Don't Miss!
- News
ಬೆಂಗಳೂರಿನಲ್ಲಿ ಇಂದು ಬುಧವಾರ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ
- Lifestyle
ಪ್ಲಾಸ್ಟಿಕ್ ಸರ್ಜರಿ ಕುರಿತ 10 ಆಸಕ್ತಿಕರ ಸಂಗತಿಗಳು
- Sports
ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಪಡೆದ ಬುಮ್ರಾ: ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್
- Finance
ಮೇ 17ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಮಾಹಿತಿ ಬಹಿರಂಗ: 528 ಕಿ.ಮೀ ರೇಂಜ್, ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್
- Technology
ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಬಿಡುಗಡೆ! ಡೌನ್ಲೋಡ್ ಮಾಡುವುದು ಹೇಗೆ?
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹಿಂದು ಧಾರ್ಮಿಕ ಭಾವನೆಗೆ ಧಕ್ಕೆ: ಸನ್ನಿ ಲಿಯೋನ್ ಬಂಧಿಸಲು ಒತ್ತಾಯ
ಸನ್ನಿ ಲಿಯೋನ್ ಸೊಂಟ ಕುಣಿಸಿರುವ 'ಮಧುಬನ್' ಹಾಡು ವಿವಾದಕ್ಕೆ ಕಾರಣವಾಗಿದೆ. ಸನ್ನಿ ಲಿಯೋನ್ ನರ್ತಿಸಿರುವ 'ಮಧುಬನ್' ಹಾಡು ಹಿಂದು ಭಾವನೆಗಳಿಗೆ ಧಕ್ಕೆ ತರುತ್ತಿದೆ ಹಾಡನ್ನು ಡಿಲೀಟ್ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಇದೀಗ ಹಾಡಿನ ವಿರುದ್ಧ ಆಕ್ರೋಶ ಹೊರಹಾಕಿರುವ ಮಥುರಾ ಅರ್ಚಕರು ಸನ್ನಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಸನ್ನಿ ಲಿಯೋನ್ರ 'ಮಧುಬನ್' ಹಾಡಿನ ವಿರುದ್ಧ ಮಥುರಾದ ಅರ್ಚಕರು ಪ್ರತಿಭಟನೆ ಮಾಡಿದ್ದು, ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. 'ಮಧುಬನ್' ಎಂಬುದು ಪವಿತ್ರ ಸ್ಥಳ ಮತ್ತು ರಾಧೆ ಕೃಷ್ಣನ ಭಕ್ತೆ, ನರ್ತಕಿ ಅಲ್ಲ. ಹಾಗಿದ್ದೂ 'ಮಧುಬನ್' ಹಾಡಿನಲ್ಲಿ ಸನ್ನಿ ಲಿಯೋನ್ ಗ್ಲಾಮರಸ್ ಆಗಿ ನರ್ತಿಸುತ್ತಿರುವುದು ರಾಧೆಗೆ, ಮಧುಬನ್ಗೆ ಮಾಡಿದ ಅಪಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಡನ್ನು ಹಿಂಪಡೆಯುವ ಜೊತೆಗೆ ಸನ್ನಿ ಲಿಯೋನ್ ಹಾಗೂ ಗಾಯಕಿ ಕನ್ನಿಕಾ ಕಪೂರ್ ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿಯೂ ಸನ್ನಿ ಲಿಯೋನ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, 'ಅರೆಸ್ಟ್ ಸನ್ನಿ ಲಿಯೋನ್' ಟ್ರೆಂಡ್ ಆಗುತ್ತಿದೆ. ಇದರ ಜೊತೆಗೆ ಮಧ್ಯ ಪ್ರದೇಶದ ಸರ್ಕಾರದ ಗೃಹ ಸಚಿವ ನರೋತ್ತಮ ಮಿಶ್ರಾ ಸಹ ಹಾಡಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ''ಸನ್ನಿ ಲಿಯೋನ್ ನರ್ತಿಸಿರುವ ಹಾಡು ಹಿಂದು ಭಾವನೆಗಳಿಗೆ ಧಕ್ಕೆ ತರುತ್ತಿದೆ. ಹಾಡನ್ನು ಹಿಂಪಡೆಯಬೇಕು, ಇಲ್ಲವಾದರೆ ಕಾನೂನು ಕ್ರಮ ಎದುರಿಸಲು ಸಜ್ಜಾಗಿ'' ಎಂದು ಹಾಡನ್ನು ಬಿಡುಗಡೆ ಮಾಡಿದ್ದ ಸಾರೆಗಾಮಾ ಸಂಗೀತ ಸಂಸ್ಥೆಗೆ ಎಚ್ಚರಿಕೆ ನೀಡಿದ್ದರು.
ಸನ್ನಿ ಲಿಯೋನ್ ಅನ್ನು ಬಂಧಿಸಬೇಕೆಂಬ ಆಗ್ರಹದ ಜೊತೆಗೆ ಆಲಿಯಾ ಭಟ್ ಅನ್ನು ಸಹ ಬಂಧಿಸಬೇಕೆಂದು ಕೆಲವರು ಒತ್ತಾಯಿಸಿದ್ದಾರೆ. ಸಿನಿಮಾ ಒಂದರಲ್ಲಿ ಆಲಿಯಾ ಭಟ್ ಸಹ ರಾಧೆಯ ಕುರಿತಾದ ಹಾಡಿಗೆ ನರ್ತಿಸಿದ್ದಾರೆ. ಆ ಹಾಡನ್ನು ನಿಷೇಧಿಸಿ, ಆಲಿಯಾ ಭಟ್ ಅನ್ನು ಬಂಧಿಸಬೇಕೆಂಬ ಒತ್ತಾಯ ಏಕೆ ಕೇಳಿ ಬರುತ್ತಿಲ್ಲ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಇದೀಗ ಸಾರೆಗಾಮಾ ಸಂಗೀತ ಸಂಸ್ಥೆಯು ಹಾಡಿನ ಬಗ್ಗೆ ಸ್ಪಷ್ಟನೆ ನೀಡಿದ್ದು, ''ಮಧುಬನ್ ಹಾಡಿನ ಸಾಹಿತ್ಯ ಮತ್ತು ಹೆಸರನ್ನು ನಾವು ಬದಲಾವಣೆ ಮಾಡುತ್ತೇವೆ. ಈಗಿರುವ 'ಮಧುಬನ್' ಹಾಡು ಎಲ್ಲೆಲ್ಲಿ ಪ್ರಸಾರವಾಗುತ್ತಿದೆಯೋ ಆ ವೇದಿಕೆಗಳಲ್ಲಿ ಹೊಸ ಹಾಡನ್ನು ಹಾಕುತ್ತೇವೆ'' ಎಂದು ಹೇಳಿದೆ.
'ನಾಚೇ ಮಧುಬನ್ಮೆ ರಾಧಿಕಾ' ಎಂಬ ಸಾಹಿತ್ಯ ಉಳ್ಳ ಹಾಡಿನಲ್ಲಿ ಸನ್ನಿ ಲಿಯೋನ್ ಮಾದಕವಾಗಿ ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ಕನ್ನಿಕಾ ಕಪೂರ್ ಹಾಡಿದ್ದಾರೆ. ಸಂಗೀತ ನೀಡಿರುವುದು ಶಾರಿಬ್ ಮತ್ತು ತೋಶಿ. ಹಾಡು ಸಾರೆಗಾಮಾ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಿದ್ದು ಈ ವರೆಗೆ 1 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.