Don't Miss!
- News DK Shivakumar: ಕಾಂಗ್ರೆಸ್ ಭವಿಷ್ಯದಲ್ಲಿ ನನ್ನನ್ನು ಸಿಎಂ ಮಾಡಲಿದೆ
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಗಾಯಕಿ ಅನನ್ಯ ಭಟ್ ಹಾಡು ಕೇಳಿ ಕಣ್ಣೀರು ಹಾಕಿದ ಸದ್ಗುರು
ಕಳೆದ ಶುಕ್ರವಾರ ಈಶ ಫೌಂಡೇಶನ್ ವತಿಯಿಂದ ಸದ್ಗುರು ಜಗ್ಗಿ ವಾಸುದೇವ್ ಶಿವರಾತ್ರಿ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಕನ್ನಡದ ಗಾಯಕಿ ಅನನ್ಯ ಭಟ್ ಸಹ ಭಾಗಿಯಾಗಿದ್ದರು. ತಮಿಳುನಾಡಿನ ಕೊಯಿಮತ್ತೂರಿನಲ್ಲಿ ಕಾರ್ಯಕ್ರಮ ನಡೆದಿತ್ತು.
ಸಂಗೀತ ಕಾರ್ಯಕ್ರಮಗಳಿಂದ ಕೂಡಿದ್ದ ವೇದಿಕೆಯಲ್ಲಿ ಕನ್ನಡ ಗಾಯಕಿ ಅನನ್ಯ ಭಟ್ ಹಾಡು ಹಾಡಿದರು. 'ಸೋಜಿಗದ ಸೂಜಿ ಮಲ್ಲಿಗೆ..' ಹಾಡನ್ನು ಜನರ ಮುಂದೆ ಪ್ರಸ್ತುತ ಪಡಿಸಿದರು. ಅನನ್ಯ ಅದ್ಬುತವಾಗಿ ಹಾಡು ಹಾಡಿದ್ದು, ಎಲ್ಲರಿಗೂ ಬಹಳ ಇಷ್ಟವಾಯ್ತು.
ಮಾಲಿವುಡ್ ಗೆ ಕಾಲಿಟ್ಟ ಕನ್ನಡದ ಸಂಗೀತ ನಿರ್ದೇಶಕ.!
ಹಾಡು ಕೇಳುತ್ತಾ ಸದ್ಗುರು ಕಳೆದು ಹೊದರು. ಹಾಡು ಮುಗಿಯುವ ಹೊತ್ತಿಗೆ ಅವರ ಮನ ತುಂಬಿ ಬಂದಿದ್ದು. ಖುಷಿಯಿಂದ ಸದ್ಗುರು ಕಣ್ಣೀರು ಹಾಕಿದರು. ಅನನ್ಯ ಧ್ವನಿಯನ್ನು ಮೆಚ್ಚಿಕೊಂಡರು. ಅಂದಹಾಗೆ, ಅನನ್ಯ ಭಟ್ ಹಾಡಿರುವ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮನ ಮುಟ್ಟುವ 'ರುದ್ರಿ' ಹಾಡುಗಳು: ಸಂಗೀತ ನಿರ್ದೇಶಕ ಸಾಧು ಕೋಕಿಲ ಸಂದರ್ಶನ
ಅನನ್ಯ ಭಟ್ 'ಸೋಜಿಗದ ಸೂಜಿ ಮಲ್ಲಿಗೆ..' ಹಾಡಿನ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. 'ಕೆಜಿಎಫ್' ಸೇರಿದಂತೆ ಅನೇಕ ಸಿನಿಮಾ ಹಾಡುಗಳನ್ನೂ ಅನನ್ಯ ಹಾಡಿದ್ದಾರೆ. 'ರಾಮಾ ರಾಮಾ ರೇ' ಸಿನಿಮಾದ 'ನಮ್ಮ ಕಾಯೋ ದೇವರೇ..' ಹಾಡಿಗೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.