Don't Miss!
- News ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಜಯ್ ಸೇತುಪತಿ ಸಿನಿಮಾದ ಮೇಲೆ ದೂರು ನೀಡಿದ ಇಳಯರಾಜ
ಜನಪ್ರಿಯ ಸಂಗೀತ ನಿರ್ದೇಶಕ ಇಳಯರಾಜ, ವಿಜಯ್ ಸೇತುಪತಿ ನಟಿಸುತ್ತಿರುವ ಹೊಸ ಸಿನಿಮಾ 'ಕಡೈಸಿ ವಿವಸಾಯಿ' ಸಿನಿಮಾದ ವಿರುದ್ಧ ಸಂಗೀತ ನಿರ್ದೇಶಕರ ಸಂಘಕ್ಕೆ ದೂರು ದಾಖಲಿಸಿದ್ದಾರೆ.
'ಕಡೈಸಿ ವಿವಾಸಾಯಿ' ಚಿತ್ರತಂಡವು ನನ್ನ ಗಮನಕ್ಕೆ ತರದೆ ನಾನು ನೀಡಿದ್ದ ಹಿನ್ನೆಲೆ ಸಂಗೀತವನ್ನು ಕೈಬಿಟ್ಟಿದೆ. ಅಲ್ಲದೆ ನನಗೆ ಮಾಹಿತಿ ನೀಡದೆ ಬೇರೆ ಸಂಗೀತ ನಿರ್ದೇಶಕರನ್ನು ತೆಗೆದುಕೊಂಡಿದೆ ಎಂದು ಇಳಯರಾಜ ದೂರಿದ್ದಾರೆ.
'ಕಡೈಸಿ ವಿವಸಾಯಿ' ಸಿನಿಮಾಕ್ಕೆ ಇಳಯರಾಜ ಸಂಗೀತ ನೀಡಿದ್ದರು. ಆದರೆ ಅವರು ನೀಡಿದ್ದ ಸಂಗೀತ ಸಿನಿಮಾದ ನಿರ್ದೇಶಕ ಎಂ ಮಣಿಕಂಠನ್ಗೆ ಇಷ್ಟವಾಗಿಲ್ಲ. ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ನಿರ್ದೇಶಕ ಸೂಚಿಸಿದ್ದಾರೆ. ಆದರೆ ಇದಕ್ಕೆ ಇಳಯರಾಜ ಒಪ್ಪಿಲ್ಲ. ಹಾಗಾಗಿ ಅವರು ನೀಡಿದ ಹಿನ್ನೆಲೆ ಸಂಗೀತವನ್ನು ಕೈಬಿಟ್ಟು, ಸಂತೋಷ್ ನಾರಾಯಣ್ ಹಾಗೂ ರಿಚರ್ಡ್ ಹಾರ್ವಿ ಅವರಿಂದ ಹಿನ್ನೆಲೆ ಸಂಗೀತ ಕೊಡಿಸಿದ್ದಾರೆ. ಇದು ಇಳಯರಾಜ ಆಕ್ರೋಶಕ್ಕೆ ಕಾರಣವಾಗಿದೆ.
'ಕಡೈಸಿ ವಿವಸಾಯಿ' ಸಿನಿಮಾವು ಕೃಷಿ ಕುರಿತ ಸಿನಿಮಾ ಆಗಿದ್ದು, ಸಿನಿಮಾವನ್ನು ಅಲಿರಾಜ ಸುಭಾಸ್ಕರನ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ನಲ್ಲಂದಿ, ಯೋಗಿ ಬಾಬು, ಮುನೀಶ್ವರನ್ ಹಾಗೂ ಇತರರು ನಟಿಸಿದ್ದಾರೆ. ಸಿನಿಮಾದಲ್ಲಿ ವಿಜಯ್ ಸೇತುಪತಿ ಸಹ ನಟಿಸಿದ್ದಾರೆ. ಸಿನಿಮಾ 2018 ರಲ್ಲಿಯೇ ಘೋಷಣೆ ಆಗಿದೆ. ಸಿನಿಮಾದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿದಿದ್ದು, ಮುಂದಿನ ತಿಂಗಳು ಬಿಡಗುಡೆ ಆಗಲಿದೆ.