿಕಲ ಚೇತನರಿಗೆ ಸಮರ್ಥನಂ ಸಂಸ್ಥೆಯ ಸಹಯೋಗದೊಂದಿಗೆ ದೂರದರ್ಶನ ಓಪನ್ ಸಿಂಗಿಂಗ್ ಕಾಂಪಿಟೇಷನ್ ನಡೆಸಲಿದೆ. "ಮಧುರ ಮಧುರ ವೀ ಮಂಜುಳ ಗಾನ"ದ ವಿಶೇಷ ಸಂಚಿಕೆಯನ್ನು ಚಂದನ ಸಮರ್ಥನಂ ಟ್ರಸ್ಟ್ ಸಹಯೋಗದೊಂದಿಗೆ ನಡೆಸಲಿದೆ.
ಈ ವಿಶೇಷ ಸಂಚಿಕೆಯಲ್ಲಿ 22 ಸೋಲೊ ಹಾಗೂ ಡ್ಯುಯೆಟ್ ಹಾಡುಗಳು ಮತ್ತು 4 ಡ್ಯಾನ್ಸ್ ಸೀಕ್ವೆನ್ಸ್ ಗಳು ಸೇರಿಕೊಂಡಿದೆ. ಗುರುರಾಜ್ ಮ್ಯೂಸಿಕ್ ಗ್ರೂಪ್ ಹಿನ್ನೆಲೆ ಸಂಗೀತವನ್ನು ನೀಡಲಿದೆ. ದಯಾನಂದ್ ಸಾಗರ್ ಕಾಲೇಜು ಆಡಿಟೋರಿಯಂನಲ್ಲಿ ಈ ಸ್ಪರ್ಧೆ ನಡೆಯಲಿದೆ. ನೀವು ರೆಡಿನಾ..?
ಈ ವಿಶೇಷ ಸಂಚಿಕೆಯ ಆಯ್ಕೆ ಪ್ರಕ್ರಿಯೆ ಸಮರ್ಥನಂ ಟ್ರಸ್ಟ್ ನ ಹೆಚ್ಎಸ್ಆರ್ ಲೇ ಔಟ್ ನಲ್ಲಿ ಆಗಸ್ಟ್ 18ರಂದು ನಡೆಯಲಿದೆ. ಪಿ.ಬಿ.ಎಸ್ ಹಾಡುಗಳ ಅಭಿಮಾನಿ ಹಾಗೂ ಸಮರ್ಥನಂ ಟ್ರಸ್ಟ್ ನ ಫೌಂಡರ್ ಮ್ಯಾನೇಜಿಂಗ್ ಟ್ರಸ್ಟಿ ಜಿ.ಕೆ. ಮಹಾಂತೇಶ್ ಈ ಸ್ಪರ್ಧೆಯ ಬಗ್ಗೆ ಹಲವು ಕನಸುಗಳನ್ನು ಇಟ್ಟುಕೊಂಡಿದ್ದಾರೆ.
"ಪಿ.ಬಿ. ಶ್ರೀನಿವಾಸ್ ಅವರಂತಹ ಮಹಾನ್ ಗಾಯಕನಿಗೆ ಗೌರವ ನೀಡುವುದಕ್ಕಾಗಿ ಇಂತಹ ಸ್ಪರ್ಧೆಗಳನ್ನು ನಡೆಸುತ್ತಾ ಇರೋದು ಖುಷಿ ಕೊಡುತ್ತಿದೆ. ವಿಕಲ ಚೇತನರ ಪ್ರತಿಭಾ ಪ್ರದರ್ಶನಕ್ಕೆ ದೊಡ್ಡ ವೇದಿಕೆ. ದೃಷ್ಟಿ ಹಾಗೂ ಅಂಗ ವಿಕಲಚೇತನರ ಬದುಕು ಬದಲಾಯಿಸುವ ಕಾರ್ಯಕ್ರಮ ಇದಾಗಲಿ" ಅನ್ನೋದು ಮಹಾಂತೇಶ್ ಆಶಯ.
ಈ ವಿಶೇಷ ಸ್ಪರ್ಧೆಯ ರಿಜಿಸ್ಟ್ರೇಶನ್ ಈಗಾಗಲೇ ಆರಂಭವಾಗಿದೆ. ರಿಜಿಸ್ಟ್ರೇಷನ್ ಅನ್ನು 500 ಸ್ಪರ್ಧಿಗಳಿಗೆ ಮಾತ್ರ ಮೀಸಲು ಮಾಡಲಾಗಿದೆ. ಈ 500 ಸ್ಪರ್ಧಿಗಳ ಪೈಕಿ 2 ಸ್ಪರ್ಧೆಗಳಿಗೆ ತಲಾ 26 ಸ್ಪರ್ಧಿಗಳ 2 ತಂಡವನ್ನು ಅಯ್ಕೆ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆ ಬೆಳಗ್ಗೆ 9 ರಿಂದ ಮಧ್ಯಾಹ್ನದ ತನಕ ಮತ್ತು ಅಪರಾಹ್ನ 3 ಗಂಟೆಯಿಂದ ಮತ್ತೊಂದು 26 ಸ್ಪರ್ಧಿಗಳ ತಂಡದ ಆಯ್ಕೆ ನಡೆಯಲಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ ದೂರದರ್ಶನ ಚಂದನದ ಹೆಚ್ಚುವರಿ ಡೈರೆಕ್ಟರ್ ಜನರಲ್ ಮಹೇಶ್ ಜೋಷಿ, ಸಮರ್ಥನಂ ಟ್ರಸ್ಟ್ ನ ಫೌಂಡರ್ ಮ್ಯಾನೇಜಿಂಗ್ ಟ್ರಸ್ಟಿ ಜಿ.ಕೆ.ಮಹಾಂತೇಶ್ ಜೊತೆಗೆ ಖ್ಯಾತನಾಮ ಹಾಡುಗಾರರು ತೀರ್ಪುಗಾರರಾಗಿ ಆಗಮಿಸಲಿದ್ದಾರೆ. ಪ್ರತಿಭೆಗೆ ಮಾನ್ಯತೆ ಇರುವ ಈ ಶೋ ಗ್ರ್ಯಾಂಡ್ ಗಾಲಾ ಸೆರೆಮನಿ ಮೂಲಕ ಅಂತ್ಯಗೊಳ್ಳಲಿದೆ.
ಮಧುರ ಮಧುರವೀ ಮಂಜುಳಗಾನ 8 ಎಪಿಸೋಡ್ ಗಳ ಮೂಲಕ ಟೆಲಿಕಾಸ್ಟ್ ಆಗಲಿದೆ. ಸೆಪ್ಟಂಬರ್ ತಿಂಗಳ ಅಂತ್ಯದಲ್ಲಿ ಎಪಿಸೋಡ್ ಗಳು ಪ್ರಸಾರಗೊಳ್ಳುವ ನಿರೀಕ್ಷೆ ಇದೆ. ಪ್ರತಿಭಾನ್ವಿತ ವಿಕಲಚೇತನರು ತಮ್ಮ ಹಾಡುಗಾರಿಕೆಯ ಕನಸನನ್ನು ನನಸು ಮಾಡಿಕೊಳ್ಳಲು 8095643973/8095521048/9886995822/ 080-25721444 ಸಂಖ್ಯೆಗಳನ್ನು ಸಂಪರ್ಕಿಸಬಹುದು. ಈ ಕಾರ್ಯಕ್ರಮವನ್ನು ಪ್ರೋತ್ಸಾಹಿಸಲು ಬಯಸುವವರು 9449864699 ಅಥವಾ [email protected] ನ್ನು ಸಂಪರ್ಕಿಸಬಹುದು. (ಒನ್ಇಂಡಿಯಾ ಕನ್ನಡ)