ಅಂಧರ ವಿಶ್ವಕಪ್ ಕ್ರಿಕೆಟ್ಗಾಗಿ ಎಸ್ಪಿಬಿ ಸಂಗೀತ ಸುಧೆ

ಬೆಂಗಳೂರು ಅರಮನೆ ಮೈದಾನದಲ್ಲಿ ಎಸ್ಪಿಬಿ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿ ಸಂಗ್ರಹವಾದ ಹಣ ಅಂಧರ ಕ್ರಿಕೆಟ್ ಟೂರ್ನಿಗೆ ಬಳಕೆಯಾಗಲಿದೆ. ಎಸ್ಪಿಬಿ ಅವರು ತಮ್ಮ ಸುಮಧುರ ಕಂಠದಿಂದ ನೆರೆದಿದ್ದ ಎಲ್ಲ ಪ್ರೇಕ್ಷಕರನ್ನು ಮನರಂಜಿಸಿದರು.
ಅವರ ಒಂದು ಸಂಗೀತದ ಸವಿ ಅಲ್ಲಿ ನೆರೆದಿದ್ದ ಎಲ್ಲ ವಿಕಲಚೇತನರಿಗೆ ಸ್ಫೂರ್ತಿದಾಯಕವಾಗಿ ಮತ್ತು ಅವರ ಸಬಲೀಕರಣಕ್ಕೆ ಎಸ್.ಪಿ.ಬಿಯವರಿಗಿರುವ ಕಳಕಳಿಯನ್ನು ಎತ್ತಿ ತೋರುವಂತ ಕಾರ್ಯಕ್ರಮ ಇದಾಗಿತ್ತು. ಇಂತಹ ವಿಶೇಷ ಕಾರ್ಯಕ್ರಮಕ್ಕೆ ಸಾವಿರಾರು ಜನ ಎಸ್ಪಿಬಿ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗದ ಎಲ್ಲ ಕಲಾವಿದರು ಭಾಗವಹಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸ್ಫೂರ್ತಿ ತುಂಬಿದರು.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮಹಾಂತೇಶ ಜಿ.ಕೆ ಅವರು, "ಟಿ-20 ಅಂಧರ ವಿಶ್ವಕಪ್ ಗೆ ತಾವೆಲ್ಲ ಬೆಂಬಲವನ್ನು ನೀಡಿ ಈ ಕಾರ್ಯಕ್ರಮಕ್ಕೆ ಆಗಮಿಸಿರುವುದು ಅತೀವ ಸಂತೋಷದ ವಿಷಯ. ಕ್ರೀಡಾ ಕ್ಷೇತ್ರದಲ್ಲಿ ಅಂಧರ ಪ್ರತಿಭೆಯನ್ನು ಜನಪ್ರಿಯಗೊಳಿಸುವಲ್ಲಿ ಈ ಕಾರ್ಯಕ್ರಮ ಪ್ರಮುಖ ವೇದಿಕೆಯಾಗಿದೆ" ಎಂಬ ತಮ್ಮ ಅಂತರಾಳದ ಮಾತನ್ನು ಬಿಚ್ಚಿಟ್ಟರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಬಿಎಂಪಿ ಮೇಯರ್ ವೆಂಕಟೇಶಮೂರ್ತಿ ಅವರು ಅಂಧರ ಟಿ-20 ವಿಶ್ವಕಪ್ ಲಾಂಛನವನ್ನು ಅನಾವರಣಗೊಳಿಸಿದರು. ಅವರೊಂದಿಗೆ ಎಸ್.ಪಿ.ಬಾಲಸುಬ್ರಮಣ್ಯಂ, ಮಾಜಿ ಕ್ರಿಕೆಟಿಗರಾದ ಸಯ್ಯದ್ ಕೀರ್ಮಾನಿ ಮತ್ತು ಬಿ.ಎಸ್.ಚಂದ್ರಶೇಖರ್ ಉಪಸ್ಥಿತರಿದ್ದರು.
ಅದೇ ರೀತಿ ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ, ಪದ್ಮಭೂಷಣ ಸಂಗೀತಾ ಕಲಾನಿಧಿ ಆರ್.ಕೆ ಶ್ರೀಕಾಂತನ್, ಪದ್ಮಭೂಷಣ ಡಾ. ಬಿ.ಸರೋಜಾ ದೇವಿ, ಹರ್ಷ ಮತ್ತು ಹರಿ.ಎಲ್.ಖೊಡೆ ಬ್ಯೂಜಿನಸ್ ಐಕಾನ್ ಇವರೆಲ್ಲರ ಉಪಸ್ಥಿತಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸ್ಫೂರ್ತಿ ನೀಡಿತು. (ಒನ್ ಇಂಡಿಯಾ ಕನ್ನಡ)


Click it and Unblock the Notifications











