Don't Miss!
- News ಕೋವಿಡ್ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಅಪಪ್ರಚಾರ:ಕೆ ಸುಧಾಕರ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಧಾ ಸರ್ಚಿಂಗ್, ರಮಣ ಮಿಸ್ಸಿಂಗ್: ಸೋನು ನಿಗಮ್ ದನಿಯಲಿ, 'ಪಳ ಪಳ ಕಣ್ಣಲಿ'
'ರಾಧಾ ಸರ್ಚಿಂಗ್, ರಮಣ ಮಿಸ್ಸಿಂಗ್' ಸಿನಿಮಾದ ಹೊಸ ಹಾಡೊಂದು ಬಿಡುಗಡೆ ಆಗಿದೆ. ಸೋನು ನಿಗಮ್ ಹಾಡಿರುವ ಈ ಹಾಡು ಗಮನ ಸೆಳೆಯುತ್ತಿದೆ.
'ರಾಧಾ ಸರ್ಚಿಂಗ್, ರಮಣ ಮಿಸ್ಸಿಂಗ್' ಸಿನಿಮಾದ ಚಿತ್ರೀಕರಣ ಕಳೆದ ವರ್ಷದ ಆರಂಭದಲ್ಲಿಯೇ ಮುಗಿದಿದ್ದು, ಸಿನಿಮಾವು ಬಿಡುಗಡೆಗಾಗಿ ಕಾಯುತ್ತಿದೆ. ಕೊರೊನಾ ಕಾರಣದಿಂದಾಗಿ ಬಿಡುಗಡೆ ತಡವಾಗುತ್ತಲೇ ಸಾಗುತ್ತಿದೆ. ಇದೀಗ ಸಿನಿಮಾದ ಸುಮಧುರ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
'ಪಳ ಪಳ ಕಣ್ಣಲ್ಲೇ, ಕಿಲ ಕಿಲ ನಗೆಯಲ್ಲೇ ಮಾಡಿದೆ ಮೋಡಿ' ಎಂಬ ಈ ಯುಗಳ ಗೀತೆಯನ್ನು ಸೋನು ನಿಗಮ್ ಹಾಡಿದ್ದು, ದೊತೆಗೆ ದಾಮಿನಿ ಭಟ್ಲ ಸಹ ದನಿ ನೀಡಿದ್ದಾರೆ.
ರಾಘವ್ ಅವರದ್ದು ಕಾಲೇಜು ಯುವಕನ ಪಾತ್ರವಾಗಿದ್ದು. ಈ ಸಿನಿಮಾದ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಆಕ್ಟಿಂಗ್, ಡ್ಯಾನ್ಸ್ ಕಲಿತಿದ್ದಾರೆ. ತಿಂಗಳುಗಳ ಕಾಲ ಜಿಮ್ ನಲ್ಲಿ ವರ್ಕೌಟ್ ಮಾಡಿದ್ದಾರೆ.
'ರಾಧಾ ಸರ್ಚಿಂಗ್, ರಮಣ ಮಿಸ್ಸಿಂಗ್' ಮಹಿಳಾ ಪ್ರಧಾನ ಸಿನಿಮಾ ಆಗಿದೆ. ಸಿನಿಮಾದಲ್ಲಿ ಅಂತರ್ಧಮೀಯ ಪ್ರೇಮಕತೆ ಸಹ ಇದೆ. ಸಿನಿಮಾದ ನಾಯಕ ಹಿಂದು, ನಾಯಕಿ ಕ್ರಿಶ್ಚಿಯನ್.
ಇಬ್ಬರೂ ಪ್ರೀತಿಸುತ್ತಿರುತ್ತಾರೆ, ಆಗ ದುರುಳರ ಕಣ್ಣು ಇವರ ಪ್ರೀತಿಯ ಮೇಲೆ ಬೀಳುತ್ತದೆ. ನಾಯಕನ ಅಪಹರಣವಾಗುತ್ತದೆ. ನಾಯಕನ ಅಪಹರಣ ಮಾಡಲು ಕಾರಣವೇನು? ನಾಯಕನನ್ನು ಅಪಹರಣ ಮಾಡಿದ್ದು ಯಾರು? ಏಕೆ? ರಮಣ ಅಪಹರಣವಾದ ಮೇಲೆ ರಾಧಾ ಪಡುವ ಪಾಡೇನು? ಅವನ್ನು ಹೇಗೆ ಬಿಡಿಸಿಕೊಂಡು ಬರುತ್ತಾಳೆ ಎಂಬುದು ಸಿನಿಮಾದ ಕತೆ.
ಸಿನಿಮಾವನ್ನು ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಹಾಸನಗಳಲ್ಲಿ ಸುಮಾರು 60 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದಲ್ಲಿ ತೆಲುಗಿನ ಗೋಪಿನಾಥ್ ಭಟ್, ಯಮನಾ ಶ್ರೀನಿಧಿ, ರೇಖಾ, ಜಾನ್, ಪ್ರದೀಪ್ ತಿಪಟೂರು, ಚಿರಾಗ್ ಗೌಡ, ಗರು ಹೆಗಡೆ ನಟಿಸಿದ್ದಾರೆ. ಸಿನಿಮಾದ ನಿರ್ದೇಶನದ ಜೊತೆಗೆ ಸಾಹಸ ನಿರ್ದೇಶನವೂ ಶ್ರೀಕಾಂತ್ ಅವರದ್ದೇ.
ಯಶಸ್ವಿ ಶಂಕರ್ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಾಹಕರಾಗಿದ್ದಾರೆ. ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿಯೇ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸಿನಿಮಾದ ಬಾಕಿ ಕೆಲಸಗಳು ಸಹ ಪೂರ್ತಿಯಾಗಿವೆ. ಆದರೆ ಕೊರೊನಾ ಕಾರಣದಿಂದಾಗಿ ಈವರೆಗೆ ಸಿನಿಮಾ ಬಿಡುಗಡೆ ಆಗಿಲ್ಲ.