Don't Miss!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಖ್ಯಾತ ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ನಿಧನ
84 ವರ್ಷ ವಯಸ್ಸಿನ ಶಿವಕುಮಾರ್ ಶರ್ಮಾ ಮುಂಬೈನ ನಿವಾಸದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ''ಅವರು ಆರೋಗ್ಯದಿಂದಲೇ ಇದ್ದರು. ಪ್ರತಿ ವಾರ ಡಯಾಲಿಸಿಸ್ಗೆ ಒಳಗಾಗುತ್ತಿದ್ದರಾದರೂ ಚಟುವಟಿಕೆಯಿಂದಲೇ ಇರುತ್ತಿದ್ದರು. ಮುಂದಿನ ವಾರ ಭೂಪಾಲ್ನಲ್ಲಿ ಸಂತೂರ್ ವಾದ್ಯ ಪ್ರದರ್ಶನ ನೀಡುವವರಿದ್ದರು. ಆದರೆ ಹಠಾತ್ತನೆ ಇಂದು ಬೆಳಿಗ್ಗೆ 9 ಗಂಟೆಗೆ ಆದ ಹೃದಯಾಘಾತದಿಂದ ನಿಧನ ಹೊಂದಿದರು'' ಎಂದು ಅವರು ಕುಟುಂಬದವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಪದ್ಮಶ್ರೀ, ಪದ್ಮ ವಿಭೂಷಣ ಗೌರವಗಳಿಗೆ ಭಾಜನರಾಗಿದ್ದ ಶಿವಕುಮಾರ್ ಶರ್ಮಾ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಸಂಗೀತ, ಸಿನಿಮಾ ಇತರೆ ಕಲಾರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಶಿವಕುಮಾರ್ ಶರ್ಮಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ''ಪಂಡಿತ್ ಶಿವಕುಮಾರ್ ಶರ್ಮಾ ಅವರ ನಿಧನದಿಂದ ನಮ್ಮ ಸಾಂಸ್ಕೃತಿಕ ಜಗತ್ತು ಬಡವಾಗಿದೆ. ಅವರು ಜಾಗತಿಕ ಮಟ್ಟದಲ್ಲಿ ಸಂತೂರ್ ವಾದ್ಯವನ್ನು ಜನಪ್ರಿಯಗೊಳಿಸಿದರು. ಅವರ ಸಂಗೀತ ಮುಂದಿನ ಪೀಳಿಗೆಯನ್ನು ಸ್ಪೂರ್ತಿಗೊಳಿಸುತ್ತಲೇ ಇರುತ್ತದೆ. ಅವರೊಂದಿಗೆ ನಾನು ಕಳೆದ ಕ್ಷಣಗಳನ್ನು, ಆಡಿದ ಮಾತುಗಳನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ'' ಎಂದಿದ್ದಾರೆ.
ಶಿವಕುಮಾರ್ ಶರ್ಮಾ, ಕಾಶ್ಮೀರದಲ್ಲಿ 1938 ರಲ್ಲಿ ಜನಿಸಿದರು. ಎಳವೆಯಲ್ಲಿ ತಬಲಾ ನುಡಿಸುತ್ತಿದ್ದ ಶಿವಕುಮಾರ ಶರ್ಮಾ ನಂತರ ಸಂತೂರ್ ವಾದ್ಯದತ್ತ ಆಕರ್ಷಿತರಾಗಿ ಅದನ್ನೇ ಅಭ್ಯಾಸ ಮಾಡಿದರು. ತಮ್ಮ ಹದಿಮೂರನೇಯ ವಯಸ್ಸಿನಲ್ಲಿಯೇ ಶಿವಕುಮಾರ ಶರ್ಮಾ ಮುಂಬೈನಲ್ಲಿ ಸಂತೂರ್ ವಾದ್ಯದ ಸಂಗೀತ ಪ್ರದರ್ಶನ ನೀಡಿದ್ದರು.
ಭಾರತ ಸಂಗೀತ ಕ್ಷೇತ್ರದ ದಂತಕತೆ ಹರಿಪ್ರಸಾದ್ ಚೌರಾಸಿಯಾ ಅವರೊಟ್ಟಿಗೆ ಸೇರಿ ಹಲವಾರು ಹಿಂದಿ ಸಿನಿಮಾಗಳಿಗೆ ಸಂಗೀತವನ್ನು ಶಿವಕುಮಾರ್ ಶರ್ಮಾ ನೀಡಿದ್ದಾರೆ. 'ಸಿಲ್-ಸಿಲಾ', 'ಫಾಸ್ಲೆ', 'ಚಾಂದಿನಿ' ಶಾರುಖ್ ಖಾನ್ ನಟನೆಯ 'ಡರ್' ಇನ್ನೂ ಹಲವು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಸಿನಿಮಾ ಸಂಗೀತ ಅಲ್ಲದೆ, ಸಂತೂರ್ ವಾದನದ ಹಲವು ಆಲ್ಬಂಗಳನ್ನು ಶಿವಕುಮಾರ್ ಶರ್ಮಾ ತಂದಿದ್ದಾರೆ. ಜೊತೆಗೆ ವಿದೇಶಗಳಲ್ಲಿ ಅಸಂಖ್ಯ ಸಂಗೀತ ಪ್ರದರ್ಶನಗಳನ್ನು ನೀಡಿದ್ದಾರೆ.
ಶಿವಕುಮಾರ್ ಶರ್ಮಾ ಅವರಿಗೆ ಪದ್ಮಶ್ರೀ, ಪದ್ಮವಿಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ದೇಶ, ವಿದೇಶಗಳಲ್ಲಿ ಹಲವಾರು ಪ್ರಶಸ್ತಿಗಳು, ಗೌರವಗಳು ಸಂದಿವೆ.