Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಶ್ ರಿಲೀಸ್ ಮಾಡಿದ್ದ 'ರಾಜರಥ' ಹಾಡಿಗೆ ಸಿಕ್ಕಿದೆ ದೊಡ್ಡ ರೆಸ್ಪಾನ್ಸ್
'ರಾಜರಥ' ಸಿನಿಮಾದ ಮೂರನೇ ಹಾಡು ಕೆಲ ದಿನಗಳ ಹಿಂದೆಯಷ್ಟೆ ರಿಲೀಸ್ ಆಗಿತ್ತು. ನಟ ಯಶ್ ಈ ಹಾಡನ್ನು ಬಿಡುಗಡೆ ಮಾಡಿದ್ದರು. ಈಗ ಆ ಹಾಡು ಯೂ ಟ್ಯೂಬ್ ನಲ್ಲಿ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದಿದೆ.
'ಬೆಂಕಿಯಲ್ಲಿ ಅರಳಿದ ಹೂ' ಚಿತ್ರದ 'ಮುಂದೆ ಬನ್ನಿ..' ಎಂಬ ಸೂಪರ್ ಹಿಟ್ ಹಾಡನ್ನು ಮತ್ತೆ ರೀಕ್ರಿಯೇಟ್ ಮಾಡಲಾಗಿದೆ. ಈ ಹಾಡಿಗೆ ಹೊಸ ಮ್ಯೂಸಿಕ್ ಟಚ್ ನೀಡಿದ್ದು, ಹಾಡು ಕೇಳುವುದಕ್ಕೆ ಹಿತವಾಗಿದೆ. ಅಂದು ಕಮಲ್ ಹಾಸನ್ ಹಾಡಿದ್ದ ಈ ಹಾಡನ್ನು ಇಂದು ನಿರೂಪ್ ಬಂಡಾರಿ ಮತ್ತೆ ಹಾಡಿದ್ದಾರೆ. ಈ ಹಾಡಿನಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಅವರ ಧ್ವನಿ ಇದೆ. ಜೊತೆಗೆ ಸಿನಿಮಾದ ಸಂಗೀತವನ್ನು ಅನೂಪ್ ನಿರ್ವಹಿಸಿದ್ದಾರೆ.
'ರಾಜರಥ' ಸಿನಿಮಾ 'ರಂಗಿತರಂಗ' ನಂತರ ಭಂಡಾರಿ ಸಹೋದರರು ಮಾಡುತ್ತಿರುವ ಎರಡನೇ ಸಿನಿಮಾವಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಪುನೀತ್ ರಾಜ್ ಕುಮಾರ್ ಸಿನಿಮಾದ ಒಂದು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅವಂತಿಕಾ ಶೆಟ್ಟಿ, ರವಿಶಂಕರ್, ತಮಿಳು ನಟ ಆರ್ಯ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ತಿಂಗಳ 23 'ರಾಜರಥ' ಪ್ರಯಾಣ ಶುರು ಆಗಲಿದೆ.