Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Sathish Ninasam: ತಾಯಿ ನೆನೆದು 'ಅಮ್ಮ' ಎಂದು ನೀನಾಸಂ ಸತೀಶ್
ತನ್ನದೇ ವಿಶಿಷ್ಟ ಅಭಿನಯ ಶೈಲಿಯಿಂದ ಮೋಡಿ ಮಾಡಿರುವವರು ನಟ ನೀನಾಸಂ ಸತೀಶ್. ಪ್ರತಿ ಸಿನಿಮಾದಲ್ಲೂ ವಿಭಿನ್ನ ಪಾತ್ರದ ಮೂಲಕವೇ ಗಮನ ಸೆಳೆದಿರುವ ನೀನಾಸಂ ಸತೀಶ್ ಹಲವು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಅಂತೆಯೇ ಇತ್ತೀಚೆಗೆ ಸತೀಶ್ ವಿಡಿಯೋ ಆಲ್ಬಂ ಸಾಂಗ್ ಮಾಡಿದ್ದು, ಅಶರೀರವಾಣಿ ಎಂದು ಹೆಸರಿಟ್ಟಿದ್ದರು. ಈ ಆಲ್ಬಂ ಸಾಂಗ್ನಲ್ಲಿ ಸ್ವತಃ ನೀನಾಸಂ ಸತೀಶ್ ಮಗಳು ಮೊದಲ ಬಾರಿಗೆ ನಟಿಸಿದ್ದರು. ಈ ಹಾಡು ಕೂಡ ಸಾಕಷ್ಟು ವೈರಲ್ ಆಗಿತ್ತು.
ಇದೀಗ ಮತ್ತೊಂದು ಹಾಡನ್ನು ನೀನಾಸಂ ಸತೀಶ್ ಹೊರತಂದಿದ್ದಾರೆ. ನೀನಾಸಂ ಸತೀಶ್ ಮೊದಲಿನಿಂದಲೂ ತಾಯಿ ಪ್ರೀತಿಯಲ್ಲೇ ಬೆಳೆದವರು. ಅನೇಕ ಬಾರಿ ತನ್ನ ತಾಯಿಯ ವರ್ಣನೆಯನ್ನು ಸತೀಶ್ ಮಾಡಿದ್ದಾರೆ. ಇತ್ತೀಚೆಗೆ ನೀನಾಸಂ ಸತೀಶ್ ತಾಯಿ ಅನಾರೋಗ್ಯದ ನಿಮಿತ್ತ ಮೃತಪಟ್ಟಿದ್ರು. ಹೀಗಾಗಿ ಅದೇ ನೋವಿನಲ್ಲೇ ಕೆಲ ದಿನ ಶೂಟಿಂಗ್ನಿಂದಲೂ ಬ್ರೇಕ್ ತೆಗೆದುಕೊಂಡಿದ್ದರು ಸತೀಶ್. ತಾಯಿಯ ಮೇಲಿನ ಪ್ರೀತಿ ಮತ್ತು ಅವರನ್ನು ಕಳೆದುಕೊಂಡಿರುವ ನೋವನ್ನು ಈ ಹಾಡಿನ ಮೂಲಕ ಹೊರತಂದಿದ್ದಾರೆ.
KGF 2 : 'ಕೆಜಿಎಫ್ 2' ಮತ್ತು 'ಬೀಸ್ಟ್' ಚಿತ್ರಕ್ಕಿಲ್ಲ ಸ್ಟಾರ್ ವಾರ್, ಫ್ಯಾನ್ಸ್ ಲೆಕ್ಕಾಚಾರವೇ ಬೇರೆ!
ಸತೀಶ್ ತಮ್ಮ ತಾಯಿಯ ಪ್ರೀತಿಯ ಬಗ್ಗೆ 'ಅವ್ವ ಕೇಳೆ' ಎಂಬ ಹಾಡನ್ನು ರಚಿಸಿದ್ದಾರೆ. ಈ ಹಾಡು ರಿಲೀಸ್ ಆಗಿ ಯೂಟ್ಯೂಬ್ನಲ್ಲಿ ಸಾಕಷ್ಟು ಸೌಂಡ್ ಮಾಡುತ್ತಿದೆ. ಈಗಾಗಲೇ ಸಾವಿರಾರು ಮಂದಿ ನೋಡಿ ಈ ಹಾಡನ್ನು ಮೆಚ್ಚಿಕೊಂಡಿದ್ದಾರೆ. 'ಅವ್ವ ಕೇಳೆ' ಹಾಡನ್ನು ಸತೀಶ್ ಅವರೇ ಬರೆದಿದ್ದು, ಸ್ವತ: ಸತೀಶ್ ಹಾಡಿದ್ದಾರೆ. ಸತೀಶ್ ಜೊತೆ ಪುತ್ರಿ ಮನಸ್ವಿತ ಕೂಡ ಧ್ವನಿ ನೀಡಿರುವುದು ವಿಶೇಷ. ಪೂರ್ಣಚಂದ್ರ ತೇಜಸ್ವಿ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು, ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಈ ಹಾಡನ್ನು ಮೆಚ್ಚಿ ಸತೀಶ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ.
'ಅವ್ವ ಕೇಳೇ' ನಾನು ಕಂಡ ನನ್ನವ್ವನನ್ನು ನಾಲ್ಕು ಪದಗಳಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನವೇ, ಈ ಹಾಡು ಎಂದಿರುವ ನೀನಾಸಂ ಸತೀಶ್ ಈ ಹಾಡಿನಲ್ಲಿ ತಾಯಿಯ ಬಗ್ಗೆ ವರ್ಣನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ 'ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಸೇರಿದಂತೆ ಹಲವು ಮಹಿಳೆಯರು ತಮ್ಮ ಸಾಮಾಜಿಕ ಕೆಲಸಗಳಿಂದಾಗಿ ಇತಿಹಾಸ ಸೇರಿದ್ದಾರೆ. ಆದರೆ ಪ್ರತಿ ಮನೆಯಲ್ಲಿಯೂ ಪ್ರತಿ ಮಹಿಳೆಯೂ ಸಾಧಕಳೇ ಆಗಿರುತ್ತಾಳೆ. ಮನೆ, ಹೊಲ, ಮಕ್ಕಳು ಹೀಗೆ ಎಲ್ಲವನ್ನೂ ನೋಡಿಕೊಂಡು ಜೀವನ ನಡೆಸುತ್ತಿರುತ್ತಾಳೆ. ಅಂತಹವಳು ನನ್ನವ್ವ. ನಾನು ಆಕೆಯ ಕಷ್ಟವನ್ನು ಕಣ್ಣಾರೆ ನೋಡಿದ್ದೆ. ಆಕೆಗೆ ಎಷ್ಟೇ ಕಷ್ಟವಿದ್ದರೂ ನಮ್ಮನ್ನೆಲ್ಲಾ ಅದ್ಭುತವಾಗಿ ಸಾಕಿದವಳು. ಇದೇ ರೀತಿ ಹಲವು ಮಹಿಳೆಯರು ಇರುತ್ತಾರೆ. ಅವರಿಗೆ ಈ ಹಾಡು ಅರ್ಪಣೆ' ಎಂದು ಹೇಳಿದ್ದಾರೆ ನೀನಾಸಂ ಸತೀಶ್.