Don't Miss!
- Lifestyle ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಿರಿಕ್ಸ್ ಬರೆಯೋಕೆ 2 ಕೋಟಿ ಖರ್ಚು ಮಾಡಿದ ಟೆಕ್ಕಿ
ಅವರೊಬ್ಬರು ಜವಳಿನಾಡು ದಾವಣಗೆರೆಯ ಸಾಫ್ಟ್ ವೇರ್ ಎಂಜಿನಿಯರ್. ಅವರಿಗೆ ಸಾಹಿತ್ಯ ಅಂದ್ರೆ ಅತಿಯಾದ ಆಸಕ್ತಿ. ಆಸಕ್ತಿ ಮಾತ್ರವಲ್ಲ ಸಾಹಿತ್ಯದಲ್ಲಿ ಆ ಶಕ್ತಿನೂ ಇತ್ತು. ಆಸಕ್ತಿ ಆ ಶಕ್ತಿ ಸೇರಿದ್ರೆ ತಡೆಯೋ ಗಂಡು ಯಾರು ಅಂತ ಆರು ವರ್ಷ ಕನ್ನಡ ಚಿತ್ರರಂಗದ ಜೊತೆ ಸುತ್ತಿದ್ರು. ಲಿರಿಕ್ಸ್ ಬರೀತೀನಿ ಅಂದ್ರು.
ಸಿನಿಮಾ ಸಾಹಿತ್ಯ ಬರೆಯೋದು ಅಂದ್ರೆ ಸುಮ್ನೇನಾ ಅದಕ್ಕೂ ಬ್ಯಾಗ್ರೌಂಡ್, ಒಂದಿಷ್ಟು ನೇಮು ಇಲ್ಲದಿದ್ರೆ ಗಾಡ್ ಫಾದರ್ ಯಾವ್ದಾದ್ರೂ ಬೇಕು. ಅದ್ಯಾವುದೂ ಈ ಎಂಜಿನಿಯರ್ ಹತ್ತಿರ ಇರ್ಲಿಲ್ಲ. ಆದರೆ ಒಂದು ಖಂಡಿತಾ ಇತ್ತು. ಅದು ಸಿನಿಮಾ ಸಾಹಿತ್ಯ ಬರೆಯೋ ತಾಕತ್ತು. [ಸಿಡಿ ರೂಪದಲ್ಲಿ ಪಿ ಕಾಳಿಂಗರಾಯರ ಹಾಡುಗಳು]
ಅಂದಹಾಗೆ ಆ ಸಿನಿಮಾ ಹೆಸ್ರು 'ಈ ದಿಲ್ ಹೇಳಿದೆ ನೀ ಬೇಕಂತ'. ಆ ಸಾಫ್ಟ್ ವೇರ್ ಎಂಜಿನಿಯರ್ ಹೆಸರು ಎಸ್. ಶ್ರೀಧರ್ (ಸಾಯಿಕೃಷ್ಣ ಎಂಟರ್ ಪ್ರೈಸಸ್). ಚಿತ್ರದಲ್ಲಿನ ಏಳು ಹಾಡುಗಳನ್ನು ಅವರೇ ಬರೆದಿದ್ದಾರೆ. ತಾವೇ ಸಿನಿಮಾ ಮಾಡಿದ್ರು ಈಗ ತಾವೇ ಬರೆದ ಲಿರಿಕ್ಸ್ ಕೇಳಿ ಖುಷಿಯಾಗಿದ್ದಾರೆ. ಸಂಗೀತ ಪ್ರಿಯರು ಫುಲ್ ಥ್ರಿಲ್ಲಾಗಿದ್ದಾರೆ.
ಕೆ.ಟಿ.ಎಂ ಶ್ರೀನಿವಾಸ ಆಕ್ಷನ್ ಕಟ್ ಹೇಳಿರುವ ಚಿತ್ರದ ಪಾತ್ರವರ್ಗದಲ್ಲಿ ಅವಿನಾಶ್ ನರಸಿಂಹರಾಜು, ಶ್ರೀ ಶ್ರುತಿ, ಸುರೇಶ್ ಮಂಗಳೂರು, ವಿದ್ಯಾ ಮೂರ್ತಿ, ನಾಗೇಂದ್ರ ಶಾ, ಕುಮುದಾ ಹಾಗೂ ಮಿತ್ರ ಮುಂತಾದವರಿದ್ದಾರೆ. ಹೊಸಬರ ರೊಮ್ಯಾಂಟಿಕ್ ಚಿತ್ರ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ.