Don't Miss!
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- News ನಾಲ್ಕು ಗೋಡೆಗಳ ಮಧ್ಯೆ ಆಗಿರುವ ಚರ್ಚೆ ಬಹಿರಂಗವಾಗಿ ಹೇಳೋದಕ್ಕೆ ಆಗಲ್ಲ: ಎಂ.ಪಿ.ರೇಣುಕಾಚಾರ್ಯ ಹೀಗೆ ಹೇಳಿದ್ಯಾಕೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಣೆಯ ಮೇಲೆ ಗಾಯ! ಗಾಯಕಿ ವಾಣಿ ಜಯರಾಂ ಸಾವಿನ ಬಗ್ಗೆ ಅನುಮಾನ
ಖ್ಯಾತ ಗಾಯಕಿ ವಾಣಿ ಜಯರಾಂ ಇಂದು (ಜನವರಿ 04) ತಮಿಳುನಾಡಿನ ಚೆನ್ನೈನ ನುಂಗಂಬಾಕ್ಕಂನಲ್ಲಿನ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಆದರೆ ಪೊಲೀಸರು ವಾಣೀ ಜಯರಾಂ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಪತಿಯಿಂದ ದೂರಾಗಿ ಒಬ್ಬರೇ ಡೌನ್ಟೌನ್ ಅಪಾರ್ಟ್ಮೆಂಟ್ನಲ್ಲಿ ವಾಣಿ ಜಯರಾಂ ವಾಸಿಸುತ್ತಿದ್ದರು. ಎಂದಿನಂತೆ ಇಂದು ಅವರ ಮನೆಯ ಕೆಲಸದವರು ಮನೆಗೆ ಬಂದು ಹಲವು ಬಾರಿ ಕಾಲಿಂಗ್ ಬೆಲ್ ಒತ್ತಿದರೂ ಸಹ ಯಾರೂ ಬಾಗಿಲು ತೆಗೆದಿಲ್ಲ. ಹಾಗಾಗಿ ವಾಣಿ ಜಯರಾಂ ಅವರ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಸಿದ್ಧ ಹಿನ್ನೆಲೆ ಗಾಯಕಿ ವಾಣಿ ಜಯರಾಂ ನಿಧನ
ಸಂಬಂಧಿಕರು ಬಂದು ಬಾಗಿಲು ಒಡೆದಾಗ ಗಾಯಕಿಯು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಾಣಿ ಜಯರಾಂ ಶವದ ಸುತ್ತ ರಕ್ತ ಹರಿದಿದ್ದಾಗಿಯೂ ಸಹ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿದ್ದು, ವಾಣಿ ಜಯರಾಂ ಅವರ ಸಾವನ್ನು ಅನುಮಾನಸ್ಪದ ಎಂದು ದಾಖಲಿಸಿಕೊಂಡಿದ್ದಾರೆ.
ವಾಣಿ ಜಯರಾಂ ಅವರ ಹಣೆಯ ಮೇಲೆ ಗಾಯವೊಂದು ಆಗಿದ್ದು, ಇದು ವಾಣಿ ಜಯರಾಂ ಸಾವಿನ ಬಗ್ಗೆ ಅನುಮಾನ ಉಂಟಾಗುವಂತೆ ಮಾಡಿದೆ.
ಪತಿಯಿಂದ ದೂರಾಗಿದ್ದ ವಾಣಿ ಜಯರಾಂ ಅವರಿಗೆ ಮಕ್ಕಳು ಸಹ ಇರಲಿಲ್ಲ. ಒಬ್ಬರೇ ಇದ್ದ ಅವರನ್ನು ಹಣಕ್ಕಾಗಿ ಏನಾದರೂ ಕೊಲ್ಲಲಾಗಿದೆಯೇ? ಎಂಬ ಅನುಮಾನ ಸಹ ಇದ್ದು, ಥೌಸಂಡ್ಸ್ ಲೈಟ್ ಪೊಲೀಸ್ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಾಣಿ ಜಯರಾಂ ಅವರು 19 ಭಾಷೆಗಳಲ್ಲಿ 10,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ಅಂತೂ 1971 ರಿಂದ ತೀರ ಇತ್ತೀಚಿನ ವರೆಗೂ ಹಲವು ಹಾಡುಗಳನ್ನು ಹಾಡಿದ್ದಾರೆ. ಕನ್ನಡದ ಹಲವು ನಟಿಯರಿಗೆ ವಾಣಿ ಜಯರಾಂ ಧ್ವನಿ ನೀಡಿದ್ದಾರೆ. ಎಸ್ಪಿ ಬಾಸುಬ್ರಹ್ಮಣ್ಯಂ, ಡಾ ರಾಜ್ಕುಮಾರ್ ಸೇರಿದಂತೆ ಹಲವರೊಟ್ಟಿಗೆ ವಾಣಿ ಜಯರಾಂ ಹಾಡು ಹಾಡಿದ್ದಾರೆ.