Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಿರಿಕ್ಸ್ ಬರೆಯೋಕೆ 2 ಕೋಟಿ ಖರ್ಚು ಮಾಡಿದ ಟೆಕ್ಕಿ
ಅವರೊಬ್ಬರು ಜವಳಿನಾಡು ದಾವಣಗೆರೆಯ ಸಾಫ್ಟ್ ವೇರ್ ಎಂಜಿನಿಯರ್. ಅವರಿಗೆ ಸಾಹಿತ್ಯ ಅಂದ್ರೆ ಅತಿಯಾದ ಆಸಕ್ತಿ. ಆಸಕ್ತಿ ಮಾತ್ರವಲ್ಲ ಸಾಹಿತ್ಯದಲ್ಲಿ ಆ ಶಕ್ತಿನೂ ಇತ್ತು. ಆಸಕ್ತಿ ಆ ಶಕ್ತಿ ಸೇರಿದ್ರೆ ತಡೆಯೋ ಗಂಡು ಯಾರು ಅಂತ ಆರು ವರ್ಷ ಕನ್ನಡ ಚಿತ್ರರಂಗದ ಜೊತೆ ಸುತ್ತಿದ್ರು. ಲಿರಿಕ್ಸ್ ಬರೀತೀನಿ ಅಂದ್ರು.
ಸಿನಿಮಾ ಸಾಹಿತ್ಯ ಬರೆಯೋದು ಅಂದ್ರೆ ಸುಮ್ನೇನಾ ಅದಕ್ಕೂ ಬ್ಯಾಗ್ರೌಂಡ್, ಒಂದಿಷ್ಟು ನೇಮು ಇಲ್ಲದಿದ್ರೆ ಗಾಡ್ ಫಾದರ್ ಯಾವ್ದಾದ್ರೂ ಬೇಕು. ಅದ್ಯಾವುದೂ ಈ ಎಂಜಿನಿಯರ್ ಹತ್ತಿರ ಇರ್ಲಿಲ್ಲ. ಆದರೆ ಒಂದು ಖಂಡಿತಾ ಇತ್ತು. ಅದು ಸಿನಿಮಾ ಸಾಹಿತ್ಯ ಬರೆಯೋ ತಾಕತ್ತು. [ಸಿಡಿ ರೂಪದಲ್ಲಿ ಪಿ ಕಾಳಿಂಗರಾಯರ ಹಾಡುಗಳು]
ಅಂದಹಾಗೆ ಆ ಸಿನಿಮಾ ಹೆಸ್ರು 'ಈ ದಿಲ್ ಹೇಳಿದೆ ನೀ ಬೇಕಂತ'. ಆ ಸಾಫ್ಟ್ ವೇರ್ ಎಂಜಿನಿಯರ್ ಹೆಸರು ಎಸ್. ಶ್ರೀಧರ್ (ಸಾಯಿಕೃಷ್ಣ ಎಂಟರ್ ಪ್ರೈಸಸ್). ಚಿತ್ರದಲ್ಲಿನ ಏಳು ಹಾಡುಗಳನ್ನು ಅವರೇ ಬರೆದಿದ್ದಾರೆ. ತಾವೇ ಸಿನಿಮಾ ಮಾಡಿದ್ರು ಈಗ ತಾವೇ ಬರೆದ ಲಿರಿಕ್ಸ್ ಕೇಳಿ ಖುಷಿಯಾಗಿದ್ದಾರೆ. ಸಂಗೀತ ಪ್ರಿಯರು ಫುಲ್ ಥ್ರಿಲ್ಲಾಗಿದ್ದಾರೆ.
ಕೆ.ಟಿ.ಎಂ ಶ್ರೀನಿವಾಸ ಆಕ್ಷನ್ ಕಟ್ ಹೇಳಿರುವ ಚಿತ್ರದ ಪಾತ್ರವರ್ಗದಲ್ಲಿ ಅವಿನಾಶ್ ನರಸಿಂಹರಾಜು, ಶ್ರೀ ಶ್ರುತಿ, ಸುರೇಶ್ ಮಂಗಳೂರು, ವಿದ್ಯಾ ಮೂರ್ತಿ, ನಾಗೇಂದ್ರ ಶಾ, ಕುಮುದಾ ಹಾಗೂ ಮಿತ್ರ ಮುಂತಾದವರಿದ್ದಾರೆ. ಹೊಸಬರ ರೊಮ್ಯಾಂಟಿಕ್ ಚಿತ್ರ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ.