Don't Miss!
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸರಿಗಮಪ' ದೀಕ್ಷಾಗೆ ಸಿಕ್ಕಿದೆ ಸಿನಿಮಾದಲ್ಲಿ ಹಾಡುವ ಅವಕಾಶ
Recommended Video
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸರಿಗಮಪ' ಕಾರ್ಯಕ್ರಮದ ಕಳೆದ ಸೀಸನ್ ಸಾಕಷ್ಟು ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿತು. ಅದೇ ಕಾರಣಕ್ಕೆ ಈಗಾಗಲೇ ಸರಿಗಮಪ ಸೀಸನ್ 13 ರಲ್ಲಿ ಭಾಗವಹಿಸಿದ್ದ ಅನೇಕರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ಸಿಕ್ಕಿತ್ತು. ಈಗ ಗಾಯಕಿ ದೀಕ್ಷಾ ರಾಮಕೃಷ್ಣ ಕೂಡ ಒಂದು ಸಿನಿಮಾ ಹಾಡನ್ನು ಹಾಡಿದ್ದಾರೆ.
'ಸರ್ಕಾರ್' ಎಂಬ ಹೊಸ ಸಿನಿಮಾದಲ್ಲಿ ದೀಕ್ಷಾ ರಾಮಕೃಷ್ಣ ಒಂದು ಹಾಡನ್ನು ಹಾಡಿದ್ದಾರೆ. ಈ ಚಿತ್ರದ 'ಹೇಳದೆ ಕಾರಣ..' ಎಂಬ ಹಾಡಿಗೆ ದೀಕ್ಷಾ ಧ್ವನಿಯಾಗಿದ್ದಾರೆ. ಇದೊಂದು ಮೆಲೋಡಿ ಹಾಡಾಗಿದ್ದು, ದೀಕ್ಷಾ ಧ್ವನಿಗೆ ಹಾಡು ತುಂಬ ಚೆನ್ನಾಗಿ ಸೂಟ್ ಆಗಿದೆ. ಒಂದು ವಾರದ ಹಿಂದೆ ಈ ಹಾಡು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಸಂಗೀತ ಪ್ರೇಮಿಗಳ ಮೆಚ್ಚುಗೆ ಗಳಿಸಿದೆ. ಸತೀಶ್ ಅರ್ಯನ್ ಸಂಗೀತ ಮತ್ತು ರವೀಂದ್ರ ಮುದ್ದಿ ಸಾಹಿತ್ಯ ಈ ಹಾಡಿನಲ್ಲಿದೆ.
2 ದಿನದಲ್ಲಿ 2 ಸಿನಿಮಾ ಹಾಡು ಹಾಡಿದ ಮೆಹಬೂಬ್ ಸಾಬ್!
ಅಂದಹಾಗೆ, 'ಸರಿಗಮಪ' ಸೀಸನ್ 13 ಕಾರ್ಯಕ್ರಮ ಉಳಿದ ಸ್ಪರ್ಧಿಗಳಾದ ಮೆಹಮೂಬ್ ಸಾಬ್ ಮತ್ತು ಸಂಚಿತ್ ಹೆಗ್ಡೆ ಈಗಾಗಲೇ ಸಿನಿಮಾ ಜರ್ನಿ ಶುರು ಮಾಡಿದ್ದಾರೆ. ಸಂಚಿತ್ ಹೆಗ್ಡೆ 'ಕಾಲೇಜ್ ಕುಮಾರ್', 'ಚಮಕ್', 'ಟಗರು' ಸೇರಿದಂತೆ ಸ್ಟಾರ್ ಸಿನಿಮಾಗಳ ಹಾಡಿಗೆ ಧ್ವನಿಯಾಗಿದ್ದಾರೆ. ಅರ್ಜುನ್ ಜನ್ಯ ತಮ್ಮ ಸಂಗೀತ ನಿರ್ದೇಶನದಲ್ಲಿ ಮೆಹಬೂಬ್ ಸಾಬ್ ಮತ್ತು ಸಂಚಿತ್ ಹೆಗ್ಡೆ ಇಬ್ಬರಿಗೆ ಹಾಡುವ ಅವಕಾಶ ನೀಡಿದ್ದರು.