'ಭರವಸೆಯ ಒಂದು ಬೆಳಕು' ಹಾಡಿನ ಮೂಲಕ ಕೋವಿಡ್ ಯೋಧರಿಗೆ ಕೃತಜ್ಞತೆ

ಪ್ರಸ್ತುತ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಇಡೀ ದೇಶವೇ ಸಂಕಷ್ಟವನ್ನು ಎದುರಿಸುತ್ತಿದೆ. ಈ ಸಮಯದಲ್ಲಿ ವೈದ್ಯರೊಂದಿಗೆ, ಬಿಬಿಎಂಪಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಮಾಧ್ಯಮ ಹಾಗೂ ಇನ್ನು ಹಲವರು ಸೇವೆ ಸಲ್ಲಿಸುತ್ತಿದ್ದಾರೆ. ಇವರೆಲ್ಲರನ್ನು ಕೊರೊನಾ ವಾರಿಯರ್ಸ್ ಎಂದು ಸರ್ಕಾರ ಪರಿಗಣಿಸಿದೆ.

ಸಾರ್ವಜನಿಕರ ರಕ್ಷಣೆಗೆ ಯೋಧರಂತೆ ನಿಂತು ಹೋರಾಡುತ್ತಿರುವ ಈ ಸಮೂಹಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈವೆಂಟ್ ಮ್ಯಾನೇಜರ್ ಹಾಗೂ ಸಿನಿಮಾ ನಿರ್ಮಾಣ ವ್ಯವಸ್ಥಾಪಕ ಸುಶೀಲ್ ಸಾಗರ್ ಹಾಡೊಂದನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ.

ಮೇ 29 ರಂದು ಸಂಜೆ 6 ಗಂಟೆಗೆ 'ಸಿಟಿ ಸವಾರಿ' ಎನ್ನುವ ಯ್ಯೂಟ್ಯೂಬ್ ಚಾನಲ್‌ನಲ್ಲಿ 'ಭರವಸೆಯ ಒಂದು ಬೆಳಕು' ಎಂಬ ಹಾಡನ್ನು ರಿಲೀಸ್ ಮಾಡಲಾಗಿದೆ. ಈ ಹಾಡನ್ನು ಸುಶೀಲ್ ಸಾಗರ್ ನಿರ್ದೇಶಿಸಿದ್ದಾರೆ.

sushil-sagar-released-song-to-thank-corona-warriors

ಎಸ್ ರಂಜನಿ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಆಕಾಶ್ ಪರ್ವ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಶ್ವಿನ್ ಶರ್ಮ, ಐಶ್ವರ್ಯ ರಂಗರಾಜನ್ ಹಾಗೂ ಆಶಾ ಭಟ್ ಈ ಹಾಡಿಗೆ ದನಿಯಾಗಿದ್ದಾರೆ. ಹಾಡಿಗೆ ಸ್ಕ್ರಿಪ್ಟ್ ರಕ್ಷಿತ ರಚಿಸಿದ್ದು, ಪುನೀತ್ ಛಾಯಾಗ್ರಹಣವಿದೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಎಲ್ಲರೂ ಕೈ ಜೋಡಿಸಿರುವುದಾಗಿ ಸುಶೀಲ್ ಸಾಗರ್ ತಿಳಿಸಿದ್ದಾರೆ.

ಕೊರೊನಾ ವಾರಿಯರ್ಸ್‌ಗೆ ಕೃತಜ್ಞತೆ ಸಲ್ಲಿಸುವ ಈ ವಿಡಿಯೋ ಹಾಡಿನಲ್ಲಿ ನಟ ವಸಿಷ್ಠ ಸಿಂಹ, ಅನುಪಮ ಗೌಡ, ಶೈನ್ ಶೆಟ್ಟಿ, ರಘು ಗೌಡ, ಹಿತಾ ಚಂದ್ರಶೇಖರ್, ಕಿರಣ್ ಶ್ರೀನಿವಾಸ್ ಹಾಗೂ ಚೈತ್ರಾ ವಾಸುದೇವನ್ ಕಾಣಿಸಿಕೊಂಡಿದ್ದಾರೆ.

ಹಾಡನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ

More from Filmibeat

English summary
Event Manager and Film Production manager Sushil Sagar released song to thank Corona Warriors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X