Don't Miss!
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಲ್ಲು ಅರ್ಜುನ್ ಸಿನಿಮಾದ ಹಾಡು ಕದ್ದ ಸಲ್ಮಾನ್ ಖಾನ್: ಯಾವುದು ಆ ಹಾಡು?
ನಟ ಸಲ್ಮಾನ್ ಖಾನ್ ಅಭಿನಯದ 'ರಾಧೆ' ಸಿನಿಮಾದ ಟ್ರೇಲರ್ ಇಂದಷ್ಟೆ ಯುಟ್ಯೂಬ್ನಲ್ಲಿ ಬಿಡುಗಡೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ಸದ್ದು ಮಾಡುತ್ತಿದೆ.
ಉದ್ದವಾದ ಟ್ರೇಲರ್ನಲ್ಲಿ ಹಲವು ಆಕ್ಷನ್ ದೃಶ್ಯಗಳು ಸಲ್ಮಾನ್ ಅವರ ಖಡಕ್ ಡೈಲಾಗ್ಗಳು, ಹಾಸ್ಯದ ತುಣುಕುಗಳು ಜೊತೆಗೆ ಹಾಡುಗಳ ಝಲಕ್ ಅನ್ನು ತೋರಿಸಲಾಗಿದೆ.
ಟ್ರೇಲರ್ನಲ್ಲಿರುವ 'ಸೀಟಿಮಾರ್' ಹಾಡನ್ನು ಕೇಳಿದವರಿಗೆ 'ಈ ಹಾಡನ್ನು ಎಲ್ಲೋ ಕೇಳಿದಂತಿದೆಯಲ್ಲ?' ಎಂಬ ಅನುಮಾನ ಮೂಡುತ್ತಿದೆ. ಹೌದು, ತೆಲುಗಿನಲ್ಲಿ ಇದೇ ಧಾಟಿಯ ಹಾಡಿಗೆ ಅಲ್ಲು ಅರ್ಜುನ್ ಕುಣಿದಿದ್ದರು.
ಅಲ್ಲು ಅರ್ಜುನ್ ನಟಿಸಿರುವ 'ದುವ್ವಾಡ ಜಗನ್ನಾಥ' ಸಿನಿಮಾದಲ್ಲಿ 'ಸೀಟಿಮಾರ್' ಎಂಬ ಮಾಸ್ ಹಾಡೊಂದಿದೆ. ಅದೇ ಮಾದರಿಯ ಹಾಡು 'ರಾಧೆ' ಸಿನಿಮಾದಲ್ಲಿಯೂ ಇದೆ. ಅಲ್ಲು ಅರ್ಜುನ್ ಸಿನಿಮಾದ ಹಾಡನ್ನು 'ರಾಧೆ' ಸಿನಿಮಾಕ್ಕಾಗಿ ಯಥಾವತ್ತು ಭಟ್ಟಿ ಇಳಿಸಲಾಗಿದೆ.
ಅಲ್ಲು ಅರ್ಜುನ್ ಸಿನಿಮಾದಲ್ಲಿದ್ದ ಹಾಡಿನ ಧಾಟಿಯಲ್ಲಿಯೇ ಅದೇ ಸಂಗೀತದಲ್ಲಿಯೇ 'ರಾಧೆ' ಸಿನಿಮಾದ ಹಾಡನ್ನು ಮಾಡಲಾಗಿರುವುದು ಟ್ರೇಲರ್ನಲ್ಲಿ ಗೊತ್ತಾಗುತ್ತಿದೆ.
ಅಲ್ಲು ಅರ್ಜುನ್ ನಟಿಸಿದ್ದ 'ದುವ್ವಾಡ ಜಗನ್ನಾಥ' ಸಿನಿಮಾಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದರು. ಆ ಸಿನಿಮಾದ 'ಸೀಟಿಮಾರ್' ಸಿನಿಮಾ ಸಖತ್ ಹಿಟ್ ಆಗಿತ್ತು. ಈಗ ಅದೇ ಹಾಡನ್ನು 'ರಾಧೆ' ಸಿನಿಮಾಕ್ಕೆ ಬಳಸಿಕೊಳ್ಳಲಾಗಿದ್ದು, ಸಿನಿಮಾದ ಹಾಡುಗಳಿಗೆ ಸಂಗೀತ ನೀಡಿದವರ ಪಟ್ಟಿಯಲ್ಲಿ ದೇವಿ ಶ್ರೀ ಪ್ರಸಾದ್ ಹೆಸರೂ ಸಹ ಇದೆ.
ಸಲ್ಮಾನ್ ಖಾನ್ ಹಲವಾರು ದಕ್ಷಿಣ ಭಾರತದ ಸೂಪರ್ ಹಿಟ್ ಸಿನಿಮಾಗಳನ್ನು ಹಿಂದಿಗೆ ರೀಮೇಕ್ ಮಾಡಿ ಹಿಟ್ ಪಡೆದಿದ್ದಾರೆ. ತಮಿಳಿನ ಸೇತು, ತೆಲುಗಿನ ಪೋಕಿರಿ, ಸ್ಟಾಲಿನ್, ರೆಡಿ, ಕಿಕ್ ಇನ್ನೂ ಹಲವು ಸಿನಿಮಾಗಳ ಹಿಂದಿ ರೀಮೇಕ್ನಲ್ಲಿ ಸಲ್ಮಾನ್ ನಟಿಸಿದ್ದಾರೆ. ಇದೀಗ 'ರಾಧೆ' ಸಿನಿಮಾ ಸಹ ತೆಲುಗು ಸಿನಿಮಾದ ರೀಮೇಕ್ ಎನ್ನಲಾಗುತ್ತಿದೆ ಆದರೆ ಆ ಬಗ್ಗೆ ಚಿತ್ರತಂಡ ಅಧಿಕೃತ ಹೇಳಿಕೆ ನೀಡಿಲ್ಲ. ಸಿನಿಮಾ ಬಿಡುಗಡೆ ಆದ ಬಳಿಕವಷ್ಟೆ ಈ ಬಗ್ಗೆ ಗೊತ್ತಾಗಲಿದೆ. 'ರಾಧೆ' ಸಿನಿಮಾವನ್ನು ನಟ, ನೃತ್ಯ ನಿರ್ದೇಶಕ ಪ್ರಭುದೇವಾ ನಿರ್ದೇಶನ ಮಾಡಿದ್ದಾರೆ.