Don't Miss!
- News karnataka Rain: ಕರ್ನಾಟಕದಲ್ಲಿ ಮುಂದಿನ ಮೂರು ದಿನ ದಾರಕಾರ ಮಳೆ: ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣನ ಅರ್ಭಟ!
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಬ್ಬಬ್ಬಾ ಕಡೆಗೂ ಪೂಜಾಗಾಂಧಿಗೆ 'ಕಲ್ಯಾಣಮಸ್ತು'
ಇನ್ನೊಂದು ಮದುವೆನಾ ಎಂದು ಹುಬ್ಬೇರಿಸಬೇಡಿ. ಈಗಾಗಲೆ ಮದುವೆ ವಿಚಾರದಲ್ಲಿ ಪೂಜಾಗಾಂಧಿ ಸಾಕಷ್ಟು ನೊಂದಿದ್ದಾರೆ. ಅದು ಯಾಕೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸುದೀರ್ಘ ಸಮಯದಿಂದ ಡಬ್ಬದಲ್ಲೇ ಕೂತಿದ್ದ ಪೂಜಾಗಾಂಧಿ ಅಭಿನಯದ 'ಕಲ್ಯಾಣಮಸ್ತು' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ಈ ಚಿತ್ರದ ಆಡಿಯೋ ಬುಧವಾರ (ನ.27) ಮಾರುಕಟ್ಟೆಗೆ ಬಿಡುಗಡೆಗೆಯಾಗುತ್ತಿದೆ. ಯಾಕೆ ಇಷ್ಟು ದಿನ 'ಕಲ್ಯಾಣಮಸ್ತು' ಚಿತ್ರಕ್ಕೆ ಶುಭಗಳಿಗೆ ಕೂಡಿಬಂದಿರಲಿಲ್ಲ ಎಂಬ ಪ್ರಶ್ನೆಗೆ ಮಾತ್ರ ಉತ್ತರ ನಿಗೂಢವಾಗಿದೆ. ಈಗ ಪೂಜಾಗಾಂಧಿ ಚಿತ್ರಗಳು ವಿವಾದದಲ್ಲಿ ಸಿಕ್ಕಿಕೊಂಡಿವೆ. ದಂಡುಪಾಳ್ಯ ಚಿತ್ರ ಒಂದಷ್ಟು ರಿಲೀಫ್ ಕೊಟ್ಟರೂ ಬೆತ್ತಲೆ ಬೆನ್ನಿನ ಚಿತ್ರಗಳು ಬೇತಾಳದಂತೆ ಕಾಡುತ್ತಲೇ ಇದೆ. [ಸ್ಯಾಂಡಲ್ ವುಡ್ ಅನ್ ಲಕ್ಕಿ ಹುಡ್ಗಿ]
'ಪಟ್ರೆ' ಖ್ಯಾತಿಯ ಅಜಿತ್ ಈ ಚಿತ್ರದ ನಾಯಕ ನಟ. ಆಕ್ಷನ್ ಕಟ್ ಹೇಳಿರುವವರು ಬಿ.ಮಲ್ಲೇಶ್. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಸಹ ನಿರ್ದೇಶಕರೇ ಹೆಣೆದಿದ್ದಾರೆ. ಚಿತ್ರದ ಹೆಸರೇ ಹೇಳುವಂತೆ ಇದೊಂದು ಪಕ್ಕಾ ಫ್ಯಾಮಿಲಿ ಚಿತ್ರ. ಕಾಲೇಜು, ಕ್ಯಾಂಪಸ್ಸು, ಪ್ರೀತಿ ಪ್ರೇಮ ಪ್ರಣಯ ಎಲ್ಲವೂ ಇದೆ.
ಇದಿಷ್ಟೇ ಅಲ್ಲದೆ ತಾಯಿ, ತಂಗಿ ಫ್ಯಾಮಿಲಿ ಸೆಂಟಿಮೆಂಟ್ ಕೂಡ ಇದೆಯಂತೆ. ಚೆನ್ನೈ ಮೂಲದ ಭರತ್ ಸಂಗೀತ ಚಿತ್ರಕ್ಕಿದೆ. ರವಿ ಪ್ರಕಾಶ್, ಅನಂತನಾಗ್, ಸಿತಾರ, ಅವಿನಾಶ್, ಮಾಳವಿಕಾ, ಉಮಾಶ್ರೀ ಸೇರಿದಂತೆ ಹಲವು ತಾರಾಬಳಗ ಚಿತ್ರಕ್ಕಿದೆ. ಈ ಚಿತ್ರವಾದರೂ ಪೂಜಾಗಾಂಧಿ ಪಾಲಿಗೆ ಕೈಹಿಡಿಯುತ್ತಾ ನೋಡಬೇಕು.