Don't Miss!
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Lifestyle ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮ್ಮಂದಿರಿಗಾಗಿ ಅನುರಾಧ ಭಟ್ ಹಾಡಿರುವ ಹೊಸ ಹಾಡು ಕೇಳಿ
ಖ್ಯಾತ ಗಾಯಕಿ ಅನುರಾಧ ಭಟ್ ಹಾಡಿರುವ 'ಅಪ್ಪ ಐ ಲವ್ ಯೂ' ಹಾಡು ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲಾಗಿದೆ. ಅಪ್ಪನ ಕುರಿತು ಮೂಡಿ ಬಂದಿದ್ದ ಈ ಹಾಡು ಎಲ್ಲ ಅಪ್ಪಂದಿರಿಗೂ ಅರ್ಪಣೆ ಮಾಡಲಾಗಿತ್ತು.
ಇದೀಗ 'ಅಸತೋಮ ಸದ್ಗಮಯ' ಚಿತ್ರತಂಡ ಎಲ್ಲ ಅಮ್ಮಂದಿರಿಗಾಗಿ ಒಂದು ವಿಶೇಷವಾದ ಹಾಡನ್ನ ಅರ್ಪಣೆ ಮಾಡಿದೆ. ಈ ಹಾಡನ್ನ ಕೂಡ ಅನುರಾಧ ಭಟ್ ಅವರೇ ಹಾಡಿರುವುದು ವಿಶೇಷ. ಸದ್ಯ, ಈ ಹಾಡಿನ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಕೇಳುಗರ ಮೆಚ್ಚುಗೆಗೆ ಪಾತ್ರವಾಗಿದೆ.
ವಹಾಬ್ ಸಲೀಂ ಅವರು ಬರೆದಿರುವ ''ನಾ ತೆರೆದೆ....ತುಂಬಾ ಹಳೆಯ ಪುಟವಾ....''ಎಂಬ ಸಾಲುಗಳು ಈಗ ಸಂಗೀತ ಪ್ರಿಯರ ಕಿವಿಯಲ್ಲಿ ಗುನುಗುತ್ತಿದೆ. ಈ ಅರ್ಥಪೂರ್ಣ ಸಾಲುಗಳಿಗೆ ಗಾಯಕಿ ಅನುರಾಧ ಭಟ್ ಅವರು ಅಷ್ಟೇ ಮುದ್ದಾಗಿ ಜೀವ ತುಂಬಿದ್ದಾರೆ.
ಹೊಸ ಪ್ರತಿಭೆಗಳ 'ಶಕ್ತಿ'ಯಿಂದ ಸಿದ್ಧವಾಗಿರುವ 'ಅಸತೋಮ ಸದ್ಗಮಯ'
ಅಂದ್ಹಾಗೆ, ಇದು ತಾಯಿ ಮಮತೆ, ಪ್ರೀತಿ, ಆರೈಕೆಯ ಬಗ್ಗೆ ಮೂಡಿಬಂದಿರುವ ಹಾಡು. ಈ ಹಾಡಿಗೆ ಸಾಹಿತ್ಯ ಬರೆದಿರುವ ವಹಾಬ್ ಸಲೀಂ ಅವರೇ ಸಂಗೀತ ಒದಗಿಸಿದ್ದಾರೆ.
ಇನ್ನುಳಿದಂತೆ ರಾಧಿಕಾ ಚೇತನ್, ಕಿರಣ್ ರಾಜ್, 'ಬಿಗ್ ಬಾಸ್' ಖ್ಯಾತಿಯ ಲಾಸ್ಯ, 'ಡ್ರಾಮಾ ಜೂನಿಯರ್ಸ್' ಖ್ಯಾತಿ ಚಿತ್ರಾಲಿ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
'ಅಸತೋಮ ಸದ್ಗಮಯ' ಟ್ರೈಲರ್-ಸಾಂಗ್ಸ್ ಹಿಟ್ ಈಗ ಸಿನಿಮಾ ಟೈಮ್
ರಾಜೇಶ್ ವೇಣೂರು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಅಶ್ವಿನ್ ಜೆ ಪಿರೇರಾ ಬಂಡವಾಳ ಹೂಡಿದ್ದಾರೆ. ಕಿಶೋರ್ ಕುಮಾರ್ ಅವರ ಛಾಯಾಗ್ರಾಹಣ ಹಾಗೂ ರವಿಚಂದ್ರನ್ ಅವರ ಸಂಕಲನ ಚಿತ್ರಕ್ಕಿದೆ. ಜೂನ್ 6 ರಂದು 'ಅಸತೋಮ ಸದ್ಗಮಯ' ಸಿನಿಮಾ ರಾಜ್ಯಾದ್ಯಂತ ತೆರೆಕಾಣುತ್ತಿದೆ.